ಧ್ರುವ್ ಸರ್ಜಾ 
ಸಿನಿಮಾ ಸುದ್ದಿ

ಚೈನಾದಲ್ಲಿ ಚಿತ್ರೀಕರಣಗೊಳ್ಳಲಿರುವ ನಂದ ಕಿಶೋರ್ ನಿರ್ದೇಶನದ 'ಹಯಗ್ರೀವ'

ಧ್ರುವ್ ಸರ್ಜಾ ಅಭಿನಯಿಸುತ್ತಿರುವ ನಂದ ಕಿಶೋರ್ ನಿರ್ದೇಶನದ 'ಹಯಗ್ರೀವ' ಸಿನೆಮಾದ ಚಿತ್ರೀಕರಣ ಚೈನಾದಲ್ಲಿ ನಡೆಯಲಿದೆ. ಕನ್ನಡ ಚಿತ್ರರಂಗದ ಸಿನೆಮಾಗಳು ಚೈನಾದಲ್ಲಿ

ಬೆಂಗಳೂರು: ಧ್ರುವ್ ಸರ್ಜಾ ಅಭಿನಯಿಸುತ್ತಿರುವ ನಂದ ಕಿಶೋರ್ ನಿರ್ದೇಶನದ 'ಹಯಗ್ರೀವ' ಸಿನೆಮಾದ ಚಿತ್ರೀಕರಣ ಚೈನಾದಲ್ಲಿ ನಡೆಯಲಿದೆ. ಕನ್ನಡ ಚಿತ್ರರಂಗದ ಸಿನೆಮಾಗಳು ಚೈನಾದಲ್ಲಿ ಚಿತ್ರೀಕರಣಗೊಳ್ಳುವುದೇ ವಿರಳ. 
ಚಿತ್ರೀಕರಣದ ತಾಣಗಳ ಹುಡುಕಾಟಕ್ಕೆ ಚಿತ್ರತಂಡ ಚೈನಾಗೆ ಪ್ರವಾಸ ಬೆಳೆಸಲಿದೆ. ಚೈನಾದ ಕೆಲವು ಕಲಾವಿದರು ಕೂಡ ಸಿನೆಮಾದ ಭಾಗವಾಗಲಿದ್ದಾರಂತೆ. ಚೈನಾದ ನಗರಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳುವುದಾಗಿ ತಿಳಿಸುವ ನಂದಕಿಶೋರ್ "ಅಮೆರಿಕ, ಆಸ್ಟ್ರೇಲಿಯಾ ದೇಶಗಳಲ್ಲಿ ಕನ್ನಡ ಸಿನೆಮಾಗಳ ಚಿತ್ರೀಕರಣ ಸಾಕಷ್ಟು ಮಾಡಲಾಗಿದೆ. ನಾನು ವಿದೇಶದಲ್ಲಿ ಚಿತ್ರೀಕರಣ ಮಾಡುವ ಬಗ್ಗೆ ಚಿಂತಿಸುವಾಗ ಚೈನಾ ಮೊದಲು ನನ್ನ ತಲೆಗೆ ಬಂತು. ನಮ್ಮ ಸಿನೆಮಾ ಭವಿಷ್ಯದ ಬಗೆಗಿದ್ದು, ಆಧುನಿಕ ಕಾರುಗಳು, ಕಟ್ಟಡಗಳು ಮತ್ತು ಜನರನ್ನು ಹೊಂದಿರುವ ಚೈನಾದ ನಗರಗಳು ಇದಕ್ಕೆ ಬಹಳ ಸೂಕ್ತ" ಎನ್ನುತ್ತಾರೆ. 
"ಚೈನಾ ಕರ್ಮದ ದೇಶ ಮತ್ತು ಆಧ್ಯಾತ್ಮಿಕತೆಯು ಅಲ್ಲಿದೆ. ಅಲ್ಲಿನ ಸಂಸ್ಕೃತಿ ಕೂಡ ಆಸಕ್ತಿದಾಯಕ. ಇದು ಕೂಡ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳಲು ಕಾರಣ" ಎನ್ನುವ ನಂದಕಿಶೋರ್ ಜೂನ್ ನಲ್ಲಿ ಚಿತ್ರೀಕರಣ ಪ್ರಾರಂಭಿಸುವುದಾಗಿ ಹೇಳುತ್ತಾರೆ. 
ರಮ್ಯಾ ಕೃಷ್ಣ, ಪ್ರಕಾಶ್ ರೈ ,ಅತ್ತು ರವಿಶಂಕರ್ ಈಗಾಗಲೇ ತಾರಾಗಣದ ಭಾಗವಾಗಿದ್ದು, ಅವರಿಗೆ ಪ್ರಮುಖ ಪಾತ್ರಗಳು ಇರಲಿವೆಯಂತೆ. ಚಿಕ್ಕಣ್ಣ, ಸಾಧುಕೋಕಿಲ ಮತ್ತು ತಬಲಾ ನಾಣಿ ಕೂಡ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಸಿನೆಮಾಗೆ ಸಂಗೀತ ನೀಡಲಿದ್ದಾರೆ. 
ಈಮಧ್ಯೆ ಚೇತನ್ ಕುಮಾರ್ ನಿರ್ದೇಶನದ 'ಭರ್ಜರಿ' ಸಿನೆಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಧ್ರುವ್ ತೊಡಗಿಸಿಕೊಂಡಿದ್ದಾರೆ. ನಂದಕಿಶೋರ್ 'ಟೈಗರ್' ಸಿನೆಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT