ತ್ರಾಟಕ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಅತೀಂದ್ರಿಯ ಶಕ್ತಿ, ಯೋಗ ಜತೆಗೊಂದು ಕೊಲೆಯ ರಹಸ್ಯ: ಇದುವೇ ತ್ರಾಟಕ!

ಈ ವಾರ ತೆರೆ ಕಾಣುತ್ತಿರುವ ಬಹುನಿರೀಕ್ಷಿತ ಚಿತ್ರ "ತ್ರಾಟಕ" ನಿರ್ದೇಶಕ ಶಿವ ಗಣೇಶ್ ಚಿತ್ರದ ವಿಇವಿಧ ವಿಭಾಗಗಳ ಕುರಿತಂತೆ ಮಾತನಾಡಿದ್ದಾ

ಬೆಂಗಳೂರು: ಈ ವಾರ ತೆರೆ ಕಾಣುತ್ತಿರುವ ಬಹುನಿರೀಕ್ಷಿತ ಚಿತ್ರ "ತ್ರಾಟಕ" ನಿರ್ದೇಶಕ ಶಿವ ಗಣೇಶ್ ಚಿತ್ರದ ವಿಇವಿಧ ವಿಭಾಗಗಳ ಕುರಿತಂತೆ ಮಾತನಾಡಿದ್ದಾರೆ. ಮೊದಲಿಗೆ "ತ್ರಾಟಕ" ಶೀರ್ಷಿಕೆ ಸಂಬಂಧ ವಿವರಿಸಿರುವ ನಿರ್ದೇಶಕರು ಇದು ಯೋಗದ ಒಂದು ರೂಪ. ಇದಕ್ಕೆ ಕ್ವಾಂಟಮ್ ಕಾನ್ಸಂಟ್ರೇಷನ್ ಎಂದೂ ಕರೆಯಲಾಗುವುದು ಎಂದರು.
"ಕಥೆ ಉತ್ತಮವಾಗಿದೆ.ಇದೊಂದು ಕೊಲೆ ರಹಸ್ಯವಾಗಿದ್ದು ನಾಯಕನ ಪಾತ್ರ ಪೊಲೀಸ್ ಅಧಿಕಾರಿಯ ವೈಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ.ಒಂದು ಪ್ರಕರಣ ಬೇಧಿಸಲು ಹೊರಟಾಗ ಅವರು ಹೇಗೆ ಹೋರಾಟ ನಡೆಸುತ್ತಾರೆ?ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದರೊಡನೆ ಅವರು ಅಪರೂಪದ ಖಾಯಿಲೆಯಾದ ಕಾಂಪ್ಲೆಕ್ಸ್ ಪಾರ್ಷಿಯಲ್ ಸೀಜರ್ ಎನ್ನುವ ರೋಗದಿಂಡ ಬಳಲುತ್ತಿರುತ್ತಾನೆ.
ಈ ರೋಗದಿಂದ ಮುಕ್ತನಾಗಲು ಪೋಲೀಸ್ ಅಧಿಕಾರಿಯು ತ್ರಾಟಕ ಯೋಗವನ್ನು ಅಭ್ಯಾಸ ಮಾಡುತ್ತಿರುತ್ತಾರೆ.ಎಂದು ನಿರ್ದೇಶಕ ವಿವರಿಸಿದರು.
ಮನಃಶಾಸ್ತ್ರದ ಕುರಿತಂತೆ ಶಿವ ಗಣೇಶ್ ಓದಿದ್ದ ಲೇಖನವು "ತ್ರಾಟಕ" ಚಿತ್ರದ ಹುತ್ತಿಗೆ ಮೂಲ ಕಾರಣವಾಗಿದೆ."ಅತೀಂದ್ರಿಯ ವ್ಯಕ್ತಿಯನ್ನು ಕಂಡುಹಿಡಿಯುವಲ್ಲಿ ಕೆಲವು ಮಾದರಿಗಳಿವೆ. ಈ ಸಂಬಂಧ ನ್ಯೂಯಾರ್ಕ್ ನಲ್ಲಿ 150 ಜನರ ಮೇಲೆ ಪ್ರಯೋಗ ನಡೆದಿದೆ.ಮತ್ತು ಅವರೆಲ್ಲರಿಗೆ ಅತೀಂದ್ರಿಯ ಶಕ್ತಿ ಬಗೆಗೆ ಒಂದೇ ಉತ್ತರ ದೊರಕಿದೆ. ನಾನು ನನ್ನ ಚಿತ್ರದಲ್ಲಿ ಕೊಲೆ ರಹಸ್ಯದಲ್ಲಿ ಇದನ್ನು ಬೆರೆಸಿಕೊಂಡಿದ್ದೇನೆ ಎಂದು ಶಿವ ಗಣೇಶ್ ಹೇಳಿದ್ದಾರೆ.
ಈ ಚಿತ್ರದಲ್ಲಿ ರಾಹುಲ್ ಐನಾಪುರ, ಅಜಿತ್ ಜಯರಾಜ್, ಹೃದಯ ಆವಂತಿ,  ಭವಾನಿ ಪ್ರಕಾಶ್, ಯಶ್ ಶೆಟ್ಟಿ, ಅಕ್ಷತಾ, ನಂದಗೊಪಾಲ್  ಎಂಕೆ ಮತ್ತು  ಅಜಯ್ ಶಿರಾರಾಜ್ ಅಭಿನಯಿಸಿದ್ದಾರೆ. ರಾಹುಲ್ ನಿರ್ಮಾಣದ ಈ ಚಿತ್ರಕ್ಕೆ ರುಣ್ ಸೂರಧಾ ಅವರು ಸಂಗೀತ ನಿರ್ದೇಶಕರಾಗಿ ಮತ್ತು ವಿನೋದ್ ಭಾರತಿ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಮ್ಮನ್ನು Blackmail ಮಾಡಲು ಸಾಧ್ಯವಿಲ್ಲ; Strait Of Hormuz ನಿರ್ಬಂಧ ಬೆನ್ನಲ್ಲೇ Iran ವಿರುದ್ಧ Donald Trump ಕೆಂಡಾಮಂಡಲ!

Strait of Hormuz: 'ನೀವೇ ಅನುಮತಿ ಕೊಟ್ಟು ಈಗ ಗುಂಡು ಹಾರಿಸುತ್ತಿದ್ದೀರಿ': Iran ದಾಳಿಗೊಳಗಾದ ಭಾರತೀಯ ತೈಲ ಟ್ಯಾಂಕರ್‌ ಆಡಿಯೋ ವೈರಲ್!

"ಕಡಲೆಕಾಯಿ"ಯಷ್ಟು ಬೆಂಬಲ: ಕರ್ನಾಟಕ ಸರ್ಕಾರದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರವಿಂದ್ ಕುಮಾರ್ ಬೇಸರ

ಮಮತಾ ಬ್ಯಾನರ್ಜಿ ಸಿಎಂ ಹುದ್ದೆಯಲ್ಲಿ ಮುಂದುವರೆದರೆ ಬಂಗಾಳ ಬಾಂಗ್ಲಾದೇಶಿ ಮುಸ್ಲಿಮರ ಪಾಲು- ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

IPL 2026: CSK ವಿರುದ್ಧ SRH 10 ರನ್ ಗಳ ರೋಚಕ ಜಯ, ಮಿಂಚಿದ Ayush Mhatre

SCROLL FOR NEXT