ಗಿಡ ನೆಟ್ಟು ಪರಿಸರ ಪ್ರೇಮಿ ದೀಪಾವಳಿ ಆಚರಿಸಿದ ನಟರಾಜ್, ಧರ್ಮಣ್ಣ 
ಸಿನಿಮಾ ಸುದ್ದಿ

ಗಿಡ ನೆಟ್ಟು ಪರಿಸರ ಸ್ನೇಹಿ ದೀಪಾವಳಿ ಆಚರಿಸಿದ ನಟರಾಜ್, ಧರ್ಮಣ್ಣ

ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಈ ನಟ ದ್ವಯರು ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಕಡೂರು: ಇತ್ತೀಚಿನ ದಿನಗಳಲ್ಲಿ ಹೊಸತನಕ್ಕೆ ಸುದ್ದಿಯಾಗುತ್ತಿರುವ ರಾಮಾ ರಾಮಾ ರೇ ಚಿತ್ರದ ನಟರಾಜ್ ಹಾಗೂ ಧರ್ಮಣ್ಣ ಚಿತ್ರರಂಗದ ಹೊರತಾಗಿ ಸಾಮಾಜಿಕ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಈ ನಟ ದ್ವಯರು ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. 
ಪರಿಸರ ಸ್ನೇಹಿ ದೀಪಾವಳಿಯನ್ನಾಚರಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ನಟರಾಜ್, ಧರ್ಮಣ್ಣ,  ಖಳನಾಯಕನಾಗಿ ಬೆಳಕಿಗೆ ಬರುತ್ತಿರುವ ಚೇತನ್ ಹಾಗೂ ಜೇನುಗೂಡು ಯುವಕಸಂಘದ ಯುವಕರು ಕಡೂರಿನಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ದೀಪಾವಳಿಯಂದು ಪರಿಸರದಲ್ಲಿ ಗಿಡನೆಡುವ ಮೂಲಕ ಸಾಕಾರಗೊಳಿಸಿದ್ದಾರೆ. 
ಪರಿಸರ ಪ್ರೇಮಿ ಬೇವು, ನೇರಲೆ, ಹೊಂಗೆ  ಮರಗಳನ್ನು ನೆಟ್ಟಿರುವುದು ಜೇನುಗೂಡು ಯುವಕಸಂಘದ ಯುವಕರು ಆಚರಿಸಿರುವ ದೀಪಾವಳಿಯ ವಿಶೇಷ. 15 ಜನರ ತಂಡ ದಾಸರಹಳ್ಳಿ ಸುತ್ತಮುತ್ತಲು ಗಿಡ ನೆಟ್ಟಿದ್ದಾರೆ. ನಮ್ಮ ಯುವಕರ ತಂಡ ಪ್ರತೀವರ್ಷ ಹೀಗೆ ಒಬ್ಬರೇ ಹೋಗಿ ಗಿಡನೆಟ್ಟು ಬರುತ್ತಿದ್ದು ಇಂದು ಅವರ ಜೊತೆ ಒಂದು ತಂಡವೇ ಸಹಕರಿಸುತ್ತಿರುವುದು ನಮ್ಮ ಉದ್ದೇಶಕ್ಕೆ ನೂರು ಆನೆ ಬಲ ಬಂದಿದೆ ಅನ್ನುತ್ತಾರೆ  ನಟರಾಜ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT