ಸಿನಿಮಾ ಸುದ್ದಿ

ಪವನ್‌ ಕಲ್ಯಾಣ್ ಅವರನ್ನು ನಿಂದಿಸಿದ ಶ್ರೀರೆಡ್ಡಿ; ಅಭಿಮಾನಿಗಳ ಟ್ರೋಲ್ ಗೆ ಗುರಿಯಾದ ನಟಿ

Vishwanath S
ಟಾಲಿವುಡ್ ನಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ದನಿ ಎತ್ತಿರುವ ನಟಿ ಶ್ರೀರೆಡ್ಡಿ ಇತ್ತೀಚೆಗಷ್ಟೇ ಫಿಲ್ಮಂ ಚೇಬರ್ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಇದೀ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಇದಕ್ಕೆ ಪವನ್ ಅಭಿಮಾನಿಗಳು ಶ್ರೀರೆಡ್ಡಿಯನ್ನು ಟ್ರೋಲ್ ಮಾಡುತ್ತಿದ್ದಾರೆ. 
ಈ ವಿಷಯದಲ್ಲಿ ತಮ್ಮ ನೆರವಿಗೆ ಪವನ್ ಕಲ್ಯಾಣ್ ಅವರು ಬರಬೇಕು ಎಂದು ಶ್ರೀರೆಡ್ಡಿ ಕೇಳಿಕೊಂಡಿದ್ದರು. ಆದರೆ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿದ ಪವನ್ ಕಲ್ಯಾಣ್ ಮೌನಕ್ಕೆ ಶರಣಾಗಿದ್ದರು. ಅಲ್ಲದೆ ತಮಗೆ ಅನ್ಯಾಯವಾಗಿದ್ದರೆ ಪೊಲೀಸ್ ಠಾಣೆಗೆ ಹೋಗಬೇಕು ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಬಂದರೆ ಪ್ರಯೋಜನವಿಲ್ಲ ಎಂದು ಹೇಳಿದ್ದರು. 
ಪವನ್ ಕಲ್ಯಾಣ್ ಅವರ ಈ ಹೇಳಿಕೆಯಿಂದ ಕೆರಳಿದ ಶ್ರೀರೆಡ್ಡಿ ಪವನ್ ಕಲ್ಯಾಣ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಅಲ್ಲದೆ ಅವರ ಮಧ್ಯದ ಬೆರಳು ತೋರಿಸಿ ಪವನ್ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು. 
ಅಲ್ಲದೆ ಪವನ್ ರನ್ನು ಅಣ್ಣಾ ಅಂತ ಕರೆದಿದ್ದಕ್ಕೆ ನನ್ನ ಚಪ್ಪಲಿ ತಗೊಂಡು ನಾನೇ ಹೊಡ್ಕೋಬೇಕು ಎಂದು ಹೇಳುತ್ತಾ ಶ್ರೀರೆಡ್ಡಿ ಸ್ವತಃ ತಮ್ಮ ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದುಕೊಂಡು ಕೆನ್ನೆಗೆ ಹೊಡೆದುಕೊಂಡರು. ಮೂರು ಜನ ಹೆಣ್ಣುಮಕ್ಕಳನ್ನು ಮದುವೆಯಾಗಿ ಮೋಸ ಮಾಡಿರುವ ಅವನಿಗೆ ಮಹಿಳೆಯರ ಮೇಲೆ ಒಂಚೂರು ಕರುಣೆ ಇಲ್ಲ. ಪವನ್ ರಿಂದಲೇ ಮಹಿಳಾ ಜಾತಿಗೆ ಅವಮಾನ ಎಂದು ಹೇಳಿದ್ದರು. 
ಶ್ರೀರೆಡ್ಡಿಯ ಈ ವರ್ತನೆ ವಿರುದ್ಧ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಕೆರಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶ್ರೀರೆಡ್ಡಿ ಕುರಿಂತತೆ ಕಟು ಟೀಕೆಗಳನ್ನು ಮಾಡುತ್ತಿದ್ದಾರೆ.
SCROLL FOR NEXT