ಧೈರ್ಯಮ್ ಸಿನೆಮಾದಲ್ಲಿ ಅಜಯ್ ರಾವ್ ಕೃಷ್ಣ
ಬೆಂಗಳೂರು: 'ಧೈರ್ಯಮ್' ಆಡಿಯೋ ಬಿಡುಗಡೆಗಾಗಿ ವಿಶಿಷ್ಟ ತಾಣ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಕಾರಣ ತಿಳಿಯಲು ಇನ್ನು ಒಂದು ವಾರ ಕಾಯಬೇಕಿದೆ. ವಿಧಾನಸೌಧದ ಆವರಣದಲ್ಲಿ ಆಡಿಯೋ ಬಿಡುಗಡೆ ಮಾಡಲು ನಿರ್ದೇಶಕ ಶಿವ ತೇಜಸ್ ಆಯೋಜಿಸಿದ್ದು, ಇನ್ನಷ್ಟು ವಿಶಿಷ್ಟತೆಗಳನ್ನು ಇದರ ಜೊತೆಗೆ ಅಳವಡಿಸಿದ್ದಾರೆ.
ಈ ಆಡಿಯೋಬಿಡುಗಡೆಗೆ ಬರಲಿರುವ ತಾರೆಯರು - ಒಬ್ಬ ರೈತ, ಒಬ್ಬ ಸೈನಿಕ ಮತ್ತು ಒಬ್ಬ ವಿದ್ಯಾರ್ಥಿಯಂತೆ. ಇತರ ಸ್ಟಾರ್ ಗಳ ಬದಲು ಈ ತ್ರಿಮೂರ್ತಿಗಳನ್ನು ಆಯ್ಕೆ ಮಾಡಿದ್ದೇಕೆ ಎಂದರೆ "ನನ್ನ ಸಿನೆಮಾ ಕಥೆ ಈ ವ್ಯಕ್ತಿಗಳ ಜೊತೆಗೆ ವಿಶಿಷ್ಟ ಸಂಬಂಧ ಹೊಂದಿದೆ. ಸಿನೆಮಾದಲ್ಲಿ ವಿಧಾನ ಸೌಧದ ಬಗ್ಗೆಯೂ ಒಂದು ವಿಶೇಷ ದೃಶ್ಯವಿದೆ" ಎನ್ನುತ್ತಾರೆ ನಿರ್ದೇಶಕ.
ಈ ಕಥೆ ಬರೆಯಲು ಎರಡು ನೈಜ್ಯ ಕತೆಗಳು ಸ್ಫೂರ್ತಿ ನೀಡಿದವು ಎನ್ನುವ ನಿರ್ದೇಶಕ ಶಿವ, ಇದು ಆಕ್ಷನ್ ಮನರಂಜನಾ ಚಿತ್ರ ಮತ್ತು ಥ್ರಿಲ್ಲರ್ ಎನ್ನುತ್ತಾರೆ. ಅಜಯ್ ರಾವ್ ಕೃಷ್ಣ ನಾಯಕ ನಟನಾಗಿದ್ದು, ರವಿ ಶಂಕರ್ ಖಳನಾಯಕ. ಅದಿತಿ ಪ್ರಭುದೇವ ನಾಯಕನಟಿಯಾಗಿದ್ದು, ಸಾಧುಕೋಕಿಲ ಕೂಡ ತಾರಾಗಣದ ಭಾಗವಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos