ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಐಎಫ್ಎಫ್ ಐನಲ್ಲಿ 'ಎಸ್ ದುರ್ಗಾ'ಗೆ ಸಿಗಲಿಲ್ಲ ಪ್ರದರ್ಶನ ಭಾಗ್ಯ, Xsಗೆ ಸೆನ್ಸಾರ್ ಮಂಡಳಿ ಆಕ್ಷೇಪ

ಕೇರಳ ಹೈಕೋರ್ಟ್ ಆದೇಶವನ್ನೂ ಧಿಕ್ಕರಿಸಿ ಗೋವಾದಲ್ಲಿ ಇಂದು ತೆರೆಕಂಡ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ...

ಪಣಜಿ: ಕೇರಳ ಹೈಕೋರ್ಟ್ ಆದೇಶವನ್ನೂ ಧಿಕ್ಕರಿಸಿ ಗೋವಾದಲ್ಲಿ ಇಂದು ತೆರೆಕಂಡ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್‌ಎಫ್‌ಐ)ದಲ್ಲಿ ಮಲಯಾಳಂನ ವಿವಾದಾತ್ಮಕ ಚಿತ್ರ 'ಎಸ್‌ ದುರ್ಗಾ' (ಸೆಕ್ಸಿ ದುರ್ಗಾ) ಪ್ರದರ್ಶಿಸಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ ಸಿ) ಅನುಮತಿ ನೀಡಿಲ್ಲ. 
ಸನಲ್ ಕುಮಾರ್ ಸಸಿಧರನ್ ನಿರ್ದೇಶನ ಎಸ್ ದುರ್ಗಾ ಚಿತ್ರವನ್ನು ಮರು ಪರಿಶೀಲಿಸುವಂತೆ ಸಿಬಿಎಫ್ ಸಿ ಆದೇಶಿಸಿದೆ. ಅಲ್ಲದೆ ಮುಂದಿನ ನೋಟಿಸ್ ವರೆಗೆ ಚಿತ್ರ ಪ್ರದರ್ಶಿಸದಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. 
ಎಸ್ ದುರ್ಗಾ ಚಿತ್ರದ ನಿರ್ಮಾಪಕರು ನಿಯಮಗಳನ್ನು ಉಲ್ಲಂಘಿಸಿದ್ದು, ಚಿತ್ರದ ಅವನ ಬದಲಾದ ಶೀರ್ಷಿಕೆಯಲ್ಲಿ ಬಳಸಿದ 'ಬಾಕ್ಸ್ ಗಳಿಂದ' ಬೇರೆ ಬೇರೆ ಪರಿಣಾಮ ಬೀರುತ್ತದೆ ಎಂದು ಸೆನ್ಸಾರ್ ಮಂಡಳಿ ಹೇಳಿದೆ.
ಸೆನ್ಸಾರ್ ಮಂಡಳಿ ನಿರ್ದೇಶನದಂತೆ ಚಿತ್ರದ ಮೂಲ ಟೈಟಲ್ ಸೆಕ್ಸಿ ದುರ್ಗಾದಿಂದ ಎಸ್ ದುರ್ಗಾ ಎಂದು ಬದಲಾಯಿಸಿದ್ದರೂ, ಬದಲಾದ ಟೈಟಲ್ ನಲ್ಲಿರುವ ಎಕ್ಸ್ ಎಸ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
ಗೋವಾ ಚಿತ್ರೋತ್ಸವದಿಂದ 'ಎಸ್ ದುರ್ಗಾ'(ಸೆಕ್ಸಿ ದುರ್ಗಾ) ಚಿತ್ರವನ್ನು ಹೊರಗಿಟ್ಟಿದ್ದನ್ನು ಪ್ರಶ್ನಿಸಿ ನಿರ್ದೇಶಕ ಸನಲ್ ಕುಮಾರ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಐಎಫ್‌ಎಫ್‌ಐ ಅಧಿಕಾರಿಗಳ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಈ ಹಿಂದೆ ದೂರು ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌ ಚಿತ್ರವನ್ನು ಐಎಫ್‌ಎಫ್‌ಐನಲ್ಲಿ ಪ್ರದರ್ಶಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚಿಸಿತ್ತು. ಚಿತ್ರೋತ್ಸವದ ಕೊನೆಯ ದಿನವಾದ ಇಂದು ಚಿತ್ರ ಪ್ರದರ್ಶನ ನಿಗದಿಯಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.
ಐಎಫ್ಎಫ್ ಕೆ ನಲ್ಲಿ 'ಎಸ್ ದುರ್ಗಾ'ಗೆ ಪ್ರದರ್ಶನ ಭಾಗ್ಯ
ಐಎಫ್ಎಫ್ ಐನಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾರ್ಥವಾಗಿ ಮುಂಬರುವ ಕೇರಳ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ(ಐಎಫ್ಎಫ್ ಕೆ)ದಲ್ಲಿ 'ಎಸ್ ದುರ್ಗಾ' ಪ್ರದರ್ಶಿಸಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT