ಬೆಂಗಳೂರು: ಕೆ ಮಾದೇಶ ನಿರ್ದೇಶನದ ಉಪ್ಪಿ-ರುಪ್ಪಿ ಸಿನಿಮಾ ಶೂಟಿಂಗ್ ನಲ್ಲಿ ರಿಯಲ್ ಸ್ಟಾರ್ ಭಾಗವಹಿಸಿದ್ದಾರೆ, ವಿಜಯಲಕ್ಷ್ಮಿ ಅರಸ್ ನಿರ್ಮಿಸಿ ಕಥೆ ಬರೆದಿರುವ ಈ ಸಿನಿಮಾದಲ್ಲಿ ಉಪೇಂದ್ರ ನೆಗೆಟಿವ್ ರೋಲ್ ನಲ್ಲಿ ನಟಿಸಿದ್ದಾರೆ, ನೋಟು ಅಮಾನ್ಯೀಕರಣ ಹಾಗೂ ಕಪ್ಪು ಹಣ ಸಂಬಂಧ ಕಥೆ ಇದಾಗಿದೆ.
ಸಿನಿಮಾಗಾಗಿ ಹಾಡು ಮತ್ತು ಚೇಸಿಂಗ್ ದೃಶ್ಯಗಳನ್ನು ಬ್ಯಾಂಕಾಕ್ ನಲ್ಲಿ ಶೂಟಿಂಗ್ ಮಾಡಲಾಗಿದೆ. ಕಳೆದ 10 ದಿನಗಳಿಂದ ಶೂಟಿಂಗ್ ನಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆ, ಎರಡು ಹಾಡು ಪ್ರಮುಖ ಫೈಟಿಂಗ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ, ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಸಾಹಿತ್ಯ ವಿರುವ ಹಾಡುಗಳಿಗೆ ಮರುಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಹಾಡಿನ ಡ್ಯಾನ್ಸ್ ಗಾಗಿ ಹಲವು ರಷ್ಯಾ ಡ್ಯಾನ್ಸರ್ ಗಳನ್ನು ಕರೆತರಲಾಗಿತ್ತು ಎಂದು ನಿರ್ದೇಶಕ ಮಾದೇಶ ತಿಳಿಸಿದ್ದಾರೆ, ಗಜ ಸಿನಿಮಾದ ಸಿಂಗಾರಿ ಯಾರೇ ನೀ ಬುಲ್ ಬುಲ್ ಹಾಡಿನಂತೆ ಈ ಸಾಂಗ್ ಕೂಡ ಪಾಪುಲರ್ ಆಗಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಗುರುವಾರ ಚಿತ್ರತಂಡ ವಾಪಸ್ ಬೆಂಗಳೂರಿಗೆ ಮರಳಿದೆ, ಉಪೇಂದ್ರ ಹೋಂ ಮಿನಿಸ್ಟರ್ ಶೂಟಿಂಗ್ ಗಾಗಿ ಹೈದರಾಬಾದ್ ಗೆ ತೆರಳಿದ್ದಾರೆ. ಆ ಸಿನಿಮಾದ ಶೂಟಿಂಗ್ ಮುಗಿದ ನಂತರ ಮತ್ತೆ ಉಪ್ಪಿ-ರುಪ್ಪಿ ಶೂಟಿಂಗ್ ಆರಂಭಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.
ತಮ್ಮ ರಾಜಕೀಯ ಜೀವನದ ಕಡೆ ತಮನ ಹರಿಸಲು ನಿರ್ಧರಿಸಿರುವ ಉಪೇಂದ್ರ ಆದಷ್ಟು ಬೇಗ ಈ ಚಿತ್ರಗಳ ಶೂಟಿಂಗ್ ಮುಗಿಸಲಿದ್ದಾರೆ. ಉಪ್ಪಿ-ರುಪ್ಪಿಯಲ್ಲಿ ಜಗಪತಿ ಬಾಬು ಕೂಡ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ,ರಚಿತಾ ರಾಮ್ ಉಪೇಂದ್ರ ಗೆ ನಾಯಕಿಯಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos