ನಟ ವಿಹಾನ್ 
ಸಿನಿಮಾ ಸುದ್ದಿ

ಭಟ್ಟರ ಹೊಸ ಸಾಹಿತ್ಯದಲ್ಲಿ ನಟ ವಿಹಾನ್ ಮಿಂಚು

ಹೊಸಬರನ್ನಿಟ್ಟುಕೊಂಡು ನಿರ್ದೇಶಕ ಯೋಗರಾಜ್ ಭಟ್ಟ ಅವರು ಪಂಚತಂತ್ರ ಸಿನಿಮಾ ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಭಟ್ಟರು ಬರೆದಿರುವ ಹಾಡಿನ ಸಾಹಿತ್ಯದ ಮೂಲಕ ನಟ ವಿಹಾನ್ ಮಿಂಚುತ್ತಿದ್ದಾರೆ...

ಹೊಸಬರನ್ನಿಟ್ಟುಕೊಂಡು ನಿರ್ದೇಶಕ ಯೋಗರಾಜ್ ಭಟ್ಟ ಅವರು ಪಂಚತಂತ್ರ ಸಿನಿಮಾ ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಭಟ್ಟರು ಬರೆದಿರುವ ಹಾಡಿನ ಸಾಹಿತ್ಯದ ಮೂಲಕ ನಟ ವಿಹಾನ್ ಮಿಂಚುತ್ತಿದ್ದಾರೆ. 
ಪಂಚತಂತ್ರ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಪ್ರಸ್ತುತ ಚಿತ್ರದ ಆರಂಭಿಕ ಗೀತೆಯ ಚಿತ್ರೀಕರಣ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ಸಂಜೆ 6 ಗಂಟೆಯಿಂದ ಬೆಳಿಗಿನ ಜಾವ 2 ಗಂಟೆಯವರೆಗೂ ಈ ಹಾಡಿನ ಚಿತ್ರೀಕರಣ ನಡೆಯುತ್ತಿದೆ. 
ಇಮ್ರಾನ್ ಸರ್ದಾರಿಯಾ ಅವರು ಗೀತೆ ಸಂಯೋಜನೆ ಮಾಡಿದ್ದಾರೆ, ಯೋಗರಾಜ್ ಭಟ್ ಅವರು ಗೀತೆಯೊಂದರ ಸಾಹಿತ್ಯವನ್ನು ಬರೆದಿದ್ದಾರೆ. ಇಂದಿನ ಯುವಜನತೆ ಹಾಗೂ ಹಿರಿಯರ ನಡುವೆ ಯಾವ ತರಹದ ಗ್ಯಾಪ್ ಇದೆ ಹಾಗೂ ಮನಸ್ಥಿತಿಗಳು ಹೇಗೆ ಬದಲಾಗಿದೆ. ಯುವ ಜನತೆಯಲ್ಲಿರುವ ಗೊಂದಲಗಳನ್ನೇ ಆಧಾರವಾಗಿಟ್ಟುಕೊಂಡು 'ಈ ವಯಸ್ಸಲ್ಲಿ ಏನ್ ಮಾಡೋದು ಗೊತ್ತಾಗೋದಿಲ್ಲ' ಎಂಬ ಗೀತೆಯನ್ನು ರಚನೆ ಮಾಡಿದ್ದು, ಈ ಹಾಡು ಜನರ ಮನಗೆಲ್ಲುವುದು ಖಚಿತ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. 
ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕಾಗಿ ವಿಶೇಷ ಸೆಟ್ ಹಾಕಲಾಗಿದ್ದು, ರೂ.30 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಗ್ಯಾರೇಜ್ ಹಾಗೂ ಕಾಲೋನಿ ಸೆಟ್ ಗಳನ್ನು ಹಾಕಲಾಗಿದೆ. ಮುಖ್ಯವಾಗಿ ಗ್ಯಾರೇಜ್ ಸೆಟ್ ಎಲ್ಲರ ಗಮನ ಸೆಳೆಯುತ್ತಿದೆ. ಜನರೇಶನ್ ಗ್ಯಾಪ್ ಇಟ್ಟುಕೊಂಡು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಇಂದಿನ ಯುವಜನತೆ ಹಾಗೂ ಹಿರಿಯರ ನಡುವೆ ಇರುವ ಅಂತರ ಹಾಗೂ ಮನಸ್ಥಿತಿಗಳ ಬದಲಾವಣೆಗಳ ಅಂಶದೊಂದಿಗೆ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 
ಪಂಚತಂತ್ರ ಚಿತ್ರದ ಮುಖ್ಯ ಪಾತ್ರದಲ್ಲಿ ಅಕ್ಷರ ಗೌಡ ಅವರು ನಟಿಸುತ್ತಿದ್ದು, ರಂಗಾಯಣ ರಘು ಹಾಗೂ ಸಿಮ್ರನ್ ಸೇರಿದ್ದಂತೆ ಇನ್ನಿತರರು ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ ಅವರು ಸಂಗೀತ ನೀಡುತ್ತಿದ್ದರೆ, ಕ್ಯಾಮೆರಾಮ್ಯಾನ್ ಆಗಿ ಸುಗ್ನಾನ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT