ಹಾಡಿನ ದೃಶ್ಯದಲ್ಲಿ ಉಪೇಂದ್ರ 
ಸಿನಿಮಾ ಸುದ್ದಿ

ಉಪ್ಪಿ-ರುಪ್ಪಿ: ಬ್ಯಾಂಕಾಕ್ ನಲ್ಲಿ ಉಪೇಂದ್ರ ಹಾಡು, ಡ್ಯಾನ್ಸ್

ಕೆ ಮಾದೇಶ ನಿರ್ದೇಶನದ ಉಪ್ಪಿ-ರುಪ್ಪಿ ಸಿನಿಮಾ ಶೂಟಿಂಗ್ ನಲ್ಲಿ ರಿಯಲ್ ಸ್ಟಾರ್ ಭಾಗವಹಿಸಿದ್ದಾರೆ, ವಿಜಯಲಕ್ಷ್ಮಿ ಅರಸ್ ನಿರ್ಮಿಸಿ ಕಥೆ ಬರೆದಿರುವ ಈ ಸಿನಿಮಾದಲ್ಲಿ ...

ಬೆಂಗಳೂರು: ಕೆ ಮಾದೇಶ ನಿರ್ದೇಶನದ ಉಪ್ಪಿ-ರುಪ್ಪಿ ಸಿನಿಮಾ ಶೂಟಿಂಗ್ ನಲ್ಲಿ ರಿಯಲ್ ಸ್ಟಾರ್ ಭಾಗವಹಿಸಿದ್ದಾರೆ, ವಿಜಯಲಕ್ಷ್ಮಿ ಅರಸ್ ನಿರ್ಮಿಸಿ ಕಥೆ ಬರೆದಿರುವ ಈ ಸಿನಿಮಾದಲ್ಲಿ ಉಪೇಂದ್ರ ನೆಗೆಟಿವ್ ರೋಲ್ ನಲ್ಲಿ ನಟಿಸಿದ್ದಾರೆ, ನೋಟು ಅಮಾನ್ಯೀಕರಣ ಹಾಗೂ ಕಪ್ಪು ಹಣ ಸಂಬಂಧ ಕಥೆ ಇದಾಗಿದೆ. 
ಸಿನಿಮಾಗಾಗಿ ಹಾಡು ಮತ್ತು ಚೇಸಿಂಗ್ ದೃಶ್ಯಗಳನ್ನು ಬ್ಯಾಂಕಾಕ್ ನಲ್ಲಿ ಶೂಟಿಂಗ್ ಮಾಡಲಾಗಿದೆ. ಕಳೆದ 10 ದಿನಗಳಿಂದ ಶೂಟಿಂಗ್ ನಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆ, ಎರಡು ಹಾಡು ಪ್ರಮುಖ ಫೈಟಿಂಗ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ, ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಸಾಹಿತ್ಯ ವಿರುವ ಹಾಡುಗಳಿಗೆ ಮರುಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಹಾಡಿನ ಡ್ಯಾನ್ಸ್ ಗಾಗಿ ಹಲವು ರಷ್ಯಾ ಡ್ಯಾನ್ಸರ್ ಗಳನ್ನು  ಕರೆತರಲಾಗಿತ್ತು ಎಂದು ನಿರ್ದೇಶಕ ಮಾದೇಶ ತಿಳಿಸಿದ್ದಾರೆ,  ಗಜ ಸಿನಿಮಾದ ಸಿಂಗಾರಿ ಯಾರೇ ನೀ ಬುಲ್ ಬುಲ್ ಹಾಡಿನಂತೆ ಈ ಸಾಂಗ್ ಕೂಡ ಪಾಪುಲರ್ ಆಗಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಗುರುವಾರ ಚಿತ್ರತಂಡ ವಾಪಸ್ ಬೆಂಗಳೂರಿಗೆ ಮರಳಿದೆ, ಉಪೇಂದ್ರ ಹೋಂ ಮಿನಿಸ್ಟರ್ ಶೂಟಿಂಗ್ ಗಾಗಿ ಹೈದರಾಬಾದ್ ಗೆ ತೆರಳಿದ್ದಾರೆ. ಆ ಸಿನಿಮಾದ ಶೂಟಿಂಗ್ ಮುಗಿದ ನಂತರ ಮತ್ತೆ ಉಪ್ಪಿ-ರುಪ್ಪಿ ಶೂಟಿಂಗ್ ಆರಂಭಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.
ತಮ್ಮ ರಾಜಕೀಯ ಜೀವನದ ಕಡೆ ತಮನ ಹರಿಸಲು  ನಿರ್ಧರಿಸಿರುವ ಉಪೇಂದ್ರ ಆದಷ್ಟು ಬೇಗ ಈ ಚಿತ್ರಗಳ ಶೂಟಿಂಗ್ ಮುಗಿಸಲಿದ್ದಾರೆ. ಉಪ್ಪಿ-ರುಪ್ಪಿಯಲ್ಲಿ ಜಗಪತಿ ಬಾಬು ಕೂಡ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ,ರಚಿತಾ ರಾಮ್ ಉಪೇಂದ್ರ ಗೆ ನಾಯಕಿಯಾಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT