ಟೈಗರ್ ಗಲ್ಲಿ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಸಿನಿಮಾ ಪ್ಲಾಪ್ ಆದಾಗ ಪ್ರತಿ ಭಾರಿ ನಿರ್ದೇಶಕ ಸಾಯುತ್ತಾನೆ: ರವಿ ಶ್ರೀವತ್ಸ

ಡೆಡ್ಲಿಸೋಮ, ಡೆಡ್ಲಿ-2 ನಂತರ ಸಿನಿಮಾ ನೀಡಿದ ನಿರ್ದೇಶಕ ರವಿ ಶ್ರೀವತ್ಸ ದಶಮುಖ ಚಿತ್ರದ ನಾಲ್ಕು ವರ್ಷಗಳ ನಂತರ ಮತ್ತೆ ಟೈಗರ್ ಗಲ್ಲಿ ಮೂಲಕ ...

ಬೆಂಗಳೂರು: ಡೆಡ್ಲಿಸೋಮ, ಡೆಡ್ಲಿ-2 ನಂತರ ಸಿನಿಮಾ ನೀಡಿದ ನಿರ್ದೇಶಕ ರವಿ ಶ್ರೀವತ್ಸ ದಶಮುಖ ಚಿತ್ರದ  ನಾಲ್ಕು ವರ್ಷಗಳ ನಂತರ ಮತ್ತೆ ಟೈಗರ್ ಗಲ್ಲಿ ಮೂಲಕ ಹಿಂದಿರುಗಿದ್ದಾರೆ.
ಸಿನಿಮಾ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿನಿಮಾ ಪ್ಲಾಪ್ ಆದಾಗ ಪ್ರತಿ ಸಾರಿಯೂ ನಿರ್ದೇಶಕ ಸಾಯುತ್ತಾನೆ, ಇದು ನನಗೆ ಮರು ಹುಟ್ಟು,  ಹೊಸ ಕಥೆಯೊಂದಿಗೆ ಬಂದಿದ್ದೇನೆ. ಟೈಗರ್ ಗಲ್ಲಿ ಜೊತೆ ಮತ್ತೆ ಅದೇ ಹುರುಪಿನಿಂದ, ಎದ್ದು ನಿಲ್ಲುತ್ತೇನೆ ಎಂಬ ಭರವಸೆಯಿಂದ ಬಂದಿದ್ದೇನೆ, ಎಂ.ಎನ್ ಕುಮಾರ್ ಅವರಂತ ನಿರ್ಮಾಪಕರಿಂದ ನನ್ನ ಆತ್ಮ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
2010 ರಲ್ಲಿ ಚೆನ್ನೈ ನಲ್ಲಿ ನಡೆದ ನೈಜ ಕಥೆಯೊಂದನ್ನು ಆಧರಿಸಿ ರವಿ ಟೈಗರ್ ಗಲ್ಲಿ ಕಥೆ ಬರೆದಿದ್ದಾರೆ. ಚಿತ್ರದ ನಾಯಕ ಟೈಗರ್ ಗಲ್ಲಿಯಿಂದ ಬಂದವನು, ಸ್ಥಳೀಯ ಸಂಸ್ಕೃತಿ  ಪ್ರತಿಬಿಂಬಿಸುವಂತೆ ಕಥೆ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿನಿಮಾದಲ್ಲಿ ನೀನಾಸಂ ಸತೀಶ್ ಒರಟು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ವಿವಿಧ ಜನರೇಷನ್ ಗಳ ನಡುವೆ ತೇಲುವ ಪಾತ್ರವಾಗಿದೆ, ಈ ಹೈ ವೋಲ್ಟೇಜ್ ಡ್ರಾಮಾದಲ್ಲಿ ಸ್ವಲ್ಪ ಮಟ್ಟಿಗಿನ  ಕಾಮಿಡಿಯಿದೆ ಎಂದು ವಿವರಿಸಿದ್ದಾರೆ.
ಸಾಮಾನ್ಯ ಮನುಷ್ಯನೊಬ್ಬನ ಜೀವನವನ್ನು ತೆರೆಯ ಮೇಲೆ ತರುವ ಪ್ರಯತ್ನ ಇದಾಗಿದೆ, ಪ್ರತಿಯೊಬ್ಬ ಮನುಷ್ಯನಲ್ಲಿ ಭಾವನೆಗಳ ಮಿಶ್ರಣವಿರುತ್ತದೆ. ನಾಯಕನ ಅನುಭವದಿಂದ ವ್ಯವಸ್ಥೆಯ ಬದಲಾವಣೆಗೆ ಯತ್ನಿಸುತ್ತಾನೆ ಎಂದು ತಿಳಿಸಿದ್ದಾರೆ.
ನಟ ಸುದೀಪ್ ಮತ್ತು ದುನಿಯಾ ವಿಜಯ್  ಪ್ರೋತ್ಸಾಹ ರವಿ ಶ್ರೀವತ್ಸ ಅವರ ಆತ್ಮ ವಿಶ್ವಾಸ ಹೆಚ್ಚಿಸಿದೆಯಂತೆ. ಭಾವನಾ ರಾವ್ ಮತ್ತು ರೋಶಿನಿ ಪ್ರಕಾಶ್, ನಾಯಕಿಯರಾಗಿ ನಟಿಸಲಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT