ನಟಿ ಅಮೂಲ್ಯ 
ಸಿನಿಮಾ ಸುದ್ದಿ

ಅಮೂಲ್ಯಾಗೆ ಡಬಲ್ ಧಮಾಕ

ನಟಿ ಅಮೂಲ್ಯ ನಟಿಸಿರುವ 'ಮಾಸ್ತಿ ಗುಡಿ' ಸಿನೆಮಾಗೆ ಸೆನ್ಸಾರ್ ಮಂಡಳಿ 'ಯು/ಎ' ಪ್ರಮಾಣಪತ್ರ ನೀಡಿದೆ. ಮೊದಲೇ ನಿಗದಿಯಾದಂತೆ ಈಗ ನಿರ್ಮಾಪಕರು ಮೇ ೧೨ ರಂದು ಸಿನೆಮಾ ಬಿಡುಗಡೆ ಮಾಡಿದರೆ

ಬೆಂಗಳೂರು: ನಟಿ ಅಮೂಲ್ಯ ನಟಿಸಿರುವ 'ಮಾಸ್ತಿ ಗುಡಿ' ಸಿನೆಮಾಗೆ ಸೆನ್ಸಾರ್ ಮಂಡಳಿ 'ಯು/ಎ' ಪ್ರಮಾಣಪತ್ರ ನೀಡಿದೆ. ಮೊದಲೇ ನಿಗದಿಯಾದಂತೆ ಈಗ ನಿರ್ಮಾಪಕರು ಮೇ ೧೨ ರಂದು ಸಿನೆಮಾ ಬಿಡುಗಡೆ ಮಾಡಿದರೆ, ಅಂದೇ ಸಪ್ತಪದಿ ತುಳಿಯುತ್ತಿರುವ ನಟಿ ಅಮೂಲ್ಯ ಅವರಿಗೆ ಇದು ಡಬಲ್ ಸಂಭ್ರಮ!
ಕೃತಿ ಕರಬಂಧ ಕೂಡ ನಟಿಸಿರುವ 'ಮಾಸ್ತಿ ಗುಡಿ' ಸಿನೆಮಾದಲ್ಲಿ ದುನಿಯಾ ವಿಜಯ್ ಎದುರು ಅಮೂಲ್ಯ ನಟಿಸಿದ್ದಾರೆ. ಮಾಜಿ ಕಾರ್ಪೊರೇಟರ್ ಪುತ್ರ ಜಗದೀಶ್ ಆರ್ ಚಂದ್ರು ಜೊತೆಗೆ ಅಮೂಲ್ಯ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 
ಈಗಾಗಲೇ ಬ್ಯಾಚಲರ್ ಔತಣಕೂಟ ಕೊಟ್ಟು ಮುಗಿಸಿರುವ ನಟಿ, ವಿಶೇಷ ದಿನಕ್ಕೆ ನಂಟರು ಮತ್ತು ಗೆಳೆಯರನ್ನು ಆಹ್ವಾನಿಸುತ್ತಿದ್ದಾರೆ. "ಈಗ ನನ್ನ ಗುರಿ ನನ್ನ ವೈಯಕ್ತಿಕ ಜೀವನದ ಮೇಲೆ ಇರಲಿದೆ" ಎನ್ನುವ ನಟಿ "ನನ್ನ ನಿಶ್ಚಿತಾರ್ಥದ ನಂತರ ನಿರ್ಮಾಪಕರು ನನ್ನನ್ನು ಸಂಪರ್ಕಿಸುತ್ತಲೇ ಇಲ್ಲ. ಈಗ 'ಮಾಸ್ತಿ ಗುಡಿ' ಬಿಡುಗಡೆ ನನ್ನ ಮದುವೆ ದಿನವೇ ಇದೆ. ನನಗೆ ಕೆಲವು ತಿಂಗಳುಗಳ ಕಾಲ ಸಮಯ ಇದ್ದರೆ ಸಿನೆಮಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದೆ. ಈ ಸಿನೆಮಾ ನನಗೆ ವಿಶೇಷವಾದದ್ದು" ಎನ್ನುತ್ತಾರೆ ಅಮೂಲ್ಯ.
೨೦೦೧ರಲ್ಲಿ 'ಪರ್ವ' ಸಿನೆಮಾದ ಮೂಲಕ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ್ದ ಅಮೂಲ್ಯ 'ಚೆಲುವಿನ ಚಿತ್ತಾರ' ಸಿನೆಮಾದ ಮೂಲಕ ಜನಪ್ರಿಯರಾದವರು. ಈಗ 'ಚೈತ್ರದ ಚಂದ್ರಮ', 'ನಾನು ನನ್ನ ಕನಸು', 'ಗಜಕೇಸರಿ; ಮತ್ತು 'ಶ್ರಾವಣಿ ಸುಬ್ರಮಣ್ಯ' ಸೇರಿದಂತೆ ೨೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT