ರವಿಶಂಕರ್ 
ಸಿನಿಮಾ ಸುದ್ದಿ

ನನಗಾಗಿ ಯುವ ಪಾತ್ರಗಳನ್ನು ರೂಪಿಸುತ್ತಿರುವ ಯುವ ನಿರ್ದೇಶಕರುಗಳಿಗೆ ನಾನು ಆಭಾರಿ: ರವಿಶಂಕರ್

ಸಿನಿಮಾ ವಿಷಯಕ್ಕೆ ಬಂದರೆ ನಟ ರವಿಶಂಕರ್ ಅವರ ಪ್ರತಿಭೆ ಎಲ್ಲೆ ಮೀರಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ವಿಲ್ಲನ್ ...

ಬೆಂಗಳೂರು: ಸಿನಿಮಾ ವಿಷಯಕ್ಕೆ ಬಂದರೆ ನಟ ರವಿಶಂಕರ್ ಅವರ ಪ್ರತಿಭೆ ಎಲ್ಲೆ ಮೀರಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ವಿಲ್ಲನ್ ಪಾತ್ರದಲ್ಲಿ ನಟಿಸಿದ್ದರೂ ಅವರ ನಟನೆ ಅಷ್ಟಕ್ಕೆ ಸೀಮಿತವಾಗಿಲ್ಲ, ವೈವಿಧ್ಯಮಯ ಪಾತ್ರಗಳಲ್ಲಿ ರವಿಶಂಕರ್ ನಟಿಸಿದ್ದಾರೆ.
ಅನೂಪ್ ಭಂಡಾರಿ ನಿರ್ದೇಶನದ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬರುತ್ತಿರುವ ರಾಜರಥ ಸಿನಿಮಾದಲ್ಲಿ ರವಿಶಂಕರ್ ತೀರಾ ವಿಭಿನ್ನವಾದ ಪಾತ್ರದಲ್ಲಿ ನಟಿಸಿದ್ದಾರೆ. ಬಸ್ ಪ್ರಯಾಣದ ಕಥೆಯಾಗಿರುವ ಈ ಸಿನಿಮಾದಲ್ಲಿ ರವಿಶಂಕರ್ ಟಿಕೆಟ್ ಇನ್ಸ್ ಪೆಕ್ಟರ್  ಪಾತ್ರದಲ್ಲಿ ಅಭಿನಯಿಸಿದ್ದಾರೆ.  ತಮ್ಮ ವಿಲ್ಲನ್  ಪಾತ್ರಗಳನ್ನು ಬದಿಗೊತ್ತಿರುವ ರವಿಶಂಕರ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜರಥ ಸಿನಿಮಾದ ಈ ಪ್ರಯಾಣದ ಕಥೆಯಲ್ಲಿ ನಾನು ಒಬ್ಬ ಪ್ರಯಾಣಿಕ, ಅನೂಪ್ ಭಂಡಾರಿ ನನ್ನ ಪಾತ್ರವನ್ನು ವಿಶೇಷವಾಗಿ ರೂಪಿಸಿದ್ದಾರೆ, ವಿಭಿನ್ನ ಗೆಟಪ್ ರವಿಶಂಕರ್ ಅವರದ್ದು, ತಲೆಗೆ ವಿಗ್, ಕಣ್ಣಿಗೆ ಕನ್ನಡಕ, ಚೆಕ್ಸ್ ಇರುವ ಕೋಟು ಧರಿಸಿ ಯುವಕನಂತೆ ಕಾಣುತ್ತಾರೆ. 
ಈ ಸಿನಿಮಾದ ಹಾಡಿಗೆ ರವಿಶಂಕರ್ ಹಿನ್ನೆಲೆಗಾಯನ ನೀಡಿದ್ದಾರೆ, ಗಂಡಕ ಭಂಡಕ ಎನ್ನವ ಹಾಡಿಗೆ ಅನೂಪ್ ಸಾಹಿತ್ಯ ಬರೆದಿದ್ದಾರೆ. ರಾಜರಥ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಕುರುಕ್ಷೇತ್ರ ಡಬ್ಬಿಂಗ್ ನಲ್ಲಿ ಪಾಲ್ಗೋಳ್ಳಲಿದ್ದಾರೆ, ಜೊತೆಗೆ ದರ್ಶನ್ ಅಭಿನಯದ ಯಜಮಾನ, ಪುನೀತ್ ನಟನೆಯ ನಟ ಸಾರ್ವಭೌಮ ಹಾಗೂ ಸುದೀಪ್ ಅಭಿನಯದ ಕೋಟಿಗೊಬ್ಬ-3, ದೃವಸರ್ಜಾ ಮುಂದಿನ ಸಿನಿಮಾ ಪೊಗರುವಿನಲ್ಲೂ ಕೂಡ ರವಿಶಂಕರ್ ನಟಿಸಿದ್ದಾರೆ.
ಹೊಸ ನಟರು ಹಾಗೂ ಸ್ಟಾರ್ ನಟರುಗಳ ಜೊತೆ ನಟಿಸಿದ್ದೇನೆ, ಇವರುಗಳ ಜೊತೆ ಕೆಲಸ ಮಾಡಲು ಅವಕಾಶ ನೀಡಿದ ನಿರ್ದೇಶಕರುಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT