ರ್ಯಾಂಬೊ2 ಚಿತ್ರದ ಹಾಡಿನ ಚಿತ್ರೀಕರಣ ವೇಳೆ ಚಿತ್ರತಂಡ 
ಸಿನಿಮಾ ಸುದ್ದಿ

ರ್ಯಾಂಬೊ2 ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿದ ಬಾಲಿವುಡ್ ನ ಶ್ರೇ ಖನ್ನಾ

ಸಿನಿಮಾದಲ್ಲಿ ಹಾಡುಗಳು ಸುಂದರವಾಗಿ ವೀಕ್ಷಕರಿಗೆ ಇಷ್ಟವಾಗುವಂತೆ ಮೂಡಿಬರುವಲ್ಲಿ ನೃತ್ಯ ನಿರ್ದೇಶಕರು ಪ್ರಮುಖ ಪಾತ್ರ ...

ಸಿನಿಮಾದಲ್ಲಿ ಹಾಡುಗಳು ಸುಂದರವಾಗಿ ವೀಕ್ಷಕರಿಗೆ ಇಷ್ಟವಾಗುವಂತೆ ಮೂಡಿಬರುವಲ್ಲಿ ನೃತ್ಯ ನಿರ್ದೇಶಕರು ಪ್ರಮುಖ ಪಾತ್ರ ವಹಿಸುತ್ತಾರೆ.ಕನ್ನಡದಲ್ಲಿ ತಯಾರಾಗುತ್ತಿರುವ ರ್ಯಾಂಬೊ2 ಚಿತ್ರಕ್ಕೆ ಬಾಲಿವುಡ್ ನ ಎಂಜೆ 5 ಖ್ಯಾತಿಯ ನೃತ್ಯ ನಿರ್ದೇಶಕ ಶ್ರೇ ಖನ್ನಾ ಆಗಮಿಸಿದ್ದು ಶರಣ್ ಮತ್ತು ಆಶಿಕಾ ರಂಗನಾಥ್ ಅವರಿಗೆ ಹಾಡಿನ ನೃತ್ಯ ನಿರ್ದೇಶನ ಮಾಡಿದ್ದಾರೆ.
ರ್ಯಾಂಬೊ2 ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ತರುಣ್ ಸುಧೀರ್ ಶ್ರೇ ಖನ್ನಾ ಅವರ ಕೆಲಸಗಳನ್ನು ನೋಡಿಕೊಂಡು ಬಂದವರು. ಎಂಜೆ 5 ತಂಡವನ್ನು ರಚಿಸಿದವರಲ್ಲಿ ಶ್ರೇ ಖನ್ನಾ ಪ್ರಮುಖರು. ಭಾರತದ ಡ್ಯಾನ್ಸಿಂಗ್ ಸೂಪರ್ ಸ್ಟಾರ್ ನ್ನು ಕೂಡ ಗೆದ್ದಿದ್ದಾರೆ. ನಂತರ ಎಂಜೆ 5 ತಂಡದಿಂದ ಹೊರಬಂದು ತಮ್ಮದೇ ಡ್ಯಾನ್ಸ್ ಗುಂಪನ್ನು ರಚಿಸಿದರು. ರೆಮೊ ಫೆರ್ನಾಂಡಿಸ್ ಅವರ ಜೊತೆ ಎಬಿಸಿಡಿ ಮತ್ತು ಎಬಿಸಿಡಿ 2 ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ.
ನಾಗೇಂದ್ರ ಪ್ರಸಾದ್ ರಚನೆಯ ಸಾಹಿತ್ಯವಾದ ಯಾವ ಯಾವ ಯಾವ ಇವನ್ ಪ್ರೀತಿ ಮಾಡೆ ಯಾವ ಹಾಡಿಗೆ ಶ್ರೇ ಖಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಶರಣ್ ವ್ಯಕ್ತಿತ್ವಕ್ಕೆ ಹೊಂದುವಂತೆ ನೃತ್ಯದಲ್ಲಿ ಹಲವು ಹಾಸ್ಯ ಸನ್ನಿವೇಶಗಳನ್ನು ರ್ಯಾಂಬೊ2 ಚಿತ್ರದ ಹಾಡಿನಲ್ಲಿ ತರಲಾಗಿದೆ ಎನ್ನುತ್ತಾರೆ ತರುಣ್ ಸುಧೀರ್.
ಫೆಬ್ರವರಿ 6ರಂದು ಶರಣ್ ಹುಟ್ಟುಹಬ್ಬಕ್ಕೆ ಚಿತ್ರ ನಿರ್ಮಾಪಕರು ಈ ಹಾಡಿನ ಟೀಸರ್ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ. ರ್ಯಾಂಬೊ2 ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸುತ್ತಿದ್ದು ಶರಣ್ ಅವರ ಹೋಂ ಬ್ಯಾನರ್ ನಡಿ ನಿರ್ಮಾಣಗೊಳ್ಳುತ್ತಿದೆ. ಲಡ್ಡೂ ಸಿನಿಮಾಸ್ ಮತ್ತು ಏಳು ನಿರ್ಮಾಪಕರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಸುಧಾರ್ಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT