ಕಾರ್ತಿಕ್ ಸುಬ್ಬರಾಜು 
ಸಿನಿಮಾ ಸುದ್ದಿ

ನಾನು ರಜನಿಕಾಂತ್ ಅವರ ಆಜೀವ ಅಭಿಮಾನಿ: ಕಾರ್ತಿಕ್ ಸುಬ್ಬರಾಜು

ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಅವರ ಇತ್ತೀಚಿನ ಚಿತ್ರ ಮರ್ಕ್ಯುರಿಗೆ ಒಳ್ಳೆಯ ಪ್ರತಿಕ್ರಿಯೆಗಳು ...

ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಅವರ ಇತ್ತೀಚಿನ ಚಿತ್ರ ಮರ್ಕ್ಯುರಿಗೆ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿದ್ದರೂ ತಮಿಳಿನಾಡಿನಲ್ಲಿ ಮುಷ್ಕರ ನಡೆಯುತ್ತಿದ್ದರಿಂದ ಇಷ್ಟು ದಿನ ಬಿಡುಗಡೆ ಮಾಡಲು ಸಾಧ್ಯವಾಗದ್ದು ಕೊನೆಗೂ ಇದೀಗ ಶುಕ್ರವಾರ ಬಿಡುಗಡೆಯಾಗುತ್ತಿದೆ.ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಮಾತಿಗಿಳಿದಾಗ:

ಚಿತ್ರತಯಾರಿಯ ಮೂಲ ನಿಯಮ ಚಿತ್ರದ ಕಥೆಯನ್ನು ನಟನೆ ಮೂಲಕ ಜನರಿಗೆ ತೋರಿಸಬೇಕೆ ಹೊರತು ಮಾತಿನ ಮೂಲಕವಲ್ಲ. ಒಳ್ಳೆಯ ಚಿತ್ರಗಳಲ್ಲಿ ಕಥೆ ಉತ್ತಮವಾಗಿರುತ್ತದೆ ಮತ್ತು ಸಂಭಾಷಣೆಗೆ ಹೆಚ್ಚಿನ ಪ್ರಾಮುಖ್ಯತೆ ಇರುವುದಿಲ್ಲ. ನಾನು ಈ ಅಂಶವನ್ನು ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಿದ್ದೇನೆ. ನಾನೊಂದು ಎಂಟು ನಿಮಿಷಗಳ ಕಿರುಚಿತ್ರ ತಯಾರಿಸಿದ್ದೆ. ಥ್ರಿಲ್ಲರ್ ಚಿತ್ರವಾದ ಅದರಲ್ಲಿ ಕೇವಲ ಎರಡೇ ಸಂಭಾಷಣೆಯಿತ್ತು, ಒಂದು ಆರಂಭದಲ್ಲಿ ಮತ್ತೊಂದು ಕೊನೆಗೆ.

ಯಾವುದೇ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾದ ಚಿತ್ರ ಮರ್ಕ್ಯುರಿಯಲ್ಲ. ಚಿತ್ರದ ಕ್ಲ್ಯೈಮಾಕ್ಸ್ ನ್ನು ಹಲವರು ಇಷ್ಟಪಟ್ಟಿದ್ದಾರೆ. ಪ್ರಭುದೇವ ಅವರ ನಟನೆ ಕೂಡ ಇಷ್ಟವಾಗಿದೆ. ತಾಂತ್ರಿಕತೆ ವಿಚಾರ ಬಂದಾಗ ದೃಶ್ಯಗಳು ಮತ್ತು ಛಾಯಾಗ್ರಹಣಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ. ಬೇರೆಲ್ಲಾ ಕಡೆ ಚಿತ್ರ ಬಿಡುಗಡೆಯಾದರೆ ತಮಿಳುನಾಡಿನಲ್ಲಿ ಮಾತ್ರ ಆಗಿರಲಿಲ್ಲ. ಇಲ್ಲಿ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದರು.

ನಾನು ರಜನಿಕಾಂತ್ ಅವರ ಬಹುದೊಡ್ಡ ಅಭಿಮಾನಿ. ಜೀವನವಿಡೀ ಅವರನ್ನು ಪ್ರೀತಿಸುತ್ತೇನೆ. ನನ್ನ ಮೊದಲ ಚಿತ್ರ ಪಿಜ್ಜಾವನ್ನು ಅವರು ನೋಡಿ ನನ್ನನ್ನು ಕರೆದು ಹರಸಿದ್ದರು. ಅದು ನನಗೆ ತುಂಬಾ ಖುಷಿ ಕೊಟ್ಟ ವಿಚಾರ. ಆದರೆ ಅವರ ಜೊತೆ ಸೇರಿಕೊಂಡು ಸಿನಿಮಾ ಮಾಡುತ್ತೇನೆಂದು ಯೋಚಿಸಿರಲೇ ಇಲ್ಲ. ಜಿಗರ್ ಥಂಡ್ ಸಿನಿಮಾ ಬಳಿಕ ರಜನಿಕಾಂತ್ ಅವರು ಹೊಸ ನಿರ್ದೇಶಕರು ಮತ್ತು ಹೊಸ ಹೊಸ ಕಥೆಗಳನ್ನು ಒಪ್ಪಿಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ನಾನೊಂದು ಕಥೆಯನ್ನು ಆರಿಸಿಕೊಂಡೆ, ಅದು ಅವರಿಗೆ ನಿಜಕ್ಕೂ ಇಷ್ಟವಾಯಿತು. ನನ್ನ ಕನಸು ನನಸಾದ ಸಂದರ್ಭವದು. ರಜನಿಕಾಂತ್ ಅವರ ಜೊತೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಈ ಸಿನಿಮಾ ಒಂದು ಹಂತಕ್ಕೆ ತಲುಪಿದ್ದು ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ ಎಂದು ಕಾರ್ತಿಕ್ ಸುಬ್ಬರಾಜು ವಿವರಿಸಿದರು,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT