ಐಶ್ವರ್ಯಾ ಪ್ರಸಾದ್ 
ಸಿನಿಮಾ ಸುದ್ದಿ

ಚಂದನವನಕ್ಕೆ ಮತ್ತೊಬ್ಬ ನಟಿ ಐಶ್ವರ್ಯಾ ಪ್ರಸಾದ್ ಎಂಟ್ರಿ

ಸ್ಯಾಂಡಲ್ ವುಡ್ ಗೆ ಇತ್ತೀಚೆಗೆ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಅವರಲ್ಲೊಬ್ಬರು ಐಶ್ವರ್ಯಾ ಪ್ರಸಾದ್...

ಸ್ಯಾಂಡಲ್ ವುಡ್ ಗೆ ಇತ್ತೀಚೆಗೆ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಅವರಲ್ಲೊಬ್ಬರು ಐಶ್ವರ್ಯಾ ಪ್ರಸಾದ್. ಅರವಿಂದ ಕೌಶಿಕ್ ನಿರ್ದೇಶನದ ಶಾರ್ದೂಲ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿರುವ ಈ ನಟಿ ನಂತರ ಗುರು ದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಯಲ್ಲಿ ಅಭಿನಯಿಸಲಿದ್ದಾರೆ.

ಶ್ರೇಯಸ್ ಮಂಜು ಅವರ ಜೊತೆಗೆ ನಾಯಕಿಯಾಗಿ ಪಡ್ಡೆಹುಲಿಯಲ್ಲಿ ಕಾಣಿಸಿಕೊಳ್ಳಲಿರುವ ಐಶ್ವರ್ಯಾ ಪ್ರಸಾದ್ ಜೊತೆಗೆ ಮತ್ತೊಬ್ಬ ನಾಯಕಿ ನಿಶ್ವಿಕಾ ನಾಯ್ಡು ಕೂಡ ಅಭಿನಯಿಸಲಿದ್ದಾರೆ.

ಮೈಸೂರು ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಐಶ್ವರ್ಯಾ ಪ್ರಸಾದ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನ ಮಾಡೆಲ್ ಆಗಿದ್ದವರು. ಮಿಸ್ ಮೈಸೂರು ಪಟ್ಟ ಗೆದ್ದುಕೊಂಡಿರುವ ಐಶ್ವರ್ಯಾ 2017ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ 10 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಪುನೀತ್ ರಾಜ್ ಕುಮಾರ್ ಜೊತೆಗೆ ಟಿವಿ ಜಾಹಿರಾತೊಂದರಲ್ಲಿ ಭಾಗಿಯಾಗಿದ್ದು ಅವರಿಗೆ ಸ್ಯಾಂಡಲ್ ವುಡ್ ಗೆ ಪ್ರವೇಶ ಪಡೆಯಲು ಸಹಾಯವಾಯಿತು ಎನ್ನುತ್ತಾರೆ.

ಬಾಲಿವುಡ್ ಸುಂದರಿ ಮೌನಿ ರಾಯ್ ಜೊತೆಗೆ ಐಶ್ವರ್ಯಾ ಅವರನ್ನು ಹೋಲಿಕೆ ಮಾಡುವುದುಂಟು, ನನಗೆ ನಟನಾ ತರಬೇತಿಗೆ ಸೇರಿದಾಗ ನಟನೆಯಲ್ಲಿ ಆಸಕ್ತಿ ಮೂಡಿತು. ಅಲ್ಲಿ ನಾನು ದೊಡ್ಡ ದೊಡ್ಡ ಜಾಹಿರಾತುಗಳು ಮತ್ತು ವಾಣಿಜ್ಯ ಬ್ರಾಂಡ್ ಪ್ರಚಾರಗಳಲ್ಲಿ ಭಾಗಿಯಾದೆ. ಮಾಡೆಲ್ ಆಗಬೇಕೆಂದರೆ ನಿಮ್ಮ ವ್ಯಕ್ತಿತ್ವವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು ಆದರೆ ನಾನು ಕಲಾವಿದೆಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸಿದೆ ಎನ್ನುತ್ತಾರೆ ಐಶ್ವರ್ಯಾ.

ಐಶ್ವರ್ಯಾ ಸಿನಿಮಾ ಹಿನ್ನೆಲೆಯವರೇನಲ್ಲ. ಅವರ ತಾತ ಚಿನ್ನಸ್ವಾಮಿ ರಾಜಕಾರಣಿ ಮತ್ತು ಮೂಲತಃ ಕೃಷಿಕ ಕುಟುಂಬ. ಈ ಚಿತ್ರದಲ್ಲಿ ಅವರು ಕಾಲೇಜಿಗೆ ಹೋಗುವ ಹುಡುಗಿ ಪಾತ್ರ ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT