ರವಿಶಂಕರ್ 
ಸಿನಿಮಾ ಸುದ್ದಿ

ನನಗಾಗಿ ಯುವ ಪಾತ್ರಗಳನ್ನು ರೂಪಿಸುತ್ತಿರುವ ಯುವ ನಿರ್ದೇಶಕರುಗಳಿಗೆ ನಾನು ಆಭಾರಿ: ರವಿಶಂಕರ್

ಸಿನಿಮಾ ವಿಷಯಕ್ಕೆ ಬಂದರೆ ನಟ ರವಿಶಂಕರ್ ಅವರ ಪ್ರತಿಭೆ ಎಲ್ಲೆ ಮೀರಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ವಿಲ್ಲನ್ ...

ಬೆಂಗಳೂರು: ಸಿನಿಮಾ ವಿಷಯಕ್ಕೆ ಬಂದರೆ ನಟ ರವಿಶಂಕರ್ ಅವರ ಪ್ರತಿಭೆ ಎಲ್ಲೆ ಮೀರಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ವಿಲ್ಲನ್ ಪಾತ್ರದಲ್ಲಿ ನಟಿಸಿದ್ದರೂ ಅವರ ನಟನೆ ಅಷ್ಟಕ್ಕೆ ಸೀಮಿತವಾಗಿಲ್ಲ, ವೈವಿಧ್ಯಮಯ ಪಾತ್ರಗಳಲ್ಲಿ ರವಿಶಂಕರ್ ನಟಿಸಿದ್ದಾರೆ.
ಅನೂಪ್ ಭಂಡಾರಿ ನಿರ್ದೇಶನದ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬರುತ್ತಿರುವ ರಾಜರಥ ಸಿನಿಮಾದಲ್ಲಿ ರವಿಶಂಕರ್ ತೀರಾ ವಿಭಿನ್ನವಾದ ಪಾತ್ರದಲ್ಲಿ ನಟಿಸಿದ್ದಾರೆ. ಬಸ್ ಪ್ರಯಾಣದ ಕಥೆಯಾಗಿರುವ ಈ ಸಿನಿಮಾದಲ್ಲಿ ರವಿಶಂಕರ್ ಟಿಕೆಟ್ ಇನ್ಸ್ ಪೆಕ್ಟರ್  ಪಾತ್ರದಲ್ಲಿ ಅಭಿನಯಿಸಿದ್ದಾರೆ.  ತಮ್ಮ ವಿಲ್ಲನ್  ಪಾತ್ರಗಳನ್ನು ಬದಿಗೊತ್ತಿರುವ ರವಿಶಂಕರ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜರಥ ಸಿನಿಮಾದ ಈ ಪ್ರಯಾಣದ ಕಥೆಯಲ್ಲಿ ನಾನು ಒಬ್ಬ ಪ್ರಯಾಣಿಕ, ಅನೂಪ್ ಭಂಡಾರಿ ನನ್ನ ಪಾತ್ರವನ್ನು ವಿಶೇಷವಾಗಿ ರೂಪಿಸಿದ್ದಾರೆ, ವಿಭಿನ್ನ ಗೆಟಪ್ ರವಿಶಂಕರ್ ಅವರದ್ದು, ತಲೆಗೆ ವಿಗ್, ಕಣ್ಣಿಗೆ ಕನ್ನಡಕ, ಚೆಕ್ಸ್ ಇರುವ ಕೋಟು ಧರಿಸಿ ಯುವಕನಂತೆ ಕಾಣುತ್ತಾರೆ. 
ಈ ಸಿನಿಮಾದ ಹಾಡಿಗೆ ರವಿಶಂಕರ್ ಹಿನ್ನೆಲೆಗಾಯನ ನೀಡಿದ್ದಾರೆ, ಗಂಡಕ ಭಂಡಕ ಎನ್ನವ ಹಾಡಿಗೆ ಅನೂಪ್ ಸಾಹಿತ್ಯ ಬರೆದಿದ್ದಾರೆ. ರಾಜರಥ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಕುರುಕ್ಷೇತ್ರ ಡಬ್ಬಿಂಗ್ ನಲ್ಲಿ ಪಾಲ್ಗೋಳ್ಳಲಿದ್ದಾರೆ, ಜೊತೆಗೆ ದರ್ಶನ್ ಅಭಿನಯದ ಯಜಮಾನ, ಪುನೀತ್ ನಟನೆಯ ನಟ ಸಾರ್ವಭೌಮ ಹಾಗೂ ಸುದೀಪ್ ಅಭಿನಯದ ಕೋಟಿಗೊಬ್ಬ-3, ದೃವಸರ್ಜಾ ಮುಂದಿನ ಸಿನಿಮಾ ಪೊಗರುವಿನಲ್ಲೂ ಕೂಡ ರವಿಶಂಕರ್ ನಟಿಸಿದ್ದಾರೆ.
ಹೊಸ ನಟರು ಹಾಗೂ ಸ್ಟಾರ್ ನಟರುಗಳ ಜೊತೆ ನಟಿಸಿದ್ದೇನೆ, ಇವರುಗಳ ಜೊತೆ ಕೆಲಸ ಮಾಡಲು ಅವಕಾಶ ನೀಡಿದ ನಿರ್ದೇಶಕರುಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT