ಯಶ್ ಮತ್ತು ರಾಕ್ ಲೈನ್ ವೆಂಕಟೇಶ್ 
ಸಿನಿಮಾ ಸುದ್ದಿ

ರಾಕ್ ಲೈನ್- ರಾಕಿಂಗ್ ಸ್ಟಾರ್ ಜೋಡಿಯಲ್ಲಿ ಹೊಸ ಸಿನಿಮಾ: ಅರ್ಜುನ ರೆಡ್ಡಿ ರಿಮೇಕ್ ನಲ್ಲಿ ಯಶ್?

ತೆಲುಗಿನ ಪ್ರಸಿದ್ದ ಸಿನಿಮಾ ಅರ್ಜುನ ರೆಡ್ಡಿ ಕನ್ನಡಕ್ಕೆ ರಿಮೇಕ್ ಆಗಲಿದೆ, ವಿಜಯ ಸಾಯ್ ದೇವರಕೊಂಡ ಅಭಿನಯದ ಅರ್ಜುನ ರೆಡ್ಡಿ ಕನ್ನಡ ರಿಮೇಕ್...

ಬೆಂಗಳೂರು: ತೆಲುಗಿನ ಪ್ರಸಿದ್ದ ಸಿನಿಮಾ ಅರ್ಜುನ ರೆಡ್ಡಿ ಕನ್ನಡಕ್ಕೆ ರಿಮೇಕ್ ಆಗಲಿದೆ, ವಿಜಯ ಸಾಯ್ ದೇವರಕೊಂಡ ಅಭಿನಯದ ಅರ್ಜುನ ರೆಡ್ಡಿ ಕನ್ನಡ ರಿಮೇಕ್ ರೈಟ್ಸ್ ಅನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಖರೀದಿಸಿದ್ದಾರೆ.ಆದರೆ ಎಷ್ಟು ಕೋಟಿಗೆ ಖರೀದಿಯಾಗಿದೆ ಎಂಬುದರ ಬಗ್ಗೆ ಮಾತ್ರ ಮಾಹಿತಿಯಿಲ್ಲ.
ತಮಿಳಿನ ರಿಮೇಕ್ ರೈಟ್ಸ್ ಧನುಶ್ ಪಾಲಾಗಿದೆ.  ವಿಜಯ್ ಸಾಯ್ ದೇವರಕೊಂಡ ಅಭಿನಯದ ಪಾತ್ರವನ್ನು ಕನ್ನಡದಲ್ಲಿ ಅಷ್ಟೇ ರಫ್ ಅಂಡ್ ಭಾವನಾತ್ಮಕವಾಗಿ ಯಾರು ನಟಿಸಲಿದ್ದಾರೆ ಎಂಬುದನ್ನು ಮಾತ್ರ ನಿರ್ಮಾಪಕರು ಬಹಿರಂಗ ಪಡಿಸಿಲ್ಲ. 
ಕನ್ನಡದಲ್ಲಿ ಯಾರು ಪಾತ್ರಕ್ಕೆ ಯಾರು ಸೂಕ್ತ ನಾಯಕ ಎಂಬ ಪ್ರಶ್ನೆಗೆ ಎಲ್ಲರ ಬೆರಳು ತೋರುತ್ತಿರುವುದು ರಾಕಿಂಗ್ ಸ್ಟಾರ್ ಯಶ್ ಕಡೆಗೆ. ಅರ್ಜುನ್ ರೆಡ್ಡಿ ಕಥೆಯನ್ನು ಬಹಳವಾಗಿ ಮೆಚ್ಚಿರುವ ರಾಕ್ ಲೈನ್ ವೆಂಕಟೇಶ್,  ಆ ಪಾತ್ರಕ್ಕೆ  ಯಶ್ ರಿಂದ ಮಾತ್ರ ನ್ಯಾಯ ಒದಗಿಸಲು ಸಾಧ್ಯ ಎಂಗು ನಂಬಿದ್ದಾರೆ. ಹೀಗಾಗಿ ಅರ್ಜುನ್ ರೆಡ್ಡಿ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂದು ಇಂಡಸ್ಟ್ರಿ ಮೂಲಗಳು ತಿಳಿಸಿವೆ.
ಆಧುನಿಕ ದೇವದಾಸ್ ಕಥೆ ಚಿತ್ರದಲ್ಲಿದೆ,  ಮೂಳೆ ತಜ್ಞರೊಬ್ಬನ ಪ್ರೇಮ  ವೈಫಲ್ಯದ ಕಥೆ ಇದಾಗಿದೆ,  ಕಥೆಗೆ ರಫ್ ಅಂಡ್ ಟಫ್ ವ್ಯಕ್ತಿತ್ವದ ಅವಶ್ಯಕತೆಯಿದ್ದು, ಅದಕ್ಕೆ ಯಶ್ ಸೂಕ್ತ ಎಂಬುದು ಎಲ್ಲರ ಅಭಿಪ್ರಾಯ.
ಸದ್ಯ ಕೆಜಿಎಫ್ ಸಿನಿಮಾದಲ್ಲಿ ಯಶ್ ನಿರತರಾಗಿದ್ದಾರೆ, ಆ  ನಂತರ ನಿರ್ದೇಶಕ ಹರ್ಷ ಅವರ ರಾಣಾ ಸಿನಿಮಾಗೂ ಸಹಿ ಮಾಡಿದ್ದಾರೆ, ಹೀಗಾಗಿ ಯಾವ ಶೂಟಿಂಗ್ ನಲ್ಲಿ ಮೊದಲು ಭಾಗವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 
ಸದ್ಯ ರಾಕ್ ಲೈನ್ ವೆಂಕಟೇಶ್, ಮೋಹನ್ ಲಾಲ್ ಅಭಿನಯನ ಮಲಯಾಳಂ ನ ವಿಲ್ಲನ್ ಸಿನಿಮಾ ರಿಲೀಸ್ ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.ಜೊತೆಗೆ ಕನ್ನಡದ ವಿಐಪಿ ಸಿನಿಮಾ ಬಿಡುಗಡೆಗೂ ಸಿದ್ಧತೆ ನಡೆಸಿದ್ದಾರೆ. ಅದಾದ ನಂತರ ಪ್ರಿಯಾ ನಿರ್ದೇಶನದ  ನಿರುಪ್ ಭಂಡಾರಿ ರಾಧಿಕಾ ಪಂಡಿತ್ ಅಭಿನಯದ ಮತ್ತೊಂದು ಸಿನಿಮಾಗಾಗಿ ವೆಂಕಟೇಶ್ ಸಿದ್ಧತೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: EY ವರದಿ

Ganesh Chaturthi ಎಫೆಕ್ಟ್; ಮತ್ತೆ ಗಗನದತ್ತ ಮುಖ ಮಾಡಿದ ಚಿನ್ನದ ಬೆಲೆ, ಇಂದಿನ ದರ ಪಟ್ಟಿ ಇಂತಿದೆ!

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ: ಭೂಕುಸಿತದಿಂದ ನಾಲ್ವರು ಸಾವು

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

SCROLL FOR NEXT