ತಮ್ಮ ತರಬೇತುದಾರ ಜೀತ್ ದೇವಯ್ಯ ಜೊತೆ ನಟ ಸುದೀಪ್ 
ಸಿನಿಮಾ ಸುದ್ದಿ

'ಪೈಲ್ವಾನ'ನಲ್ಲಿ ಸುದೀಪ್ ಸಿಕ್ಸ್ ಪ್ಯಾಕ್ ಜೊತೆ ಇನ್ನಷ್ಟು ಒಳ್ಳೆಯ ಅಂಶಗಳಿವೆ: ನಿರ್ದೇಶಕ ಕೃಷ್ಣ

ಪ್ರೇಮ್ ನಿರ್ದೇಶನದ ದ ವಿಲನ್ ಚಿತ್ರದ ಚಿತ್ರೀಕರಣವನ್ನು ಬಹುತೇಕ ಮುಗಿಸಿರುವ ನಟ ಸುದೀಪ್ ....

ಪ್ರೇಮ್ ನಿರ್ದೇಶನದ ದ ವಿಲನ್ ಚಿತ್ರದ ಚಿತ್ರೀಕರಣವನ್ನು ಬಹುತೇಕ ಮುಗಿಸಿರುವ ನಟ ಸುದೀಪ್ ತಮ್ಮ ಮುಂಬರುವ ಚಿತ್ರ ಪೈಲ್ವಾನಗೆ ಅಣಿಯಾಗುತ್ತಿದ್ದಾರೆ. ಬಾಕ್ಸಿಂಗ್ ಮತ್ತು ರೆಸ್ಲಿಂಗ್ ವಿಷಯ ಕುರಿತಾದ ಕಥೆ ಇರುವ ಚಿತ್ರವನ್ನು ಎಸ್.ಕೃಷ್ಣ ನಿರ್ದೇಶಿಸುತ್ತಿದ್ದಾರೆ.
ಬ್ಯಾಟ್ಮಿಂಟನ್, ಕ್ರಿಕೆಟ್, ಆಬ್ಸ್ ಇತ್ಯಾದಿ ಕ್ರೀಡೆಗೆ ಸಂಬಂಧಿಸಿದ ಆಟಗಳಲ್ಲಿ ಮೊದಲಿನಿಂದಲೂ ಆಸಕ್ತಿ ಹೊಂದಿರುವ ನಟ ಸುದೀಪ್ ಇದುವರೆಗೆ ಜಿಮ್ ಗೆ ಹೋಗಿ ದೇಹ ದಂಡಿಸಿದವರಲ್ಲ. ಇದೇ ಮೊದಲ ಬಾರಿಗೆ ಜಿಮ್ ಗೆ ಹೋಗಿ ತರಬೇತುದಾರರಿಂದ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. 
ಕಳೆದ ಕೆಲ ವಾರಗಳಿಂದ ಸುದೀಪ್ ಗೆ ಜೀತ್ ದೇವಯ್ಯ ಎಂಬುವವರು ತರಬೇತಿ ನೀಡುತ್ತಿದ್ದಾರೆ. ಇನ್ನು ಒಂದೆರಡು ಮೂರು ವಾರಗಳಲ್ಲಿ ಅವರು ದೇಹವನ್ನು ಸಿನಿಮಾಕ್ಕೆ ತಕ್ಕಂತೆ ಮಾಡಿಕೊಳ್ಳಲಿದ್ದಾರೆ. ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭಿಸುವ ಯೋಜನೆಯಲ್ಲಿದ್ದೇವೆ ಎನ್ನುತ್ತಾರೆ ನಿರ್ದೇಶಕರು.
ಆದರೆ ಪೈಲ್ವಾನ ಕೇವಲ ಸಿಕ್ಸ್ ಪ್ಯಾಕ್ ಗೆ ಮಾತ್ರ ಸಂಬಂಧಪಟ್ಟದ್ದಲ್ಲವಂತೆ. ಬಾಕ್ಸರ್  ಮತ್ತು ರೆಸ್ಲರ್ ಪಾತ್ರಕ್ಕೆ ಹೊಂದಿಕೆಯಾಗಲು ಸುದೀಪ್ ಜಿಮ್ ಗೆ ಹೋಗಿ ತರಬೇತಿ ಪಡೆಯುತ್ತಿದ್ದಾರೆ. ಸುದೀಪ್ ತಮ್ಮ ತರಬೇತುದಾರರ ಜೊತೆ ಇದೇ ವಾರ ಥೈಲ್ಯಾಂಡ್ ಗೆ ಹೋಗಲಿದ್ದಾರಂತೆ. ಅಲ್ಲಿನ ಕುಗ್ರಾಮವೊಂದರಲ್ಲಿ ಬಾಕ್ಸಿಂಗ್ ಮತ್ತು ರೆಸ್ಲಿಂಗ್ ಗೆ ಸಂಬಂಧಪಟ್ಸಾಂಟ  ಸಾಂಪ್ರದಾಯಿಕ ತರಬೇತಿ ಪಡೆದು ಬರಲಿದ್ದಾರಂತೆ.
ಆರ್ ಆರ್ ಆರ್ ಮೋಶನ್ ಪಿಕ್ಚರ್ಸ್ ನಡಿ ತಯಾರಾಗುತ್ತಿರುವ ಪೈಲ್ವಾನ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಕರುಣಾಕರ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

SCROLL FOR NEXT