ರಚಿತಾ ರಾಮ್ 
ಸಿನಿಮಾ ಸುದ್ದಿ

ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ ಪ್ರಿಯಾಂಕಾ ಬದಲು ರಚಿತಾ ರಾಮ್?

ಪುನೀತ್ ರಾಜ್ ಕುಮಾರ್ ಅವರ ಇನ್ನೂ ಹೆಸರಿಡದ ಚಿತ್ರದ ಮೊದಲ ಆಯ್ಕೆಯ ನಟಿ ಪ್ರಾಜೆಕ್ಟ್ ನಿಂದ....

ಪುನೀತ್ ರಾಜ್ ಕುಮಾರ್ ಅವರ ಇನ್ನೂ ಹೆಸರಿಡದ ಚಿತ್ರದ ಮೊದಲ ಆಯ್ಕೆಯ ನಟಿ ಪ್ರಾಜೆಕ್ಟ್ ನಿಂದ ಹೊರಬಂದಿದ್ದು ಅಲ್ಲಿಗೆ ರಚಿತಾ ರಾಮ್ ಪ್ರವೇಶವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ಆರಂಭದಲ್ಲಿ ನಾಯಕಿಯಾಗಿ ಪ್ರಿಯಾಂಕ ಜವಲ್ಕರ್ ಆಯ್ಕೆಯಾಗಿದ್ದಾರೆ. ಇದೀಗ ಆಕೆ ಹೊರಬಂದಿದ್ದು ಕನ್ನಡದ ನಟಿ ರಚಿತಾ ರಾಮ್ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮೊನ್ನೆ ಭಾನುವಾರ ಆರಂಭಗೊಂಡ ಶೂಟಿಂಗ್ ನಲ್ಲಿ ಪ್ರಿಯಾಂಕಾ ಇದ್ದರು. ಆದರೆ ಇದೀಗ ನಾಯಕಿ ಬದಲಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಿರ್ದೇಶಕರಾಗಲಿ, ನಿರ್ಮಾಣ ತಂಡವಾಗಲಿ ದೃಢಪಡಿಸಿಲ್ಲ.

ಆದರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ರಚಿತಾ ರಾಮ್ ಈಗಾಗಲೇ ಚಿತ್ರತಂಡದ ಜೊತೆ ಸೇರಿ ಶೂಟಿಂಗ್ ಆರಂಭಿಸಿದ್ದಾರೆ. ಯಾವ ಕಾರಣಕ್ಕೆ ನಾಯಕಿ ಬದಲಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲವಾದರೂ ಬೇರೆ ಚಿತ್ರಗಳಲ್ಲಿ ಪ್ರಿಯಾಂಕ ಅವರು ಬ್ಯುಸಿಯಾಗಿರುವುದರಿಂದ ಅವರಿಗೆ ಈ ಚಿತ್ರಕ್ಕೆ ಸಂಪೂರ್ಣ ಸಮಯವನ್ನು ನೀಡಲಾಗುತ್ತಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ನಿರ್ದೇಶಕರು ಕನ್ನಡ ಭಾಷೆ ಗೊತ್ತಿರುವ ನಾಯಕಿಯನ್ನೆ ಹಾಕಿಕೊಂಡರೆ ಉತ್ತಮ ಎಂದು ಅಂತಿಮ ಕ್ಷಣದಲ್ಲಿ ಮನಸ್ಸು ಬದಲಾಯಿಸಿದರು ಎನ್ನಲಾಗುತ್ತಿದೆ.

ಪುನೀತ್ ಅವರ ಚಕ್ರವ್ಯೂಹದಲ್ಲಿ ಕೂಡ ಇದೇ ರೀತಿಯಾಗಿತ್ತು. ನಿರ್ದೇಶಕ ಸರ್ವನನ್ ಆರಂಭದಲ್ಲಿ ಪೂನಂ ಬಾಜ್ವಾ ನಂತರ ಪಲ್ಲವಿ ಜೋಷಿಯವರನ್ನು ಆರಿಸಿದ್ದರು. ನಂತರ ಅಂತಿಮ ಕ್ಷಣದಲ್ಲಿ ರಚಿತಾ ರಾಮ್ ಬಂದಿದ್ದರು.

ರಚಿತಾ ರಾಮ್ ಪ್ರಸ್ತುತ ಜಾನಿ ಜಾನಿ ಯಸ್ ಪಪ್ಪಾ, ಅಯೋಗ್ಯ ಹಾಗೂ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ ಇದು ಅವರ ನಾಲ್ಕನೇ ಸಿನಿಮಾ. ಪುನೀತ್ ಅವರ ಇತ್ತೀಚಿನ ಚಿತ್ರ ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿದ್ದು ಅದಕ್ಕೆ ಡಿ ಇಮ್ಮಮ್ ಅವರ ಸಂಗೀತ ಮತ್ತು ವೈದ್ಯ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT