ಹರಿಪ್ರಿಯಾ 
ಸಿನಿಮಾ ಸುದ್ದಿ

"ಒಂದೇ ನಾಣ್ಯದ ಎರಡು ಮುಖ", 'ಸಂಹಾರ' ಚಿತ್ರದ ಪಾತ್ರದ ಕುರಿತು ಹರಿಪ್ರಿಯಾ ವ್ಯಾಖ್ಯಾನ

ಹರಿಪ್ರಿಯಾ ಬ್ಯುಸಿಯಾಗಿದ್ದಾರೆ. ಸುಮಾರು ಒಂದೂವರೆ ತಿಂಗಳಿನಿಂದ ಬೆಂಗಳುರಿನಿಂದ ಹೊರಗಿರುವ ಇವರು 'ಲೈಫ್ ಜತೆ ಒಂದ್ ಸೆಲ್ಫಿ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗಳುರು:  ಹರಿಪ್ರಿಯಾ  ಬ್ಯುಸಿಯಾಗಿದ್ದಾರೆ. ಸುಮಾರು ಒಂದೂವರೆ ತಿಂಗಳಿನಿಂದ ಬೆಂಗಳುರಿನಿಂದ ಹೊರಗಿರುವ ಇವರು 'ಲೈಫ್ ಜತೆ ಒಂದ್ ಸೆಲ್ಫಿ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರೊಡನೆಯೇ ಹರಿಪ್ರಿಯಾ ನಟನೆಯ ತೆಲುಗಿನ ಮೆಗಾ ಚಿತ್ರ 'ಜೈ ಸಿಂಹ' ತಯಾರಿಯೂ ಜೋರಾಗಿದೆ. ತೆಲುಗಿನ ಖ್ಯಾತ ನಟ ಬಾಲಕೃಷ್ಣ ಜತೆ ನಟಿಸುತ್ತಿರುವ ಹರಿಪ್ರಿಯ "ನಟನೆಯು ನನಗೆ ಮನೆಗೆಲಸದಷ್ಟೇ ಸರಳವಾಗಿದೆ. ನಾನು ಇದನ್ನು ಪ್ರೀತಿಸುತ್ತೇನೆ" ಎನ್ನುತ್ತಾರೆ.
ಹರಿಪ್ರಿಯಾ ನಟನೆಯ 'ಭರ್ಜರಿ' ಇದೀಗ ಉತ್ತಮ ಪ್ರದರ್ಶನ ಕಾಣುತ್ತಿದ್ದು ಅವರು ಸಂತ್ಸಗೊಳ್ಳುವುದಕ್ಕೆ ಕಾರಣವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಸಹ ಅವರ ನಟನೆಯ ಕೆಲ ಚಿತ್ರಗಳು ತೆರೆ ಕಾಣಲಿದ್ದು ವಉಗಳ ಬಗೆಗೆ ಸಹ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದಾರೆ.  ಹರಿಪ್ರಿಯಾ ಅಪಾರ ನಿರೀಕ್ಷೆ ಇರಿಸಿಕೊಂಡಿರುವ ಅವರ ಒಂದು ಚಿತ್ರ 'ಸಂಹಾರ'
"ಗುರು ದೇಶಪಾಂಡೇ ನಿರ್ದೇಶಕದಲ್ಲಿ ಚಿರಂಜೀವಿ ಸರ್ಜಾ ಅವರ ಪಾತ್ರ ಉತ್ತಮವಾಗಿದ್ದು ನಾಯಕಿಯ ಪಾತ್ರವೂ ಅನನ್ಯವಾಗಿದೆ." ಎನ್ನುತ್ತಾರೆ. ಹರಿಪ್ರಿಯಾ ಈ ಚಿತ್ರದಲ್ಲಿ ಎರಡು ಶೇಡ್ ಗಳಿರುವ ಪಾತ್ರದಲ್ಲಿ ನಟಿಸುತ್ತಿದ್ದು ಚಿತ್ರದ ಫಸ್ಟ್ ಲುಕ್ ಫೋಟೋಗಳಲ್ಲಿ ಇದು ಕಾಣಿಸುತ್ತಿದೆ. ಆದರೆ ಹರಿಪ್ರಿಯಾ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಹೆಚ್ಚಾಗಿ ಹೇಳಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. "ನನ್ನ ಪಾತ್ರದ ಬಗ್ಗೆ ಹೆಚ್ಚು ಹೇಳುವ ಮೂಲಕ ಚಿತ್ರದ ಕಥೆಯನ್ನು ಬಹಿರಂಗಪಡಿಸಲಾರೆ, ಆದರೆ ನನ್ನ ಪಾತ್ರವು ಒಂದೇ ನಾಣ್ಯದ ಎರಡು ಮುಖಗಳಂತಿದೆ. ನಿರ್ಮಾಪಕ ಎ ವೆಂಕಟೇಶ್ ಅವರು ನನ್ನಲ್ಲಿ ಭರವಸೆ ಇಟ್ಟಿದ್ದಾರೆ ಮತ್ತು ನಾನು ಈ ಪಾತ್ರವನ್ನು ಮಾಡುತ್ತಿರುವುದಕ್ಕೆ ನನಗೆ ಖುಷಿಯಿದೆ. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ " ಎಂದರು.
ಇನ್ನು ಈ ಚಿತ್ರದಲ್ಲಿ ಹರಿಪ್ರಿಯಾ ಅವರೊಡನೆ ಕಾವ್ಯಾ ಶೆಟ್ಟಿ ಸಹ ನಟಿಸಿದ್ದಾರೆ. ಹರಿಪ್ರಿಯಾ ತಮ್ಮ ಸದ್ಯದ ಎರಡು ಯೋಜನೆಗಳನ್ನು ಡಿಸೆಂಬರ್ ಮೊದಲ ವಾರದ ಒಳಗೆ ಮುಗಿಸಲು ಬಯಸಿದ್ದಾರೆ. "ನಾನು ಕೆಲವು ನಿರ್ದೇಶಕರ ಕಥೆಗಳಿಗಾಗಿ ಕಾಯುತ್ತಿದ್ದು ಮತ್ತೆ ಈ ಚಿತ್ರಕಥೆಯ ಬಗೆಗೆ ಚರ್ಚಿಸಲು ನಾನು ಬಯಸುವುದಿಲ್ಲ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ನನ್ನ ಕೆಲವು ಚಿತ್ರಗಳ ಪ್ರಮೋಷನ್ ಗಳಲ್ಲಿ ನಾನು ಭಾಗವಹಿಸುತ್ತೇನೆ" ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT