ನಟಿ ಪ್ರಿಯಾ ಪ್ರಕಾಶ್ ವಾರಿಯರ್ 
ಸಿನಿಮಾ ಸುದ್ದಿ

ವಿಂಕಿಂಗ್ ಪೂರ್ವ ನಿಯೋಜಿತವಲ್ಲ: ವೈರಲ್ ವಿಡಿಯೋ ಕುರಿತು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹೇಳಿಕೆ

ವಿಂಕಿಂಗ್ ಅಥವಾ ಕಣ್ಣು ಸನ್ನೆ ವಿಡಿಯೋ ಪೂರ್ವ ಯೋಜಿತವಲ್ಲ ಎಂದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಹೇಳಿದ್ದಾರೆ.

ತಿರುವನಂತಪುರಂ: ವಿಂಕಿಂಗ್ ಅಥವಾ ಕಣ್ಣು ಸನ್ನೆ ವಿಡಿಯೋ ಪೂರ್ವ ಯೋಜಿತವಲ್ಲ ಎಂದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಹೇಳಿದ್ದಾರೆ.
ಮಲಯಾಳಂನ 'ಒರು ಅಡಾರ್ ಲವ್' ಚಿತ್ರದ ಮೂಲಕ ರಾತ್ರೋರಾಚ್ರಿ ಖ್ಯಾತಿ ಉತ್ತುಂಗಕ್ಕೆ ಏರಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ತಮ್ಮ ವಿಂಕಿಂಗ್ (ಕಣ್ಣು ಸನ್ನೆ) ವಿಡಿಯೋ ಕುರಿತು ಇದೇ ಮೊದಲ ಬಾರಿಗೆ  ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದು, ವಿಂಕಿಂಗ್ ಅಥವಾ ಕಣ್ಣು ಸನ್ನೆ ವಿಡಿಯೋ ಪೂರ್ವ ಯೋಜಿತವಲ್ಲ. ಅದು ಚಿತ್ರದ ಚಿತ್ರೀಕರಣದ ಭಾಗವಾಗಿತ್ತು. ಆದರೆ ಈ ದೃಶ್ಯಗಳು ಈ ಪರಿ ವೈರಲ್ ಆಗುತ್ತವೆ ಎಂದು ನಾವು ಊಹೆ  ಕೂಡ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಸುದ್ದಿಸಂಸ್ಥೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಪ್ರಿಯಾ, ಎಲ್ಲವೂ ಅಚಾನಕ್ಕಾಗಿ ನಡೆದು ಹೋಯಿತು. ಈ ದೃಶ್ಯಗಳಿಂದ ತಾನು ಈ ಮಟ್ಟಿಗೆ ಖ್ಯಾತಿ ಪಡೆಯುತ್ತೇನೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಇದಕ್ಕೆ ಹೇಗೆ  ಪ್ರತಿಕ್ರಿಯೆ ನೀಡಬೇಕು ಎಂಬುದೇ ನನಗೆ ತಿಳಿಯುತ್ತಿಲ್ಲ. ನಿಜ ಹೇಳಬೇಕು ಎಂದರೆ ಕಣ್ಣು ಸನ್ನೆ ವಿಡಿಯೋ ಪೂರ್ವ ಯೋಜಿತವಲ್ಲ. ಅದು ಚಿತ್ರೀಕರಣದ ಒಂದು ಭಾಗವಾಗಿತ್ತು ಎಂದು  ಹೇಳಿದ್ದಾರೆ.
ಇನ್ನು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿರುವ ಮಲಯಾಳಂನ  'ಒರು ಅಡಾರ್ ಲವ್' ಚಿತ್ರದ ಹಾಡು ಮತ್ತು ಚಿತ್ರದ ಟ್ರೈಲರ್ ವ್ಯಾಪಕ ವೈರಲ್ ಆಗುತ್ತಿದ್ದು, ಚಿತ್ರದಲ್ಲಿ ನಟಿ ಪ್ರಿಯಾ ಮಾಡುಲ ಕಣ್ಣು ಸನ್ನೆ (ವಿಂಕಿಂಗ್)  ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪ್ರಮುಖ ರಾಜಕಾರಣಿಗಳು, ಕ್ರೀಡಾಪಟುಗಳು, ನಟ-ನಟಿಯರ ಕುರಿತ ಹಾಸ್ಯ ಸನ್ನಿವೇಶಗಳನ್ನು ನಚಿ ಪ್ರಿಯಾ ಅವರ ವಿಂಕಿಂಗ್ ವಿಡಿಯೋ ಜೊತೆ ಸೇರಿಸುವ  ಮೂಲಕ ಟ್ರಾಲ್ ಮಾಡಲಾಗುತ್ತಿದೆ.
ಇನ್ನು ಇದೇ ವಿಂಕಿಂಗ್ ವಿಡಿಯೋ ಇದೀಗ ಹಲವು ಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗಿದ್ದು, ಕೆಲ ಮುಸ್ಲಿಂ ಸಂಘಟನೆಗಳು ನಟಿ ಪ್ರಿಯಾ ಮತ್ತು ಒರು ಅಡಾರ್ ಲವ್ ಚಿತ್ರ ತಂಡದ ವಿರುದ್ಧ ದೂರು ದಾಖಲಿಸಿದ್ದಾರೆ. ಧಾರ್ಮಿಕ  ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಚಿತ್ರ ತಂಡದ ವಿರುದ್ಧ ಹೈದರಾಬಾದ್, ಮುಂಬೈ ಸೇರಿದಂತೆ ಹಲವೆಡೆ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Lionel Messi: ಮೆಸ್ಸಿ ನೋಡೋಕೆ ಆಗಲಿಲ್ಲ ಎಂದು ರೊಚ್ಚಿಗೆದ್ದ ಫ್ಯಾನ್ಸ್, ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ದಾಂಧಲೆ-Video

'ಕಡತಗಳು ಟೇಬಲ್‌ನಿಂದ ಟೇಬಲ್‌ಗೆ ವರ್ಗವಾಗುತ್ತಿರುವಾಗಲೇ ಸುವರ್ಣ ಸಮಯ ಕಳೆದು ಹೋಗುತ್ತಿದೆ': HDKಗೆ ರವಿಕುಮಾರ್ ಟಾಂಗ್

ಕೋಲ್ಕತ್ತಾದಲ್ಲಿ ಮೆಸ್ಸಿ ಮೇನಿಯಾ: ಫುಟ್ಬಾಲ್ ದಿಗ್ಗಜನಿಗೆ ಅದ್ಧೂರಿ ಸ್ವಾಗತ; 70 ಅಡಿ ಎತ್ತರದ ಪ್ರತಿಮೆ ಅನಾವರಣ!

H-1B ವೀಸಾಗೆ ಶುಲ್ಕ: ಕ್ಯಾಲಿಫೋರ್ನಿಯಾ ಸೇರಿ 20 ರಾಜ್ಯಗಳಿಂದ ಟ್ರಂಪ್ ಆಡಳಿತದ ವಿರುದ್ಧ ಕೇಸ್

'ಮತಗಳಿಸುವುದು ಮಾತ್ರವಲ್ಲ ಜನರ ಹೃದಯ ಗೆಲ್ಲಬೇಕು, ದಕ್ಷಿಣದ ರಾಜ್ಯಗಳು ನಮಗೆ ಮುಖ್ಯ': ಸಂಸದರಿಗೆ ಪ್ರಧಾನಿ ಮೋದಿ ಪಾಠ

SCROLL FOR NEXT