ಮನೋರಂಜನ್ 
ಸಿನಿಮಾ ಸುದ್ದಿ

ಮನೋರಂಜನ್ 'ವಿಐಪಿ' ಅಲ್ಲ, S/o ರವಿಚಂದ್ರನ್

ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಂದ ಕಿಶೋರ್ ನಿರ್ದೇಶನ ಮನೋರಂಜನ್ ಅಭಿನಯದ ವಿಐಪಿ ಸಿನಿಮಾ ಟೈಟಲ್ S/o ರವಿಚಂದ್ರನ್ ಎಂದು...

ಬೆಂಗಳೂರು: ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಂದ ಕಿಶೋರ್ ನಿರ್ದೇಶನ ಮನೋರಂಜನ್ ಅಭಿನಯದ ವಿಐಪಿ ಸಿನಿಮಾ ಟೈಟಲ್ S/o ರವಿಚಂದ್ರನ್ ಎಂದು ಬದಲಾಯಿಸಲಾಗಿದೆ.
ಹಿಂದಿನ ಟೈಟಲ್ ತಮಿಳು ವರ್ಸನ್ ಗೆ ಲಿಂಕ್ ಆಗಿತ್ತು, ಹೀಗಾಗಿ ಟೈಟಲ್ ಬದಲಾಯಿಸಿದ್ದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಮನೋರಂಜನ್ ಹಿರಿಯ ನಟ ರವಿಚಂದ್ರನ್ ಅವರ ಪುತ್ರ, ಅದನ್ನು ಸಿನಿಮಾ ಟೈಟಲ್ ಆಗಿ ಇಟ್ಟರೇ ತಪ್ಪೇನು ಎಂದು ನಿರ್ದೇಶಕರು ಪ್ರಶ್ನಿಸಿದ್ದಾರೆ. ಈ ಸಿನಿಮಾದಲ್ಲಿ ರವಿಚಂದ್ರನ್ ನಟಿಸುತ್ತಿಲ್ಲ, ಸಾಯಿಕುಮಾರ್, ಮನೋರಂಜನ್ ತಂದೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇದು  ಪೂರ್ಣ ರಿಮೇಕ್ ಅಲ್ಲ, ಸ್ಥಳೀಯ ಸನ್ನಿವೇಶಕ್ಕೆ ಹೊಂದುವಂತೆ ಸಿನಿಮಾ ತಯಾರಿಸಲಾಗುತ್ತಿದೆ.  ಸಿನಿಮಾಗಾಗಿ ತಂತ್ರಜ್ಞರು, ಕಲಾವಿದರು ಸಮಾನವಾಗಿ ಶ್ರಮಪಡುತ್ತಿದ್ದಾರೆ. ಟೈಟಲ್ ಹೇಗೆ ಹೊಂದುತ್ತದೆ ಎಂಬುದು ಸಿನಿಮಾ ನೋಡಿದ ನಂತರ ವೀಕ್ಷಕರಿಗೆ ತಿಳಿಯಲಿದೆ.
ಸದ್ಯ ನಿರ್ದೇಶಕರು ಮತ್ತು ಚಿತ್ರ ತಂಡ ಮೈಸೂರಿನಲ್ಲಿದೆ, ನಾಯಕ-ನಾಯಕಿ ಮುಂದಿನ ದಿನಗಳಲ್ಲಿ ಮೈಸೂರಿಗೆ ಆಗಮಿಸಲಿದ್ದು ಹಾಡಿನ ಶೂಟಿಂಗ್ ನಡೆಯಲಿದೆ,  ಸಾಹೇಬ ನಂತರ S/o ರವಿಚಂದ್ರನ್ ಮನೋರಂಜನ್ 2ನೇ ಸಿನಿಮಾವಾಗಿದೆ, ಮಿಶ್ತಿ ಚಕ್ರಬೊರ್ತಿಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದರ್ಪಾಣೆ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಸುಭಾಷ್ ಘಾಯ್ ನಿರ್ದೇಶನದ ಕಾಂಚಿ ಚಿತ್ರದಲ್ಲಿ ನಟಿಸಿದ್ದಾರೆ. 
ಮನೋರಂಜನ್ ತಾಯಿಯಾಗಿ ಸಿತಾರ ನಟಿಸುತ್ತಿದ್ದಾರೆ, ಅವಿನಾಶ್, ಸಾಧು ಕೋಕಿಲಾ,  ಪ್ರಕಾಶ್ ಬೆಳವಾಡಿ, ಮುಂತಾದವರು ಅಭಿನಯಿಸಿದ್ದಾರೆ. ತಂದೆ-ಮಗನ ಬಾಂಧವ್ಯದ ಕಥೆಯುಲ್ಳ ಈ  ಸಿನಿಮಾವನ್ನು ದೀಪಾವಳಿಗೆ ರಿಲೀಸ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಅಕ್ಟೋಬರ್ ನಲ್ಲಿ ಆಡಿಯೋ ರಿಲೀಸ್ ಆಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT