ಬೆಂಗಳೂರು: ಕನ್ನಡಿಗರಿಗೆ ಭಾಷಾಭಿಮಾನ ಇಲ್ಲ ಅಂತ ಕನ್ನಡಿಗರೇ ಸಾಕಷ್ಟು ಕಡೆ ಹೇಳಿಕೊಂಡು ಕೊರಗುತ್ತಾರೆ. ಇನ್ನು ಕನ್ನಡಿಗರಾದ ಉಪೇಂದ್ರ ಹಾಗೂ ಶಿವರಾಜಕುಮಾರ್ ಅವರು ತಮಿಳು ಚಿತ್ರವೊಂದಕ್ಕೆ ಶುಭಾಶಯ ತಿಳಿಸುವ ಸಲುವಾಗಿ ತಮಿಳಿನಲ್ಲಿ ಮಾತನಾಡಿರುವ ವಿಡಿಯೋ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ 2.0 ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಚೆನ್ನೈನಲ್ಲಿ ಭರ್ಜರಿಯಾಗಿ ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶುಭಕೋರಿ ಶಿವರಾಜಕುಮಾರ್ ಹಾಗೂ ಉಪ್ಪಿ ವಿಡಿಯೋ ಸಂದೇಶವನ್ನು ಕಳುಹಿಸಿದ್ದರು. ಈ ಇಬ್ಬರೂ ನಟರು ಇಡೀ ಸಂದೇಶವನ್ನು ಸಂಪೂರ್ಣವಾಗಿ ತಮಿಳಿನಲ್ಲೇ ಮಾತನಾಡುತ್ತಾ ಕಳುಹಿಸಿದ್ದಾರೆ.
ಉಪೇಂದ್ರ ವಿಡಿಯೋ ನೋಡಿದ ಶಂಕರ್ ಅವರು ಉಪೇಂದ್ರ ಉತ್ತಮ ನಿರ್ದೇಶಕರು. ಅವರ ನಿರ್ದೇಶನದ ಎ ಮತ್ತು ಉಪೇಂದ್ರ ಚಿತ್ರಗಳು ಅತ್ಯುತ್ತಮ ಚಿತ್ರಗಳು ಎಂದು ಹೇಳಿದ್ದಾರೆ.
2.0 ಚಿತ್ರದಲ್ಲಿ ನಟಿಸಿರುವ ರಜನಿಕಾಂತ್ ಅವರು ಕನ್ನಡಿಗರು. ಅವರಿಗೆ ಕನ್ನಡ ಚೆನ್ನಾಗಿಯೇ ಬರುತ್ತದೆ. ಹೀಗಿರುವಾಗ ನಮ್ಮ ದಿಗ್ಗಜ ನಟರು ಕನ್ನಡದಲ್ಲೇ ರಜನಿಗೆ ಸಂದೇಶವನ್ನು ಕಳುಹಿಸಬಹುದಿತ್ತಲ್ಲವಾ? ಎಂಬ ಪ್ರಶ್ನೆ ಮೂಡಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos