ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಹೃತಿಕ್ ರೋಷನ್ 
ಸಿನಿಮಾ ಸುದ್ದಿ

ಕಂಗನಾ-ಹೃತಿಕ್ ಕಾನೂನು ಸಮರ: ಶೀಘ್ರದಲ್ಲೇ ಸತ್ಯ ಬಹಿರಂಗಗೊಳ್ಳಲಿದೆ- ಮೌನ ಮುರಿದ ರಾಕೇಶ್ ರೋಷನ್

ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಹೃತಿಕ್ ರೋಷನ್ ನಡುವಿನ ಕಾನೂನು ಸಮರ ಕುರಿತಂತೆ ಇಷ್ಟು ದಿನ ಮೌನ ತಾಳಿದ್ದ ಹೃತಿಕ್ ತಂದೆ ರಾಕೇಶ್ ರೋಷನ್ ಅವರು, ಕೊನೆಗೂ ತಮ್ಮ ಮೌನವನ್ನು ಮುರಿದಿದ್ದು, ಶೀಘ್ರದಲ್ಲಿಯೇ ಸತ್ಯ ಬಹಿರಂಗಗೊಳ್ಳಲಿದೆ...

ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಹೃತಿಕ್ ರೋಷನ್ ನಡುವಿನ ಕಾನೂನು ಸಮರ ಕುರಿತಂತೆ ಇಷ್ಟು ದಿನ ಮೌನ ತಾಳಿದ್ದ ಹೃತಿಕ್ ತಂದೆ ರಾಕೇಶ್ ರೋಷನ್ ಅವರು, ಕೊನೆಗೂ ತಮ್ಮ ಮೌನವನ್ನು ಮುರಿದಿದ್ದು, ಶೀಘ್ರದಲ್ಲಿಯೇ ಸತ್ಯ ಬಹಿರಂಗಗೊಳ್ಳಲಿದೆ ಎಂದು ಬುಧವಾರ ಹೇಳಿದ್ದಾರೆ. 
ಸುಖಾಸುಮ್ಮನೆ ಮಾತನಾಡಿರುವ ವ್ಯಕ್ತಿಗಳು ನಾವಲ್ಲ. ಸಾಬೀತು ಪಡಿಸದೆಯೇ ಆರೋಪಗಳನ್ನು ಮಾಡುವುದರ ಮೇಲೆ ನಮಗೆ ನಂಬಿಕೆಯಿಲ್ಲ. ನಮ್ಮ ಬಳಿಯಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ್ದೇನೆ. ನಾವು ನೀಡಿರುವ ದೂರಿನ ಪ್ರತಿ ಬೇಕಿದ್ದರೆ, ನಮ್ಮ ಪರ ವಾದ ಮಂಡಿಸುತ್ತಿರುವ ವಕೀಲ ಮಹೇಶ್ ಜೇಠ್ಮಲಾನಿಯವರ ಕಚೇರಿಯನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ. 
ಹೃತಿಕ್ ನೀಡಿರುವ ದೂರಿನ ಪ್ರತಿಯನ್ನು ಓದಿದರೆ ಅದರಲ್ಲಿರುವ ಸತ್ಯಾಗಳನ್ನು ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ. ನಮ್ಮ ಬಳಿಯಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು 2017 ಏ.8 ರಂದು ಸೈಬರ್ ಕ್ರೈಂ ಅಧಿಕಾರಿಗಳಿಗೆ ನೀಡಿದ್ದೇವೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಅಧಿಕಾರಿಗಳೇ ಸತ್ಯ ಏನೆಂಬುದನ್ನು ಬಹಿರಂಗಪಡಿಸಬೇಕಿದೆ. 
ಸತ್ಯಕ್ಕಿರುವ ಶಕ್ತಿಯ ಮೇಲೆ ನಾವು ಹೆಚ್ಚು ನಂಬಿಕೆಯನ್ನು ಇಟ್ಟಿದ್ದೇವೆ. ನನ್ನ ತಂದೆ ನನಗೆ ಪ್ರಾಮಾಣಿಕತೆ, ಸತ್ಯತೆಯನ್ನು ಹೇಳಿಕೊಂಡಿದ್ದರು. ಇದನ್ನೇ ನಾನೂ ನನ್ನ ಮಗ ಹೃತಿಕ್'ಗೆ ಹೇಳಿಕೊಟ್ಟಿದ್ದೇನೆ. ಶೀಘ್ರದಲ್ಲಿಯೇ ಸತ್ಯಾಂಶ ಬಹಿರಂಗಗೊಳ್ಳಲಿದೆ ಎಂದು ತಿಳಿಸಿದ್ದಾರೆ. 
ತಮ್ಮ ವಿರುದ್ಧ ನಟಿ ಕಂಗನಾ ಅವರು ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದರೂ ಇಷ್ಟೂ ದಿನ ಮೌನ ವಹಿಸಿದ್ದ ನಟ ಹೃತಿಕ್ ರೋಷನ್ ಅವರು ಒಮ್ಮೆಲೆ ಸ್ಫೋಟಗೊಂಡಿದ್ದರು. ನಟಿ ಕಂಗನಾ ತಮ್ಮ ಬೆನ್ನು ಬಿಡದಂತೆ ಹಿಂಸಿಸುತ್ತಿದ್ದಾರೆಂದು ಆರೋಪಿಸಿ 29 ಪುಟಗಳ ದೂರು ನೀಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT