ಶೃತಿ ಹರಿಹರನ್ 
ಸಿನಿಮಾ ಸುದ್ದಿ

ಕೌಟುಂಬಿಕ ಕಲಹ ವಿರುದ್ಧ ಕಿರುಚಿತ್ರದಲ್ಲಿ ಶೃತಿ ಹರಿಹರನ್ ಧ್ವನಿ

ಮಹಿಳಾ ಕೇಂದ್ರಿತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ನಟಿ ಶೃತಿ ಹರಿಹರನ್ ಅವರ ಮುಂದಿನ ಕಿರುಚಿತ್ರ ರೀಟಾದಲ್ಲಿ ಕೌಟುಂಬಿಕ ಕಲಹ ಪ್ರಕರಣಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಕಲಾತ್ಮಕ ಪ್ರೋಡಕ್ಷನ್ ಅಡಿಯಲ್ಲಿ ಶೃತಿ ಹರಿಹರನ್ ನಿರ್ಮಿಸಿರುವ ಎರಡನೇ ಕಿರುಚಿತ್ರ ಇದಾಗಿದೆ.

ಮಹಿಳಾ ಕೇಂದ್ರಿತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ನಟಿ ಶೃತಿ ಹರಿಹರನ್  ಅವರ ಮುಂದಿನ ಕಿರುಚಿತ್ರ ರೀಟಾದಲ್ಲಿ  ಕೌಟುಂಬಿಕ ಕಲಹ ಪ್ರಕರಣಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಕಲಾತ್ಮಕ ಪ್ರೋಡಕ್ಷನ್ ಅಡಿಯಲ್ಲಿ ಶೃತಿ ಹರಿಹರನ್  ನಿರ್ಮಿಸಿರುವ   ಎರಡನೇ ಕಿರುಚಿತ್ರ ಇದಾಗಿದೆ.

ಲಾಸ್ಟ್ ಕನ್ನಡಿಗ ನಂತರ  ದಾಂಪತ್ಯದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಅಥವಾ ದೌರ್ಜನ್ಯ ಪ್ರಕರಣ ವಿಷಯವನ್ನಿಟ್ಟುಕೊಂಡು ರೀಟಾ ಕಿರುಚಿತ್ರ ನಿರ್ಮಿಸಿರುವ  ಶೃತಿ ಹರಿಹರನ್ ,ಕಲೆಯಿಂದ ಜೋರಾಗಿ ಮಾತನಾಡಬಹುದು ಹಾಗೂ ಮನರಂಜನೆ ನೀಡಬಹುದು ಎಂಬುದು ನನ್ನ ನಂಬಿಕೆಯಾಗಿದೆ. ಬದಲಾವಣೆ ತರುವಲ್ಲಿ ಕಲೆ  ಒಂದು ಪ್ರಮುಖವಾದ ಪಾತ್ರ ವಹಿಸುತ್ತದೆ ಎನ್ನುತ್ತಾರೆ.
ರಚನ್ ರಾಮಚಂದ್ರನ್  ಈ  ಚಿತ್ರವನ್ನು ನಿರ್ದೇಶಿಸಿದ್ದು, ನಟರಾದ ಅಭಿನವ್ ರಾಜ್, ಶ್ರೇಯ ಅಂಚನ್ ಮತ್ತು  ನಟಿ ರೂಪಾ ನಟರಾಜ್ ಅಭಿನಯಿಸಿದ್ದಾರೆ. ಅನೂಪ್ ಸೀಳನ್ ಸಂಗೀತ ಸಂಯೋಜಿಸಲಿದ್ದು, ಕಾರ್ತಿಕ್ ಬಿ ಮಾಲೂರು ಅವರ ಛಾಯಾಗ್ರಹಣವಿರಲಿದೆ.
ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡಲು ಶೃತಿ ಯೋಚಿಸಿದ್ದಾರೆ. ಈ ವರ್ಷದಲ್ಲಿ ನಾನೂ ಸಿನಿಮಾದಲ್ಲಿ ಅಭಿನಯಿಸದಿದ್ದರೂ ಇದು ನನ್ನ ಮೊದಲ ಬಿಡುಗಡೆಯ ಚಿತ್ರವಾಗಿದೆ. ಚಿತ್ರ ನಿರ್ಮಾಣ ಮಾಡುವ ಅವಕಾಶ ನನ್ನಗೆ ದೊರೆತಿದೆ ಎಂದು ಶೃತಿ ಹೇಳಿದ್ದಾರೆ.
ರೀಟಾ ಟ್ರೈಲರ್ ನಲ್ಲಿನ ಕೊನೆಯ ಸಂಭಾಷಣೆ ಅರ್ಥಪೂರ್ಣವಾಗಿದೆ.  ಎಲ್ಲ ಮನುಷ್ಯರು ವೈಯಕ್ತಿಕವಾಗಿ ನೋವು , ದು:ಖ ಅನುಭವಿಸುತ್ತಾರೆ. ಇಂತಹುದೇ ಈ ಚಿತ್ರದ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT