ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಅನಂತು ಎದುರಾಗಿ ನುಸ್ರತ್ ಆಗಲಿರುವ ಲತಾ ಹೆಗ್ಡೆ

ರಾಜ್ ಕುಟುಂಬದ ಕುಡಿ ವಿನಯ್ ರಾಜ್​ಕುಮಾರ್ ಅಭಿನಯದ ಮೂರನೇ ಚಿತ್ರವಾಗಿ ಮೂಡಿಬರಲಿರುವ ‘ಅನಂತು ವರ್ಸಸ್ ನುಸ್ರತ್’ಚಿತ್ರದ ನಾಯಕಿಯಾಗಿ ಲತಾ ಹೆಗ್ಡೆ ಆಯ್ಕೆ ಅಂತಿಮವಾಗಿದ್ದು, ಚಿತ್ರದ ನುಸ್ರತ್ ಪಾತ್ರದಲ್ಲೇ ಲತಾ ಹೆಗ್ಡೆ ಅಭಿನಯಿಸುವುದು ಖಾತರಿಯಾಗಿದೆ.

ಬೆಂಗಳೂರು: ರಾಜ್ ಕುಟುಂಬದ ಕುಡಿ ವಿನಯ್ ರಾಜ್​ಕುಮಾರ್ ಅಭಿನಯದ ಮೂರನೇ ಚಿತ್ರವಾಗಿ ಮೂಡಿಬರಲಿರುವ ‘ಅನಂತು ವರ್ಸಸ್ ನುಸ್ರತ್’ಚಿತ್ರದ ನಾಯಕಿಯಾಗಿ ಲತಾ ಹೆಗ್ಡೆ ಆಯ್ಕೆ ಅಂತಿಮವಾಗಿದ್ದು, ಚಿತ್ರದ ನುಸ್ರತ್  ಪಾತ್ರದಲ್ಲೇ ಲತಾ ಹೆಗ್ಡೆ ಅಭಿನಯಿಸುವುದು ಖಾತರಿಯಾಗಿದೆ.
ಈ ಹಿಂದೆ ವಿನಯ್ ರಾಜ್ ಕುಮಾರ್ ಚಿತ್ರದಲ್ಲಿ ಲತಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತಾದರೂ ಯಾವ ಪಾತ್ರ ಎಂಬುದು ಖಚಿತವಾಗಿರಲಿಲ್ಲ. ಇದೀಗ ಚಿತ್ರತಂಡ ಇತ್ತೀಚೆಗೆ ನಡೆಸಿದ  ಫೋಟೋಶೂಟ್ ಈ ಬಗೆಗಿನ ವಿವರ ನೀಡಿದ್ದು, ಲತಾ ಹೆಗ್ಡೆ ನುಸ್ರತ್ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಖಚಿತವಾಗಿದೆ.

ನಗರದ ಕಾಟನ್ ಪೇಟೆಯಲ್ಲಿರುವ ಹಜರತ್ ತವಾಕಲ್ ಮಸ್ತಾನ್ ದರ್ಗಾದಲ್ಲಿ ನಟಿ ಲತಾ ಹೆಗ್ಡೆಗೆ ನುಸ್ರತ್ ಪಾತ್ರದ ವೇಷಭೂಷಣ ಧರಿಸಿ ಫೋಟೋ ಶೂಟ್ ಮಾಡಲಾಯಿತು. ಹೀಗಾಗಿ ರೊಮ್ಯಾಂಟಿಕ್ ಕಾಮಿಡಿಯಾಗಿರುವ  ಅನಂತು ವರ್ಸಸ್ ನುಸ್ರತ್ ನಲ್ಲಿ ಲತಾ ಹೆಗ್ಡೆ ನುಸ್ರತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟಿ ಲತಾ ಹೆಗ್ಡೆ ಚಿತ್ರದಲ್ಲಿನ ಪಾತ್ರದ ಕುರಿತು ನಾನು ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಆದರೆ ನಾನು ಈ  ಚಿತ್ರಕ್ಕೆ ಓಕೆ ಎಂದಿದ್ದು ಮಾತ್ರ ಈ ಪಾತ್ರಕ್ಕಾಗಿಯೇ ಎಂದು ಹೇಳಿದ್ದಾರೆ.

ಇನ್ನು ಚಿತ್ರಕ್ಕಾಗಿ ತಾವು ಹಿಜಬ್ ಧರಿಸುವ ವಿಧಾನವನ್ನು ಕಲಿಯುತ್ತಿದ್ದೇನೆ. ಇನ್ನು ಇಲ್ಲಿನ ಜನ ತುಂಬಾ ನೆರವು ನೀಡಿದರು. ಹಿಜಬ್ ಧರಿಸುವ ವಿಧಾನವನ್ನು ಹೇಳಿಕೊಡುವುದು ಮಾತ್ರವಲ್ಲದೇ ಪ್ರೋತ್ಸೋಹ ನೀಡುತ್ತಿದ್ದರು ಎಂದು  ಹೇಳಿದ್ದಾರೆ.

ಚಿತ್ರಕ್ಕೂ ಧರ್ಮಗಳಿಗೂ ಯಾವುದೇ ಸಂಬಂಧವಿಲ್ಲ. ಆದರೆ ಚಿತ್ರದಲ್ಲಿ ಪಾತ್ರಗಳು ಮಾತ್ರ ಅನ್ಯಕೋಮಿನವರದ್ದಾಗಿರುತ್ತದೆ ಎಂದು ಚಿತ್ರದ ನಿರ್ದೇಶಕ ಸುಧೀರ್ ಶಾನ್ ಬೋಗ್ ಹೇಳಿದ್ದಾರೆ.

ಅನಂತು ವರ್ಸಸ್ ನುಸ್ರತ್ ಚಿತ್ರವನ್ನು ಮಾಣಿಕ್ಯ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಅಕ್ಟೋಬರ್ ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದ್ದು, ಸುನದ್  ಗೌತಮ್ ಸಂಗೀತ ಸಂಯೋಜಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT