ರಚಿತಾ ರಾಮ್ 
ಸಿನಿಮಾ ಸುದ್ದಿ

’ಅಯೋಗ್ಯ’ ನನಗೆ ಹಳ್ಳಿ ಜೀವನಶೈಲಿಯನ್ನು ಕಲಿಸಿದೆ: ರಚಿತಾ ರಾಮ್

ಮಹೇಶ್ ಕುಮಾರ್ ನಿರ್ದೇಶನದ ’ಅಯೋಗ್ಯ’ ಚಿತ್ರದ ಚಿತ್ರೀಕರಣ ಕೊನೆ ಹಂತಕ್ಕೆ ತಲುಪಿದೆ. ನಟಿ ರಚಿತಾ ರಾಮ್ ತಮ್ಮ ಪಾಲಿನ ಚಿತ್ರೀಕರಣ ಪೂರೈಸಿದ್ದಾರೆ.

ಬೆಂಗಳೂರು: ಮಹೇಶ್ ಕುಮಾರ್ ನಿರ್ದೇಶನದ ’ಅಯೋಗ್ಯ’ ಚಿತ್ರದ ಚಿತ್ರೀಕರಣ ಕೊನೆ ಹಂತಕ್ಕೆ ತಲುಪಿದೆ. ನಟಿ ರಚಿತಾ ರಾಮ್ ತಮ್ಮ ಪಾಲಿನ ಚಿತ್ರೀಕರಣ ಪೂರೈಸಿದ್ದಾರೆ.
ಸತೀಶ್ ನೀನಾಸಮ್ ಅವರೊಂದಿಗಿನ ಮಂಡ್ಯದಲ್ಲಿ ಕೊನೆ ದಿನದ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಚಿತಾ "ಜಾನಿ ಜಾನಿ ಯಸ್ ಪಪ್ಪಾ ಚಿತ್ರದಲ್ಲಿ ನನ್ನದು ವೆಸ್ಟರ್ನ್ ಶೈಲಿಯ ಪಾತ್ರ, ಇದೇ ಅಯೋಗ್ಯ ದಲ್ಲಿ ಶುದ್ದ ಹಳ್ಳಿ ಹುಡುಗಿಯ ಪಾತ್ರ. ಅಯೋಗ್ಯ ಚಿತ್ರದಲ್ಲಿ ಅಭಿನಯಿಸಿದ ನನಗೆ ಹಳ್ಳಿ ಜೀವನಶೈಲಿಯ ಅನುಭವ ದೊರಕಿದೆ ಅಲ್ಲದೆ ಮಂಡ್ಯ ಕಡೆಯ ಕನ್ನಡ ಕಲಿಯುವುದು ಸಾಧ್ಯವಾಗಿತ್ತು. ’ಏನ್ಲಾ ನೋಡ್ತಿವ್ನಿ, ತುಂಬಾ ಅತಿಯಾಗ್ ಆಡ್ತೀಯಾ ಹೋಗ್ಲಾ ಹಿಂದೆ’ ಇಂತಹಾ ಸಂಬಾಷಣೆಗಳನ್ನು ಅಭ್ಯಾಸ ಮಾಡಬೇಕಾಗಿತ್ತು 
"ಮಂಡ್ಯ, ಬೆಂಗಳೂರು ಎರಡೂ ಕರ್ನಾಟಕದ ಭಾಗಗಳಾದರೂ ಮಾತಿನ ಶೈಲಿಯಲ್ಲಿ ವ್ಯತ್ಯಾಸವಿದೆ." ಹೇಳಿದ್ದಾರೆ.ಚಿತ್ರದಲ್ಲಿ ದ್ವನಿ ಕಲಾವಿದೆ (ಡಬ್ಬಿಂಗ್ ಆರ್ಟಿಸ್ಟ್) ಸಹ ಆಗಿರುವ ರಚಿತಾ ತಾವು ಸ್ಟುಡಿಯೋ ಪ್ರವೇಶಿಸುವ ಮುನ್ನ ತಮ್ಮ ಮಂಡ್ಯ ಭಾಷೆಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳ ಬಯಸುತ್ತಾರೆ.
"ಅಯೋಗ್ಯ ಸೆಟ್ ನಲ್ಲಿ ಕಳೆದ ಪ್ರತಿಯೊಂದು ದಿನವೂ ನಾನು ಹಳ್ಳಿ ವಾತಾವರಣದ ವಿಭಿನ್ನ ಅಂಶಗಳನ್ನು ಕಂಡುಕೊಂಡೆ." ನಟಿ ಹೇಳಿದ್ದಾರೆ.
ಸಧ್ಯ ಚಿತ್ರತಂಡ ಚಿತ್ರದ ಪರಿಚಯ ದೃಶ್ಯದ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದು ಮುಂದಿನ ವಾರ ಈ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಾಣದ ಈ ಚಿತ್ರದ ಆಡಿಯೋ ಮೇ ಮಧ್ಯ ಭಾಗದಲ್ಲಿ ಬಿಡುಗಡೆಯಾಗಲಿದೆ. ಜೂನ್ 1ಕ್ಕೆ ಚಿತ್ರ ತೆರೆ ಮೇಲೆ ಬರಲಿದೆ.
ರಚಿತಾ ರಾಮ್ ಸಧ್ಯ ಅಯೋಗ್ಯ ಚಿತ್ರದ ಬಳಿಕ ಸೀತಾರಾಮ ಕಲ್ಯಾಣ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದು ಈ ಚಿತ್ರದ ಶೂಟಿಂಗ್ ಮೇ 2 ರಿಂದ ಆರಂಭವಾಗಲಿದೆ.
ಪುನೀತ್ ರಾಜ್ ಕುಮಾರ್ ಅಭಿನಯದ, ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರದಲ್ಲಿ ಸಹ ರಚಿತಾ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT