ಸಿನಿಮಾ ಸುದ್ದಿ

'ಸಂಕಷ್ಟಕರ ಗಣಪತಿ' ಚಿತ್ರದಲ್ಲಿ ನಾಯಕನಿಗೆ ನರ ದೌರ್ಬಲ್ಯ ಸಮಸ್ಯೆ!

Vishwanath S
ಸ್ಯಾಂಡಲ್ವುಡ್ ನಲ್ಲಿ ಪ್ರಯೋಗಾತ್ಮಕ ಚಿತ್ರಗಳ ಪ್ರಯೋಗ ನಡೆಯುತ್ತಿದೆ. ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ ಅರ್ಜುನ್ ಕುಮಾರ್ ಇದೀಗ ಸಂಕಷ್ಟಕರ ಗಣಪತಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್ವುಡ್ ಗೆ ಕಾಲಿಡುತ್ತಿದ್ದಾರೆ. 
ಸಂಕಷ್ಟಕರ ಗಣಪತಿ ಚಿತ್ರದಲ್ಲಿ ಲಿಖಿತ್ ಶೆಟ್ಟಿ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದು ಆತ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುತ್ತಾನೆ. ನಾಯಕನ ಕೈಗೆ ತೊಂದರೆ ಇರುತ್ತದೆ. ಕೆಲವೊಮ್ಮೆ ಆತನಿಗೆ ತನ್ನ ಕೈ ಮೇಲೆಯೇ ನಿಯಂತ್ರಣ ಇರುವುದಿಲ್ಲ. ಹೀಗಾಗಿ ಆತ ಕೆಲವು ಬಾರಿ ಸಂಕಷ್ಟಕ್ಕೆ ಸಿಲುಕುತ್ತಾನೆ ಹಾಗೂ ಅದರಿಂದ ಹೇಗೆ ಬರಬರುತ್ತಾನೆ ಎಂಬುದು ಚಿತ್ರದ ಕಥಾವಸ್ತು. ಹೀಗಾಗಿ ನಿರ್ದೇಶಕರು ಸಂಕಷ್ಟ'ಹರ' ಬದಲಿಗೆ 'ಕರ' ಎಂದು ಟೈಟಲ್ ಇಟ್ಟಿದ್ದಾರೆ. 
ಸದ್ಯ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಕೈಯನ್ನೇ ಪ್ರಮುಖವಾಗಿಟ್ಟುಕೊಂಡು ನಿರ್ದೇಶಕರು ಫಸ್ಟ್ ಲುಕ್ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಶ್ರುತಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜಿಸಿದ್ದು ಜೂನ್ 10ಕ್ಕೆ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಇನ್ನು ಪುನೀತ್ ರಾಜಕುಮಾರ್ ಅವರ ಪಿಆರ್ ಕೆ ಆಡಿಯೋ ಮೂಲಕ ಹಾಡುಗಳು ರಿಲೀಸ್ ಆಗುತ್ತಿವೆ.
SCROLL FOR NEXT