ಸಿನಿಮಾ ಸುದ್ದಿ

'ಧೈರ್ಯಂ' ನಿರ್ದೇಶಕ ಶಿವತೇಜಸ್ ಮುಂದಿನ ಚಿತ್ರ 'ಲೌಡ್ ಸ್ಪೀಕರ್'

Vishwanath S
ಅಜೇಯ್ ರಾವ್ ಅಭಿನಯದ ಧೈರ್ಯಂ ಚಿತ್ರವನ್ನು ನಿರ್ದೇಶಿಸಿದ್ದ ಶಿವತೇಜಸ್ ಅವರ ಮುಂದಿನ ಚಿತ್ರ ಲೌಡ್ ಸ್ಪೀಕರ್. 
ಸದ್ದಿಲ್ಲದೆ ಚಿತ್ರವನ್ನು ಆರಂಭಿಸಿದ್ದ ಶಿವತೇಜಸ್ ಅವರು ಚಿತ್ರೀಕರಣವನ್ನು ಮಾಡುತ್ತಿದ್ದಾರೆ. ಸಂಪೂರ್ಣ ಹೊಸಬರೆ ತುಂಬಿರುವ ಚಿತ್ರಕ್ಕೆ ಇದೀಗ ಶೀರ್ಷಿಕೆ ಫಿಕ್ಸ್ ಆಗಿದ್ದು, ಅದು ಲೌಡ್ ಸ್ಪೀಕರ್. 
ಚಿತ್ರದಲ್ಲಿ ನೀನಾಸಂ ಭಾಸ್ಕರ್, ಅಭಿಷೇಕ್, ಸುಮಂತ್ ಭಟ್, ಕಾರ್ತಿಕ್ ರಾವ್, ಕಾವ್ಯಾ ಶಾ, ಅನುಷಾ, ದಿಶಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 
ರಾಜ್ ಪ್ರೋಡೆಕ್ಷನ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ ಶಿಷ್ಯ ಹರ್ಷವರ್ಧನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.
SCROLL FOR NEXT