ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

ಕೊಡಗು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ 10 ಲಕ್ಷ ರೂ ನೀಡಿದ ಶಿವರಾಜ್ ಕುಮಾರ್

ಕೊಡುಗು ಜಿಲ್ಲೆ ಭಾರೀ ಮಳೆ, ಪ್ರವಾಹದಿಂದ ನಲುಗಿ ಹೋಗಿದ್ದು ಅಲ್ಲಿನ ನೆರೆ ಸಂತ್ರಸ್ತರಿಗೆ ರಾಜ್ಯಾದ್ಯಂತ ನಾನಾ ಕಡೆಗಳಿಂದ ಬಟ್ಟೆ, ಔಷಧ, ಆಹಾರ ಸೇರಿದಂತೆ ಅಪಾರ ನೆರವು ಹರಿದು ಬರುತ್ತಿದೆ.

ಬೆಂಗಳೂರು: ಕೊಡುಗು ಜಿಲ್ಲೆ ಭಾರೀ ಮಳೆ, ಪ್ರವಾಹದಿಂದ ನಲುಗಿ ಹೋಗಿದ್ದು ಅಲ್ಲಿನ ನೆರೆ ಸಂತ್ರಸ್ತರಿಗೆ ರಾಜ್ಯಾದ್ಯಂತ ನಾನಾ ಕಡೆಗಳಿಂದ ಬಟ್ಟೆ, ಔಷಧ, ಆಹಾರ ಸೇರಿದಂತೆ ಅಪಾರ ನೆರವು ಹರಿದು ಬರುತ್ತಿದೆ.
ಈ ನಡುವೆ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಲಿದ್ದಾರೆ. ಇಂದು ೯ಸೋಮವಾರ) ಸಂಜೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚೆಕ್ ಹಸ್ತಾಂತರಿಸುವುದಾಗಿ ಅವರು ಹೇಳಿದ್ದಾರೆ.
ಇನ್ನು ಉತ್ತಮ ಪ್ರಜಾಕೀಯ ಪಕ್ಷದ ಸಾರಥಿ, ರಿಯಲ್ ಸ್ಟಾರ್ ಉಪೇಂದ್ರ ಸಹ ಕೊಡಗಿನ ಪ್ರವಾಹದ ಕುರಿತಂತೆ ಮಾತನಾಡಿ "ಕೊಡವರ ಅಗತ್ಯಕ್ಕೆ ಮಿಗಿಲಾಗಿ ಅಗತ್ಯ ವಸ್ತುಗಳೂ ತಲುಪಿದೆ. ಆದರೆ ಅವರ ಸಮಸ್ಯೆಗಳು ಮಾತ್ರ ಬೇರೆಯದೇ ಆಗಿದ್ದು ಸರ್ಕಾರ ಈಗಲೇ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಿ ತನ್ನ ಜವಾಬ್ದಾರಿ ಮೆರೆಯಬೇಕು" ಎಂದರು.
ಇನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಸಹ ಕೊಡವರ ಪರ ಕಾಳಜಿ ಸೂಚಿಸಿದ್ದು "ಸರ್ಕಾರದ ನೆರವಿಗಾಗಿ ಕಾಯುವುದು ಸರಿಯಲ್ಲ, ನಾವೇ ಮುಂದೆ ನಿಂತು ಕೊಡಗನ್ನು ಮರು ನಿರ್ಮಾಣ ಮಾಡುವುದು ಹೇಗೆ ಎನ್ನುವುದನ್ನು ಯೋಚಿಸಬೇಕು. ನಾವೇ ಸರ್ಕಾರದ ರೀತಿ ಕೆಲಸಕ್ಕೆ ಮುಂದಾಗಬೇಕು" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT