ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಅನಂತು ಎದುರಾಗಿ ನುಸ್ರತ್ ಆಗಲಿರುವ ಲತಾ ಹೆಗ್ಡೆ

ರಾಜ್ ಕುಟುಂಬದ ಕುಡಿ ವಿನಯ್ ರಾಜ್​ಕುಮಾರ್ ಅಭಿನಯದ ಮೂರನೇ ಚಿತ್ರವಾಗಿ ಮೂಡಿಬರಲಿರುವ ‘ಅನಂತು ವರ್ಸಸ್ ನುಸ್ರತ್’ಚಿತ್ರದ ನಾಯಕಿಯಾಗಿ ಲತಾ ಹೆಗ್ಡೆ ಆಯ್ಕೆ ಅಂತಿಮವಾಗಿದ್ದು, ಚಿತ್ರದ ನುಸ್ರತ್ ಪಾತ್ರದಲ್ಲೇ ಲತಾ ಹೆಗ್ಡೆ ಅಭಿನಯಿಸುವುದು ಖಾತರಿಯಾಗಿದೆ.

ಬೆಂಗಳೂರು: ರಾಜ್ ಕುಟುಂಬದ ಕುಡಿ ವಿನಯ್ ರಾಜ್​ಕುಮಾರ್ ಅಭಿನಯದ ಮೂರನೇ ಚಿತ್ರವಾಗಿ ಮೂಡಿಬರಲಿರುವ ‘ಅನಂತು ವರ್ಸಸ್ ನುಸ್ರತ್’ಚಿತ್ರದ ನಾಯಕಿಯಾಗಿ ಲತಾ ಹೆಗ್ಡೆ ಆಯ್ಕೆ ಅಂತಿಮವಾಗಿದ್ದು, ಚಿತ್ರದ ನುಸ್ರತ್  ಪಾತ್ರದಲ್ಲೇ ಲತಾ ಹೆಗ್ಡೆ ಅಭಿನಯಿಸುವುದು ಖಾತರಿಯಾಗಿದೆ.
ಈ ಹಿಂದೆ ವಿನಯ್ ರಾಜ್ ಕುಮಾರ್ ಚಿತ್ರದಲ್ಲಿ ಲತಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತಾದರೂ ಯಾವ ಪಾತ್ರ ಎಂಬುದು ಖಚಿತವಾಗಿರಲಿಲ್ಲ. ಇದೀಗ ಚಿತ್ರತಂಡ ಇತ್ತೀಚೆಗೆ ನಡೆಸಿದ  ಫೋಟೋಶೂಟ್ ಈ ಬಗೆಗಿನ ವಿವರ ನೀಡಿದ್ದು, ಲತಾ ಹೆಗ್ಡೆ ನುಸ್ರತ್ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಖಚಿತವಾಗಿದೆ.

ನಗರದ ಕಾಟನ್ ಪೇಟೆಯಲ್ಲಿರುವ ಹಜರತ್ ತವಾಕಲ್ ಮಸ್ತಾನ್ ದರ್ಗಾದಲ್ಲಿ ನಟಿ ಲತಾ ಹೆಗ್ಡೆಗೆ ನುಸ್ರತ್ ಪಾತ್ರದ ವೇಷಭೂಷಣ ಧರಿಸಿ ಫೋಟೋ ಶೂಟ್ ಮಾಡಲಾಯಿತು. ಹೀಗಾಗಿ ರೊಮ್ಯಾಂಟಿಕ್ ಕಾಮಿಡಿಯಾಗಿರುವ  ಅನಂತು ವರ್ಸಸ್ ನುಸ್ರತ್ ನಲ್ಲಿ ಲತಾ ಹೆಗ್ಡೆ ನುಸ್ರತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟಿ ಲತಾ ಹೆಗ್ಡೆ ಚಿತ್ರದಲ್ಲಿನ ಪಾತ್ರದ ಕುರಿತು ನಾನು ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಆದರೆ ನಾನು ಈ  ಚಿತ್ರಕ್ಕೆ ಓಕೆ ಎಂದಿದ್ದು ಮಾತ್ರ ಈ ಪಾತ್ರಕ್ಕಾಗಿಯೇ ಎಂದು ಹೇಳಿದ್ದಾರೆ.

ಇನ್ನು ಚಿತ್ರಕ್ಕಾಗಿ ತಾವು ಹಿಜಬ್ ಧರಿಸುವ ವಿಧಾನವನ್ನು ಕಲಿಯುತ್ತಿದ್ದೇನೆ. ಇನ್ನು ಇಲ್ಲಿನ ಜನ ತುಂಬಾ ನೆರವು ನೀಡಿದರು. ಹಿಜಬ್ ಧರಿಸುವ ವಿಧಾನವನ್ನು ಹೇಳಿಕೊಡುವುದು ಮಾತ್ರವಲ್ಲದೇ ಪ್ರೋತ್ಸೋಹ ನೀಡುತ್ತಿದ್ದರು ಎಂದು  ಹೇಳಿದ್ದಾರೆ.

ಚಿತ್ರಕ್ಕೂ ಧರ್ಮಗಳಿಗೂ ಯಾವುದೇ ಸಂಬಂಧವಿಲ್ಲ. ಆದರೆ ಚಿತ್ರದಲ್ಲಿ ಪಾತ್ರಗಳು ಮಾತ್ರ ಅನ್ಯಕೋಮಿನವರದ್ದಾಗಿರುತ್ತದೆ ಎಂದು ಚಿತ್ರದ ನಿರ್ದೇಶಕ ಸುಧೀರ್ ಶಾನ್ ಬೋಗ್ ಹೇಳಿದ್ದಾರೆ.

ಅನಂತು ವರ್ಸಸ್ ನುಸ್ರತ್ ಚಿತ್ರವನ್ನು ಮಾಣಿಕ್ಯ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಅಕ್ಟೋಬರ್ ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದ್ದು, ಸುನದ್  ಗೌತಮ್ ಸಂಗೀತ ಸಂಯೋಜಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT