ಸನ್ನಿ ಲಿಯೋನ್ ಮತ್ತು ಶಾನ್ವಿ ಶ್ರೀವಾತ್ಸವ 
ಸಿನಿಮಾ ಸುದ್ದಿ

ಸನ್ನಿಲಿಯೋನ್ ಗೆ ತಪ್ಪಿದ ಅವಕಾಶ ಶಾನ್ವಿ ಶ್ರೀವಾತ್ಸವ್ ಮಡಿಲಿಗೆ!

ಕನ್ನಡ ಮತ್ತು ತೆಲುಗು ನಟಿ ಶಾನ್ವಿ ಶ್ರೀವಾತ್ಸವ ಪಾರ್ನ್ ಸ್ಟಾರ್ ಸನ್ನಿಲಿಯೋನ್ ಹಿಂದಿಕ್ಕಿ ಅಂತಾರಾಷ್ಟ್ರೀಯ ಪ್ರಾಜೆಕ್ಟ್ ತಮ್ಮದಾಗಿಸಿಕೊಂಡಿದ್ದಾರೆ...

ಬೆಂಗಳೂರು: ಕನ್ನಡ ಮತ್ತು ತೆಲುಗು ನಟಿ ಶಾನ್ವಿ ಶ್ರೀವಾತ್ಸವ ಪಾರ್ನ್ ಸ್ಟಾರ್ ಸನ್ನಿಲಿಯೋನ್ ಹಿಂದಿಕ್ಕಿ ಅಂತರಾಷ್ಟ್ರೀಯ ಪ್ರಾಜೆಕ್ಟ್ ತಮ್ಮದಾಗಿಸಿಕೊಂಡಿದ್ದಾರೆ.
ಚೈನೀಸ್ ಟೆಲಿವಿಷನ್ ನಲ್ಲಿ ಪ್ರಸಾರವಾಗುವ ವೆಬ್ ಸಿರೀಸ್ ನಲ್ಲಿ ದಿ ಡಾರ್ಕ್  ಲಾರ್ಡ್ ಎಂಬ ಶೋನಲ್ಲಿ  ಭಾರತೀಯ ರಾಜಕುಮಾರಿ ಪಾತ್ರದಲ್ಲಿ ಶಾನ್ವಿ ಅಭಿನಯಿಸಲಿದ್ದಾರೆ. ಇತ್ತೀಚೆಗೆ ಚೀನಾಗೆ ತೆರಳಿದ್ದ ಶಾನ್ವಿ ಶೋನ ಕೆಲವು ಭಾಗಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಮೊದಲಿಗೆ ಈ ಪಾತ್ರಕ್ಕಾಗಿ ನಿರ್ಮಾಣ ತಂಡ ಸನ್ನಿ ಲಿಯೋನ್ ಆಯ್ಕೆ ಮಾಡಿತ್ತು. ಆದರೆ ಬೇಬಿ ಡಾಲ್ ಸ್ಟಾರ್ ಸನ್ನಿ ಈ ಪಾತ್ರಕ್ಕೆ ಒಗ್ಗುವುದಿಲ್ಲ, ತೀರಾ ವೆಸ್ಟ್ರನ್ ಆಗಿ ಕಾಣುತ್ತಾರೆ ಎಂದು ನಿರ್ಧರಿಸಿದ ತಂಡ ಶಾನ್ವಿ ಆಯ್ಕೆ ಮಾಡಿದೆ.
ತಾರಕ್ ಸಿನಿಮಾದಲ್ಲಿ ಎನ್ ಆರ್ ಐ ಪಾತ್ರ ಮಾಡಿ ಶಾನ್ವಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ತಂಡದ ಜೊತೆಗೆ ಶೂಟಿಂಗ್ ಅನುಭವವಿದೆ. ಸೆಪ್ಟಂಬರ ತಿಂಗಳ ಮೊದಲ ಅರ್ಧದಲ್ಲಿ ಚೀನಾಗೆ ತೆರಳಿದ್ದ ಶಾನ್ವಿ ಭಾರತೀಯ ರಾಜಕುಮಾರಿ ಪಾತ್ರಕ್ಕಾಗಿ ಟೆಸ್ಟ್ ನೀಡಿ ಬಂದಿದ್ದರು,  ಪಾತ್ರಕ್ಕಾಗಿ ನಾನು ಚೀನಿ ಭಾಷೆ ಕಲಿತೆ ಎಂದು ಶಾನ್ವಿ ಹೇಳಿದ್ದಾರೆ.
ವೆಬ್ ಸಿರೀಸ್ ಚೀನಾದಲ್ಲಿ  ಬಹುದೊಡ್ಡ ಸಿನಿಮಾದಂತಾಗಿದೆ.  ಚೀನಿಯರು ಕೇವಲ ಬುದ್ಧಿವಂತರು ಮಾತ್ರವಲ್ಲ, ಕಠಿಣ ಶ್ರಮ ಜೀವಿಗಳು ಎಂಬುದು ನನಗೆ ಶೂಟಿಂಗ್ ವೇಳೆ ತಿಳಿಯಿತು. ಅದೊಂದು ಮರೆಯಲಾಗದ ಅನುಭವ ಎಂದು ಶಾನ್ವಿ ತಿಳಿಸಿದ್ದಾರೆ.
ಭಾರತ-ಚೀನಾ ಸಂಬಂಧಗಳ ಕುರಿತಾದ ಕಥೆಯುಳ್ಳ ಶೋ ಇದಾಗಿದೆ. ಈ ಪ್ರಾಜೆಕ್ಟ್ ನ ಭಾಗವಾಗಿರುವುದು ನನಗೆ ಹೆಮ್ಮೆ ತಂದಿದೆ. ನಟನಾ ವೃತ್ತಿ ಬೇರೆ ಎಲ್ಲಾ ವ್ಯತ್ಯಾಸಗಳನ್ನು ಮರೆ ಮಾಡಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ದಕ್ಷಿಣ ಭಾರತದ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದು ಚೀನಾ ಭಾಷೆ ಕಲಿಯು ಶಾನ್ವಿಗೆ ನೆರವಾಗಿದೆ, ಸಂಭಾಷಣೆಗಳನ್ನು ನಾನು ಶೀಘ್ರವಾಗಿ ಕಲಿತೆ, ಚೀನಾ ಭಾಷಾಂತರಕಾರರು ಕೂಡ ನನಗೆ ಸಹಾಯ ಮಾಡಿದ್ದಾರೆ. ಮಲೇಶಿಯನ್ ನಿರ್ದೇಶಕ ಚಾಂಗ್  ಈ ವೆಬ್ ಸಿರೀಸ್ ಅನ್ನು ಚೀನಾದಲ್ಲಿ ಹೊರ ತರುತ್ತಿದ್ದಾರೆ.
ನಿರ್ದೇಶಕ ಚಾಂಗ್ ಗೆ ಕೇವಲ ಇಂಗ್ಲೀಷ್ ಮಾತ್ರ ಗೊತ್ತು, ಸೆಟ್ ನಲ್ಲಿ ಕಥೆಯನ್ನು ಇಂಗ್ಲೀಷಿನಲ್ಲಿ ವಿವರಿಸುತ್ತಾರೆ ಎಂದು ಹೇಳಿದ್ದಾರೆ. ಸದ್ಯ ತಾರಕ್ ಮತ್ತು ಮುಫ್ತಿ ಸಿನಿಮಾ ಶೂಟಿಂಗ್ ಮುಗಿಸಿರುವ ಶಾನ್ವಿ ಮುಂದಿನ ಪ್ರಾಜೆಕ್ಟ್ ಗಾಗಿ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT