ಆಮಿ ಜಾಕ್ಸನ್ 
ಸಿನಿಮಾ ಸುದ್ದಿ

ವಿಲನ್' ಚಿತ್ರೀಕರಣ ವಿಳಂಬಕ್ಕೆ ಆಮಿ ಜಾಕ್ಸನ್ ವೀಸಾ ಕಾರಣ!

ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರೀಕರಣದ ವಿಳಂಬವಾಗುತ್ತಿದೆ. ಈ ಕುರಿತಂತೆ ಚಿತ್ರರಂಗದವರೆಲ್ಲರೂ ನಿರ್ದೇಶಕ ಪ್ರೇಮ್ ಅವರತ್ತ ಬೆರಳು ತೋರುತ್ತಿದ್ದಾರೆ.

ಬೆಂಗಳೂರು: ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರೀಕರಣದ ವಿಳಂಬವಾಗುತ್ತಿದೆ. ಈ ಕುರಿತಂತೆ  ಚಿತ್ರರಂಗದವರೆಲ್ಲರೂ ನಿರ್ದೇಶಕ ಪ್ರೇಮ್ ಅವರತ್ತ ಬೆರಳು ತೋರುತ್ತಿದ್ದಾರೆ.
ಆದರೆ ಇದೀಗ ಬಂದ ಸುದ್ದಿಯಂತೆ ಚಿತ್ರದ ನಾಯಕಿಯಾದ ಆಮಿ ಜಾಕ್ಸನ್ ವೀಸಾ ವಿಳಂಬವಾಗಿರುವುದೇ ಚಿತ್ರೀಕರಣ ವಿಳಂಬಕ್ಕೆ ನಿಜವಾದ ಕಾರಣವಂತೆ.  "ನಾನು ಚಿತ್ರಜಗತ್ತಿನಲ್ಲಿ ಹರಡಿರುವ ವದಂತಿಗಳ ಬಗ್ಗೆ ತಿಳಿದಿದ್ದೇನೆ ಚಿತ್ರೀಕರಣ ವಿಳಂಬಕ್ಕಾಗಿ ಅವರು ನನ್ನನ್ನು ದುಷಿಸುತ್ತಿರುವುದು ದುರದೃಷ್ಟಕರ.  ಆಮಿ ಜಾಕ್ಸನ್ ಅವರ ವೀಸಾ ವಿಳಂಬವಾಗುತ್ತಿದ್ದು ಈ ತೊಂದರೆ ತಪ್ಪಿಸುವುದು ನನ್ನ ಕೈಲಿಲ್ಲ" ಎಂದು ನಿರ್ದೇಶಕ ಪ್ರೇಮ್ ಹೇಳಿದರು. "ಚಿತ್ರದ  ಚಿತ್ರೀಕರಣ ನ.8 ರಿಂದ ಮುಂಬೈನಲ್ಲಿ ನಡೆಯುತ್ತಿದ್ದು ಸುದೀಪ್ ಅವರ ಇಂಟ್ರಡಕ್ಷನ್ ಹಾಡಿನ ಚಿತ್ರೀಕರಣ ಅಲ್ಲಿ ಸಾಗಿದೆ" ಎಂದು ಪ್ರೇಮ್ ವಿವರಿಸಿದರು.
ಆದರೆ ಆಮಿ ಜಾಕ್ಸನ್ ಇದೀಗ ಅಮೆರಿಕದಲ್ಲಿದ್ದು ಅವರು ವೀಸಾ ದೊರಕಿದೊಡನೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ಕರೆ ಮಾಡಿ ತಿಳಿಸಿದ್ದಾರೆ. ಇದೇ ತಿಂಗಳ 20ರ ಆಸು ಫಾಸಿನಲ್ಲಿ ಆಕೆ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದರೂ ಸಹ ಇನ್ನೂ ಖಾತ್ರಿಯಾಗಿಲ್ಲ. ಆಕೆಯೊಬ್ಬರಿಂದಾಗಿ ಇಡಿ ಚಿತ್ರತಂಡ ಸಮಸ್ಯೆ ಎದುರಿಸುವಂತಾಗಿರುವುದು ಮಾತ್ರ ವಿಷಾದನೀಯ.
ಆಮಿ ಜಾಕ್ಸನ್ ಸಹ ಈ ವಿಚಾರದಲ್ಲಿ ಕ್ಷಮೆ ಕೋರಿದ್ದು ವೀಸಾ ಸಮಸ್ಯೆಯಿಂದ ಆಕೆ ಒಪ್ಪಿಕೊಂಡಿದ್ದ ಶಂಕರ್ ಅವರ 2.0 ಚಿತ್ರದ ಹಾಡಿನ ಶೂಟಿಂಗ್ ಸಹ ವಿಳಂಬಆಗಿರುವುದಾಗಿ ಅವರು ತಿಳಿಸಿದರು. "ನಿರ್ಮಾಪಕರಾದ ಸಿ.ಆರ್ ಮನೋಹರ್ ಹಾಗೂ ಶಿವರಾಜ್ ಕುಮಾರ್, ಸುದೀಪ್ ಅವರು ತಾಳ್ಮೆಯಿಂದಿರುವ ಕಾರಣ ನಾನು ಅವರಿಗೆ ಕೃತಜ್ಞರಾಗಿರುತ್ತೇನೆ" ಎಂದು ಪ್ರೇಮ್ ಹೇಳಿದ್ದಾರೆ.
"ಇದೀಗ ಇಡೀ ಚಿತ್ರತಂಡಕ್ಕೆ ನನ್ನ ಪರಿಸ್ಥಿತಿ ಮನವರಿಕೆಯಾಗಿದೆ. ನಾನು ಯಾವೊತ್ತಡದಲ್ಲಿದ್ದೇನೆ ಎನ್ನುವುದನ್ನು ಸುದೀಪ್ ಸೇರಿ ಎಲ್ಲಾ ನಟರು, ನಿರ್ಮಾಪಕರು ಅರಿತಿದ್ದಾರೆ. ನಾನು ಮೊದಲು ಎಣಿಕೆ ಮಾಡಿದ್ದಂತೆ ಚಿತ್ರದ ಚಿತ್ರೀಕರಣ ಈ ಡಿಸೆಂಬರ್ ಗೆ ಮುಗಿಯಬೇಕಾಗಿತ್ತು. ಆದರೆ ನಟಿಯ  ಸಮಸ್ಯೆಗಳಿಂದಾಗಿ ಇದು ಮುಂದಿನ ವರ್ಷ ಜನವರಿಗೆ ಸಹ ಮುಂದುವರಿಯಲಿದೆ. "ನಾನು ಮುಂದಿನ ವಾರ ಡಬ್ಬಿಂಗ್ ಕೆಲಸವನ್ನು ಪ್ರಾರಂಭಿಸುತ್ತಿದ್ದೇನೆ, ಚಿತ್ರೀಕರಣದಲ್ಲಿ ಎದುರಾದ ತೊಂದರೆಗಳು ಶೀಘ್ರವಾಗಿ ಪರಿಹಾರವಾಗಲಿದೆ ಎಂದು ನಾನು ನಿರೀಕ್ಷಿಸುತ್ತೇನೆ" ಪ್ರೇಮ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT