ಟಗರು ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಖಾಕಿಯಲ್ಲಿ ಮತ್ತೆ ಮಿಂಚಲಿರುವ ಶಿವರಾಜ್ ಕುಮಾರ್

ಶಿವರಾಜ್ ಕುಮಾರ್ ಅವರ ಖಾಕಿ ಖದರ್ ಅವರ ಅಭಿಮಾನಿಗಳಿಗೆ ಮುಂದೆ ....

ಶಿವರಾಜ್ ಕುಮಾರ್ ಅವರ ಖಾಕಿ ಖದರ್ ಅವರ ಅಭಿಮಾನಿಗಳಿಗೆ ಮುಂದೆ ಕೂಡ ಸಿಗುವ ನಿರೀಕ್ಷೆಯಿದೆ. ಟಗರಿನಲ್ಲಿ ಪೊಲೀಸ್ ದಿರಿಸಿನಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಲಿರುವ ಶಿವರಾಜ್ ಕುಮಾರ್ ಅದನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ ಸಾಹಸ ನಿರ್ದೇಶಕ ರವಿ ವರ್ಮ ಅವರ ಜೊತೆಗೆ. ಈ ವರ್ಷವೇ ತೆರೆಗೆ ಬರಲಿದ್ದು ಇಲ್ಲಿ ಮತ್ತೊಮ್ಮೆ ಪೊಲೀಸ್ ಅಧಿಕಾರಿ ಪಾತ್ರ ವಹಿಸಲಿದ್ದಾರೆ. 
ರುಸ್ತಂಗೆ ಮುಹೂರ್ತವೊಂದೇ ಬಾಕಿ: ಸಾಹಸ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರವಿ ವರ್ಮ, ನಿರ್ದೇಶನಕ್ಕೆ ಇದೇ ಮೊದಲ ಬಾರಿಗೆ ಕೈ ಹಾಕುತ್ತಿದ್ದು ಶಿವರಾಜ್ ಕುಮಾರ್ ಅವರ ಚಿತ್ರ ನಿರ್ದೇಶಿಸಲಿದ್ದಾರೆ. ಜಯಣ್ಣ ಕಂಬೈನ್ಸ್ ನಲ್ಲಿ ತಯಾರಾಗಲಿರುವ ಸಿನಿಮಾಕ್ಕೆ ರುಸ್ತುಂ ಎಂದು ಶೀರ್ಷಿಕೆಯಿಟ್ಟಿದ್ದಾರೆ.
ಮುಫ್ತಿ ಚಿತ್ರದ ಯಶಸ್ವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ದಿ ವಿಲನ್ ಮತ್ತು ಕವಚ ಪ್ರಾಜೆಕ್ಟ್ ಗಳನ್ನು ಮುಗಿಸಿದ ನಂತರ ರವಿ ವರ್ಮ ಅವರ ನಿರ್ದೇಶನದ ರುಸ್ತುಂನಲ್ಲಿ ಭಾಗಿಯಾಗಲಿದ್ದಾರೆ.
ಶಿವರಾಜ್ ಕುಮಾರ್ ಅವರ ದಿನಾಂಕಗಳು ಸಿಕ್ಕಿದ ನಂತರ ರವಿ ವರ್ಮ ಅವರು ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.ಹಲವು ವರ್ಷಗಳಿಂದ ನನ್ನ ಬಳಿ ಚಿತ್ರಕಥೆಯಿತ್ತು. ಇದೀಗ ಮುಹೂರ್ತ ದಿನಾಂಕ ನಿಗದಿಪಡಿಸಿ ಚಿತ್ರೀಕರಣ ಆರಂಭಿಸುವುದೊಂದೇ ಬಾಕಿ. ರವಿ ವರ್ಮ ಅವರು ಪ್ರಸ್ತುತ ದಿ ವಿಲನ್ ಮತ್ತು ತೆಲುಗು ಚಿತ್ರ ಗೋಪಿಚಂದ್ ಅವರ ಸಿನಿಮಾಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಇಂದು ರಾಜೀನಾಮೆ ಅನುಮಾನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಮನೆ ಮುಂದೆ ಬೆಂಬಲಿಗರ ಶಕ್ತಿ ಪ್ರದರ್ಶನ, ರಾಜೀನಾಮೆ ನೀಡದಂತೆ ಆಗ್ರಹ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

SCROLL FOR NEXT