ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಹೈದ್ರಾಬಾದ್ ನಲ್ಲಿ 'ಅಯೋಗ್ಯ' ಚಿತ್ರ ಪ್ರದರ್ಶನಕ್ಕೆ ಸಂಕಷ್ಟ!

ಅಯೋಗ್ಯ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಬ್ಲಾಕ್ ಬುಸ್ಟರ್ ಎಂಬ ಪ್ರಶಂಸೆಗೂ ಪಾತ್ರವಾಗಿದೆ. ಆದರೆ. ಹೈದಾರಾಬಾದಿನಲ್ಲಿ ಚಿತ್ರ ಪ್ರದರ್ಶನಕ್ಕೆ ಹೋರಾಟ ಎದುರಾಗಿದೆ.

ಇತ್ತೀಚಿಗೆ ತೆರೆಕಂಡ ಮಹೇಶ್ ಕುಮಾರ್ ನಿರ್ದೇಶನದ ನೀನಾಸಾಂ ಸತೀಶ್ ಹಾಗೂ ರಚಿತಾ ರಾಮ್ ಅಭಿಯನದ  ಅಯೋಗ್ಯ ಚಿತ್ರ  ರಾಜ್ಯಾದ್ಯಂತ  ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಬ್ಲಾಕ್ ಬುಸ್ಟರ್ ಎಂಬ ಪ್ರಶಂಸೆಗೂ ಪಾತ್ರವಾಗಿದೆ. ಆದರೆ. ಹೈದಾರಾಬಾದಿನಲ್ಲಿ  ಚಿತ್ರ ಪ್ರದರ್ಶನಕ್ಕೆ ಹೋರಾಟ ಎದುರಾಗಿದೆ.

ಇತ್ತೀಚಿಗೆ ತೆರೆಕಂಡ ತೆಲುಗು, ಮತ್ತು ತಮಿಳು ಚಿತ್ರಗಳು ಹೈದಾರಾಬಾದಿನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿವೆ ಆದರೆ ಹಂಚಿಕೆದಾರರು ಕನ್ನಡ ಚಿತ್ರ ಬಿಡುಗಡೆಗೆ  ಆಸಕ್ತಿ ತೋರುತ್ತಿಲ್ಲ. ಅಲ್ಲಿನ ಮಲ್ಟಿಪ್ಲೆಕ್ಸ್ ಗಳಾಗಲೀ ಅಥವಾ  ಚಿತ್ರಮಂದಿರಗಳಾಗಲೀ ಒಂದು ಬಾರಿಯೂ ಆಯೋಗ್ಯ ಪ್ರದರ್ಶನಕ್ಕೆ  ಅವಕಾಶ ನೀಡುತ್ತಿಲ್ಲ ಎಂದು  ಹೊರ ರಾಜ್ಯಗಳಲ್ಲಿ ಚಿತ್ರ ಬಿಡುಗಡೆಯ ಹಕ್ಕು ತೆಗೆದುಕೊಂಡಿರುವ  ಹಂಚಿಕೆದಾರ ಯಶಸ್ ನಾಗ್ ಹೇಳುತ್ತಿದ್ದಾರೆ ಎಂದು  ಮಹೇಶ್ ಕುಮಾರ್ ಹೇಳಿದ್ದಾರೆ.

ಒಂದು ವೇಳೆ ತೆಲುಗು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬರದಿದ್ದರೆ ಮಾತ್ರ ಕನ್ನಡ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈ ವಿಚಾರದಲ್ಲಿ  ಹೈದ್ರಾಬಾದ್ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ ಏನನ್ನೂ ಹೇಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತೆಲುಗು ಚಿತ್ರಗಳನ್ನು ಕರ್ನಾಟಕದಲ್ಲಿ ಅದ್ದೂರಿಯಾಗಿ  ಬಿಡುಗಡೆ ಆಗುವುದಲ್ಲದೇ, ಬೃಹತ್ ಪ್ರಮಾಣದಲ್ಲಿ ಗಳಿಕೆ ಮಾಡುತ್ತವೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿ ಪರ್ಯಾಯ ಮಾರ್ಗದ ಬಗ್ಗೆ ನೆರವು ಪಡೆಯಲಾಗುವುದು ಎಂದು ಮಹೇಶ್ ಕುಮಾರ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Coal mafia: ಜಾರ್ಖಂಡ್-ಪಶ್ಚಿಮ ಬಂಗಾಳದಲ್ಲಿ 40 ಕ್ಕೂ ಹೆಚ್ಚು ಸ್ಥಳಗಳ ಮೇಲೆ ED ದಾಳಿ, ತೀವ್ರ ಶೋಧ

LKG, UKG in Anganwadis: ರಾಜ್ಯದ 5000 ಅಂಗನವಾಡಿಗಳಲ್ಲಿ ನ.28ರಿಂದ ತರಗತಿಗಳು ಆರಂಭ..!

'7 ಕಿ.ಮೀ ಉದ್ದ, 25 ಮೀಟರ್ ಆಳ, 80 ರೂಮ್ ಗಳು': ಪಾತಾಳದಲ್ಲಿ 'ಹಮಾಸ್' ಲೋಕ ಪತ್ತೆ ಮಾಡಿದ ಇಸ್ರೇಲ್! Video

ಆಫೀಸ್ ರೋಮ್ಯಾನ್ಸ್ ಎಫೆಕ್ಟ್: 150 ಕೋಟಿ ರೂ. ಸಂಬಳದ ಉದ್ಯೋಗ ಕಳೆದುಕೊಂಡ ಲಾಯ್ಡ್ಸ್ ಮಾಜಿ ಸಿಇಒ John Neal!

ಅಯ್ಯಪ್ಪ ಸ್ವಾಮಿ ಕಠಿಣ ವ್ರತ: ಶಬರಿಮಲೆ ಉಪವಾಸ ಹೇಗೆ ಪ್ರಾರಂಭಿಸಬೇಕು? 41 ದಿನಗಳವರೆಗೆ ಬ್ರಹ್ಮಚರ್ಯ ಏಕೆ ಪಾಲಿಸಬೇಕು?

SCROLL FOR NEXT