ಹೇಮಂತ್ ಎಂ ರಾವ್ 
ಸಿನಿಮಾ ಸುದ್ದಿ

ನನ್ನ ಮುಂದಿನ ಸಿನೆಮಾದ ಹೆಸರು 'ಅರ್ಧ ಸತ್ಯ' ಅಲ್ಲ: ಹೇಮಂತ ರಾವ್

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾ ನಿರ್ದೇಶನದ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದ ನಿರ್ದೇಶಕ ಹೇಮಂತ್ ಎಂ ರಾವ್, ಕಳೆದ ವಾರ ತಮ್ಮ ನಿರ್ದೇಶನದ ಮುಂದಿನ ಚಿತ್ರದ ಶೀರ್ಷಿಕೆ ಘೋಷಿಸಿ,

ಬೆಂಗಳೂರು: 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾ ನಿರ್ದೇಶನದ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದ ನಿರ್ದೇಶಕ ಹೇಮಂತ್ ಎಂ ರಾವ್, ಕಳೆದ ವಾರ ತಮ್ಮ ನಿರ್ದೇಶನದ ಮುಂದಿನ ಚಿತ್ರದ ಶೀರ್ಷಿಕೆ ಘೋಷಿಸಿ, ಪೋಸ್ಟರ್ ಒಂದನ್ನು ಪ್ರಕಟಿಸಿದ್ದರು. ಈಗ ಆ ಶೀರ್ಷಿಕೆಯನ್ನು ಬದಲಿಸಲು ಅವರು ಮುಂದಾಗಿದ್ದಾರೆ. 
ನಿರ್ದೇಶಕ ಈಗ ನಿರ್ಮಾಪಕ ಕಾರ್ತಿಕ್ ಗೌಡ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಈ ಸಿನೆಮಾವನ್ನು ನಟ ಪುನೀತ್ ರಾಜಕುಮಾರ್ ಸಹನಿರ್ಮಿಸಲಿದ್ದಾರೆ. 
ಈ ವಿಷಯವನ್ನು ಧೃಢೀಕರಿಸಿರುವ ಹೇಮಂತ್ "'ಅರ್ಧ ಸತ್ಯ' ಶೀರ್ಷಿಕೆಯನ್ನು ಈಗಾಗಲೇ ಮತೊಬ್ಬರು ನೊಂದಾಯಿಸಿರುವುದನ್ನು ತಿಳಿದ ಮೇಲೆ ಶೀರ್ಷಿಕೆಯನ್ನು ಬದಲಿಸಲು ಚಿಂತಿಸಿದೆ. ಆದುದರಿಂದ ಶೀಘ್ರದಲ್ಲೇ ಹೊಸ ಶೀರ್ಷಿಕೆ ನಿಶ್ಚಯಿಸಲಿದ್ದೇನೆ" ಎನ್ನುತ್ತಾರೆ. 
"ಅಲ್ಲದೆ, ವಾಣಿಜ್ಯ ಮಂಡಳಿ ಈ ಶೀರ್ಷಿಕೆ ಬಳಸಲು ಅವಕಾಶ ನೀಡಿದ್ದರೂ, ಶೀರ್ಷಿಕೆಯ ಸಲುವಾಗಿ ವಿವಾದದಲ್ಲಿ ಸಿಕ್ಕಿಕೊಳ್ಳಲು ನನಗೆ ಇಷ್ಟವಿಲ್ಲ" ಎನ್ನುತ್ತಾರೆ ಅವರು. 
ಸ್ಕ್ರಿಪ್ಟ್ ಕೆಲವನ್ನು ಬಹುತೇಕ ಮುಗಿಸಿರುವ ಹೇಮಂತ್, ತಾರಾಗಣದ ಆಯ್ಕೆಯಲ್ಲಿ ನಿರತರಾಗಿದ್ದಾರೆ. ಮುಖ್ಯಪಾತ್ರದಲ್ಲಿ ಬಹುತೇಕ ಮನೀಶ್ ರಿಷಿ ನಟಿಸಲಿದ್ದಾರೆ ಎನ್ನಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT