ಸೊನಾಲಿ ಬೇಂದ್ರೆ 
ಸಿನಿಮಾ ಸುದ್ದಿ

ನಟಿ ಸೊನಾಲಿ ಬೇಂದ್ರೆಯಿಂದ ಮಗನಿಗೊಂದು 'ಭಾವಪೂರ್ಣ ಪತ್ರ'

ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದು ಪ್ರಸ್ತುತ ನ್ಯೂಯಾರ್ಕ್ ನಲ್ಲಿ ಅದಕ್ಕೆ ...

ನವದೆಹಲಿ: ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಕ್ಯಾನ್ಸರ್ ಗೆ ತುತ್ತಾಗಿದ್ದು ಪ್ರಸ್ತುತ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮಗನಿಗೆ ಭಾವಪೂರ್ಣ ಪತ್ರ ಬರೆದಿರುವ ಅವರು, ತಮ್ಮ ಮಗನ ಮುಗ್ಧ ಪ್ರೀತಿಯಿಂದಾಗಿ ಪ್ರಕಾಶಮಾನವಾದ ಸೂರ್ಯನ ಕಿರಣಗಳು ಬದುಕಿನಲ್ಲಿ ಹೊಳೆಯುವಂತೆ ಕಾಣುತ್ತಿದೆ ಎಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ 12 ವರ್ಷದ ಪುತ್ರ ರಣವೀರ್ ಗೆ ಹೃದಯಪೂರ್ವಕ ಅಕ್ಷರಗಳಿಂದ ಪತ್ರ ಬರೆದಿದ್ದಾರೆ.

''12 ವರ್ಷ 11 ತಿಂಗಳು, 8 ದಿನಗಳ ಹಿಂದೆ, ನನ್ನ ಮಗ ಜನಿಸಿದ ದಿನದಿಂದ ಅವನು ನನ್ನ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ. ಅಂದಿನಿಂದ ಅವನ ಸಂತೋಷ ಮತ್ತು ಸುಖವೇ ನನಗೆ ಮತ್ತು ನನ್ನ ಪತಿ ಗೋಲ್ಡಿ ಬೆಲ್ ಗೆ ಮುಖ್ಯವಾಗಿತ್ತು. ಆದರೆ ನನಗೆ ಯಾವಾಗ ಜೀವಕ್ಕೆ ಆಪತ್ತು ಬರುವ ಖಾಯಿಲೆ ಇದೆ ಎಂದು ಗೊತ್ತಾಯಿತೋ ಅದನ್ನು ನಮ್ಮ ಮಗನಿಗೆ ಹೇಗೆ ಹೇಳುವುದು, ಅವನಿಗೆ ಹೇಗೆ ಅರ್ಥ ಮಾಡಿಸುವುದು ಎಂಬ ಗೊಂದಲ, ಸಂಕಟದಲ್ಲಿ ನಾವಿದ್ದೆವು'' ಎಂದು ಸೊನಾಲಿ ತಮ್ಮ ಮನಸ್ಸಿನ ಭಾವನೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಅವರು ಬರಹವನ್ನು ಮುಂದುವರಿಸುತ್ತಾ, ಇದೀಗ ಸರಿಯಾದ ಸಮಯ ಬಂದಿದೆ, ಈ ಸಮಯವನ್ನು ಮಗ ರಣವೀರ್ ಜೊತೆಗೆ ಕಳೆಯುತ್ತಿದ್ದೇನೆ. ಆತನಿಗೆ ಈಗ ಬೇಸಿಗೆ ರಜೆ. ಆತನ ಮುಗ್ಧ ಮಾತು, ಆಟ, ಹುಚ್ಚುತನ, ವರ್ತನೆ ಪ್ರಕಾಶಮಾನವಾದ ಸೂರ್ಯನ ಕಿರಣಗಳಂತೆ ನನ್ನ ಬಾಳಲ್ಲಿ ಪ್ರಜ್ವಲಿಸಲು ಸಹಾಯ ಮಾಡುತ್ತಿದೆ. ಇಂದು ನಾವಿಬ್ಬರೂ ಒಬ್ಬರಿಗೊಬ್ಬರು ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ ಎಂದು ಬರೆದು ಸೊನಾಲಿ ಬೇಂದ್ರೆ ತಮ್ಮ ಪತ್ರಕ್ಕೆ ಫುಲ್ ಸ್ಟಾಪ್ ಒತ್ತಿದ್ದಾರೆ.

ಪತ್ರದ ಜೊತೆಗೆ ತಮ್ಮ ಮಗನನ್ನು ಆಲಂಗಿಸಿಕೊಂಡಿರುವ ಫೋಟೋವನ್ನು ಸಹ ಸೊನಾಲಿ ಬೇಂದ್ರೆ ಅಪ್ ಲೋಡ್ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ತಮಗೆ ಹೈಗ್ರೇಡ್ ಕ್ಯಾನ್ಸರ್ ಇದೆ ಎಂದು ಇನ್ಸ್ಟಾಗ್ರಾಮ್ ಮೂಲಕವೇ ಸೊನಾಲಿ ಬೇಂದ್ರೆ ಬಹಿರಂಗಪಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?