ರಚಿತಾ ರಾಮ್ 
ಸಿನಿಮಾ ಸುದ್ದಿ

’ಅಯೋಗ್ಯ’ ನನಗೆ ಹಳ್ಳಿ ಜೀವನಶೈಲಿಯನ್ನು ಕಲಿಸಿದೆ: ರಚಿತಾ ರಾಮ್

ಮಹೇಶ್ ಕುಮಾರ್ ನಿರ್ದೇಶನದ ’ಅಯೋಗ್ಯ’ ಚಿತ್ರದ ಚಿತ್ರೀಕರಣ ಕೊನೆ ಹಂತಕ್ಕೆ ತಲುಪಿದೆ. ನಟಿ ರಚಿತಾ ರಾಮ್ ತಮ್ಮ ಪಾಲಿನ ಚಿತ್ರೀಕರಣ ಪೂರೈಸಿದ್ದಾರೆ.

ಬೆಂಗಳೂರು: ಮಹೇಶ್ ಕುಮಾರ್ ನಿರ್ದೇಶನದ ’ಅಯೋಗ್ಯ’ ಚಿತ್ರದ ಚಿತ್ರೀಕರಣ ಕೊನೆ ಹಂತಕ್ಕೆ ತಲುಪಿದೆ. ನಟಿ ರಚಿತಾ ರಾಮ್ ತಮ್ಮ ಪಾಲಿನ ಚಿತ್ರೀಕರಣ ಪೂರೈಸಿದ್ದಾರೆ.
ಸತೀಶ್ ನೀನಾಸಮ್ ಅವರೊಂದಿಗಿನ ಮಂಡ್ಯದಲ್ಲಿ ಕೊನೆ ದಿನದ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಚಿತಾ "ಜಾನಿ ಜಾನಿ ಯಸ್ ಪಪ್ಪಾ ಚಿತ್ರದಲ್ಲಿ ನನ್ನದು ವೆಸ್ಟರ್ನ್ ಶೈಲಿಯ ಪಾತ್ರ, ಇದೇ ಅಯೋಗ್ಯ ದಲ್ಲಿ ಶುದ್ದ ಹಳ್ಳಿ ಹುಡುಗಿಯ ಪಾತ್ರ. ಅಯೋಗ್ಯ ಚಿತ್ರದಲ್ಲಿ ಅಭಿನಯಿಸಿದ ನನಗೆ ಹಳ್ಳಿ ಜೀವನಶೈಲಿಯ ಅನುಭವ ದೊರಕಿದೆ ಅಲ್ಲದೆ ಮಂಡ್ಯ ಕಡೆಯ ಕನ್ನಡ ಕಲಿಯುವುದು ಸಾಧ್ಯವಾಗಿತ್ತು. ’ಏನ್ಲಾ ನೋಡ್ತಿವ್ನಿ, ತುಂಬಾ ಅತಿಯಾಗ್ ಆಡ್ತೀಯಾ ಹೋಗ್ಲಾ ಹಿಂದೆ’ ಇಂತಹಾ ಸಂಬಾಷಣೆಗಳನ್ನು ಅಭ್ಯಾಸ ಮಾಡಬೇಕಾಗಿತ್ತು 
"ಮಂಡ್ಯ, ಬೆಂಗಳೂರು ಎರಡೂ ಕರ್ನಾಟಕದ ಭಾಗಗಳಾದರೂ ಮಾತಿನ ಶೈಲಿಯಲ್ಲಿ ವ್ಯತ್ಯಾಸವಿದೆ." ಹೇಳಿದ್ದಾರೆ.ಚಿತ್ರದಲ್ಲಿ ದ್ವನಿ ಕಲಾವಿದೆ (ಡಬ್ಬಿಂಗ್ ಆರ್ಟಿಸ್ಟ್) ಸಹ ಆಗಿರುವ ರಚಿತಾ ತಾವು ಸ್ಟುಡಿಯೋ ಪ್ರವೇಶಿಸುವ ಮುನ್ನ ತಮ್ಮ ಮಂಡ್ಯ ಭಾಷೆಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳ ಬಯಸುತ್ತಾರೆ.
"ಅಯೋಗ್ಯ ಸೆಟ್ ನಲ್ಲಿ ಕಳೆದ ಪ್ರತಿಯೊಂದು ದಿನವೂ ನಾನು ಹಳ್ಳಿ ವಾತಾವರಣದ ವಿಭಿನ್ನ ಅಂಶಗಳನ್ನು ಕಂಡುಕೊಂಡೆ." ನಟಿ ಹೇಳಿದ್ದಾರೆ.
ಸಧ್ಯ ಚಿತ್ರತಂಡ ಚಿತ್ರದ ಪರಿಚಯ ದೃಶ್ಯದ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದು ಮುಂದಿನ ವಾರ ಈ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಾಣದ ಈ ಚಿತ್ರದ ಆಡಿಯೋ ಮೇ ಮಧ್ಯ ಭಾಗದಲ್ಲಿ ಬಿಡುಗಡೆಯಾಗಲಿದೆ. ಜೂನ್ 1ಕ್ಕೆ ಚಿತ್ರ ತೆರೆ ಮೇಲೆ ಬರಲಿದೆ.
ರಚಿತಾ ರಾಮ್ ಸಧ್ಯ ಅಯೋಗ್ಯ ಚಿತ್ರದ ಬಳಿಕ ಸೀತಾರಾಮ ಕಲ್ಯಾಣ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದು ಈ ಚಿತ್ರದ ಶೂಟಿಂಗ್ ಮೇ 2 ರಿಂದ ಆರಂಭವಾಗಲಿದೆ.
ಪುನೀತ್ ರಾಜ್ ಕುಮಾರ್ ಅಭಿನಯದ, ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರದಲ್ಲಿ ಸಹ ರಚಿತಾ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT