ಉತ್ತರ ಕನ್ನಡದ ನದಿಯ ಕಥಾನಕ 'ಅಘನಾಶಿನಿ' ಗೆ ಅಂತರಾಷ್ಟ್ರೀಯ ಪ್ರಶಸ್ತಿ 
ಸಿನಿಮಾ ಸುದ್ದಿ

ಉತ್ತರ ಕನ್ನಡದ ನದಿಯ ಕಥಾನಕ 'ಅಘನಾಶಿನಿ' ಗೆ ಅಂತರಾಷ್ಟ್ರೀಯ ಪ್ರಶಸ್ತಿ

ಉತ್ತರ ಕನ್ನಡದ ಅಘನಾಶಿನಿ ನದಿಯ ಹರಿವು, ಅದರ ಸುತ್ತಲಿನ ನಾನಾ ಕಥೆಗಳನ್ನು ಹೊಂದಿರುವ ‘ಅಘನಾಶಿನಿ’ ಸಾಕ್ಷ್ಯಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ದಕ್ಕಿದೆ.

ಶಿರಸಿ: ಉತ್ತರ ಕನ್ನಡದ ಅಘನಾಶಿನಿ ನದಿಯ ಹರಿವು, ಅದರ ಸುತ್ತಲಿನ ನಾನಾ ಕಥೆಗಳನ್ನು ಹೊಂದಿರುವ ‘ಅಘನಾಶಿನಿ’ ಸಾಕ್ಷ್ಯಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ದಕ್ಕಿದೆ. ಅಮೆರಿಕದ ಕೊಲೊರಾಡೊ ಪರಿಸರ ಚಲನಚಿತ್ರೋತ್ಸವ, ಕ್ಯಾಲಿಫೋರ್ನಿಯಾ ಬೊರ್ರೆಗೊ ಸ್ಪ್ರಿಂಗ್ಸ್ ಫಿಲ್ಮ್ ಫೆಸ್ಟಿವಲ್ ಹಾಗೂ ಇಂಪ್ಯಾಕ್ಟ್ ಡಾಕ್ ಅವಾರ್ಡ್‌ನ ಎಕ್ಸಲೆನ್ಸ್ ಪ್ರಶಸ್ತಿಗೆ ಚಿತ್ರವು ಭಾಜನವಾಗಿದೆ.
ಫೆ.24ರಂದು ಕೊಲೊರಾಡೊ ಪರಿಸರ ಚಲನಚಿತ್ರೋತ್ಸವದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಗೊಳ್ಳಲಿದೆ.  ಇಂಜಿನಿಯರ್ ಅಶ್ವಿನಿಕುಮಾರ ಭಟ್ ನಿರ್ದೇಶನದ 40 ನಿಮಿಷಗಳ ಸಾಕ್ಷ್ಯಚಿತ್ರವನ್ನು ಎರಡೂವರೆ ವರ್ಷಗಳ ಅವಧಿಯಲ್ಲಿ ಚಿತ್ರೀಕರಿಸಲಾಗಿದೆ. ಲ್ಯಾಂಡ್‌ಸ್ಕೇಪ್ ವಿಝಾರ್ಡ್ಸ್‌ ಸಂಸ್ಥೆಯು ಕ್ರೌಡ್ ಫಂಡಿಂಗ್ ಮತ್ತು ರೋಹಿಣಿ ನಿಲೇಕಣಿ ಫಿಲಾಂಥ್ರೊಪಿಸ್‌ ಸಹಭಾಗಿತ್ವದಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಾನಾವಾಗಿದೆ.
ಪರಿಸರ, ಜನರು ಹಾಗೂ ನದಿಯೊಡನೆ ಇರುವ ಅಪರೂಪದ ಸಂಬಂಧವನ್ನು ಈ ಚಿತ್ರದಲ್ಲಿ ತೋರಿಸಲಾಗಿದ್ದು ನದಿಯು ತನ್ನ ಕಥೆಯನ್ನು ತಾನೇ ಹೇಳುವಂತೆ ನಿರೂಪಣೆ ಮಾಡಲಾಗಿದೆ.
ಹಾಲಿವುಡ್ ಅಂತರರಾಷ್ಟ್ರೀಯ ಸ್ವತಂತ್ರ ಸಾಕ್ಷ್ಯಚಿತ್ರ ಪ್ರಶಸ್ತಿ, ಅಮೆರಿಕದ ಜಾರ್ಜಿಯಾ ಸ್ಪಾಟ್ ಲೈಟ್ ಡಾಕ್ ಗೋಲ್ಡ್ ಅವಾರ್ಡ್‌, ಇಸ್ರೇಲ್ ನಜರೆತ್ ಫಿಲ್ಮ್ ಫೆಸ್ಟಿವಲ್‌ ಫೈನಲ್ಸ್ ಗೆ ಆಯ್ಕೆಯಾಗಿರುವ 'ಅಘನಾಶಿನಿ'  ಕಾಂಬೋಡಿಯಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಮೂವಿಂಗ್ ವಾಟರ್ ಫಿಲ್ಮ್ ಫೆಸ್ಟಿವಲ್ ಮತ್ತು ಕಾಶ್ಮೀರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  ಭಾಗವಹಿಸಿ ತ್ಯುತ್ತಮ ಪರಿಸರ ಚಲನಚಿತ್ರ ಪ್ರಶಸ್ತಿ ಪಡೆದಿದೆ. ಚಿತ್ರಕ್ಕೆ ಇದುವರೆಗೆ ಒಟ್ಟು 9  ಪ್ರಶಸ್ತಿಗಳು ಸಿಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

ಕ್ಷಿಪಣಿ ದಾಳಿ ಆರೋಪ: Iranಗೆ UAE ಶಾಕ್, ಎಲ್ಲಾ ವ್ಯಾಪಾರ-ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ..!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್'ಗೆ VIP ಟ್ರೀಟ್‌ಮೆಂಟ್?: ಕಾನೂನಿನ ಮುಂದೆ ಎಲ್ಲರೂ ಒಂದೇ, ಜೈಲಿನಲ್ಲಿ ಯಾರಿಗೂ ವಿಶೇಷ ಸೌಲಭ್ಯವಿಲ್ಲ; ಸರ್ಕಾರ ಸ್ಪಷ್ಟನೆ