ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಯಾವುದೇ ಪಾತ್ರದಲ್ಲಿ ನಟಿಸಲು ಹಿಂದೇಟು ಹಾಕುವುದಿಲ್ಲ, ಭೈರಾದೇವಿ ಸ್ಕ್ರಿಪ್ಟ್ ನೀಡಲು ಹಲವು ನಿರ್ದೇಶಕರಿಗೆ ಸವಾಲಾಗಿತ್ತು, ಆದರೆ ನವರಸನ್ ಎಂಬ ನಿರ್ದೇಶಕರು ಮಾತ್ರ ಯಾವುದೇ ಹಿಂಜರಿಕೆಯಿಲ್ಲದೇ ಮಹಿಳಾ ಪ್ರಧಾನ ಚಿತ್ರವಾದ ದಮಯಂತಿಯಲ್ಲಿ ನಟಿಸಲು ರಾಧಿಕಾ ಕುಮಾರ ಸ್ವಾಮಿ ಅವರಲ್ಲಿ ಆಸಕ್ತಿ ಮೂಡಿಸಿದ್ದಾರೆ.
ಚಿತ್ರದ ಟೈಟಲ್ ಭಾರೀ ಕುತೂಹಲ ಸೃಷ್ಟಿಸಿದ್ದು, ಶೀರ್ಷಿಕೆಯನ್ನು ಇನ್ನು ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಬೇಕಿದೆ, ಅಧಿಕೃತವಾಗಿ ಪ್ರಕಟಿಸುವ ಮೊದಲು ವಾಣಿಜ್ಯ ಮಂಡಳಿ ಅನುಮೋದನೆಗಾಗಿ ನಿರ್ದೇಶಕರು ಕಾಯುತ್ತಿದ್ದಾರೆ,
ತೆಲುಗಿನ ಅರುಂಧತಿ ಮತ್ತು ಭಾಗಾಮತಿ ಸಿನಿಮಾಗಳಂತೆ ದಮಯಂತಿ ಸಿನಿಮಾ ತಯಾರಿಸಲು ಸಿದ್ದತೆ ನಡೆಸಲಾಗುತ್ತಿದೆ. ಈ ಸಿನಿಮಾಗಾಗಿ ಅತಿದೊಡ್ಡ ಮೊತ್ತದ ಹಣವನ್ನು ಮೀಸಲಿಡಲಾಗಿದೆ,. ಮೊದಲಿಗೆ ಕನ್ನಡದಲ್ಲಿ ನಂತರ ತಮಿಳು ಮತ್ತು ಕೆಲುಗಿನಲ್ಲಿ ನಿರ್ಮಿಸಲಾಗುತ್ತದೆ ಎಂದು ನಿರ್ದೇಶಕ ನವರಸನ್ ತಿಳಿಸಿದ್ದಾರೆ. ಜೊತೆಗೆ ಸಿನಿಮಾ ನಿರ್ಮಾಣದ ಹೊಣೆ ಕೂಡ ಹೊತ್ತಿದ್ದಾರೆ.
ಚಿತ್ರಕಥೆ ಓದಿದ ನಂತರ ಚಿತ್ರದಲ್ಲಿ ನಟಿಸುವುದಕ್ಕೆ ರಾಧಿಕಾರ ಒಪ್ಪಿಗೆ ನೀಡಿದ್ದಾರೆ, ಡಾಟೆಡ್ ಲೈನ್ ಮೇಲೆ ಸಹಿ ಹಾಕಿದ ನಂತರ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ,
ಸದ್ಯ ಕೈತುಂಬಾ ಕೆಲಸವಿರುವ ರಾಧಿಕಾ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ, ತಮ್ಮದೇ ಪ್ರೊಡಕ್ಷನ್ ನಲ್ಲಿ ಬೈರಾದೇವಿ ನಿರ್ಮಾಣವಾಗುತ್ತಿದ್ದು, ರವಿಚಂದ್ರನ್ ಜೊತೆ ರಾಜೇಂದ್ರ ಪೊನ್ನಪ್ಪ ಹಾಗೂ ಅರ್ಜುನ್ ಸರ್ಜಾ ಜೊತೆ ಕಾಂಟ್ರಾಕ್ಟ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos