ರಿಚಾ ಛಾಡ್ಡಾ 
ಸಿನಿಮಾ ಸುದ್ದಿ

ಕೇರಳದಿಂದ ಕರ್ನಾಟಕಕ್ಕೆ 'ಶಕೀಲಾ 'ಚಿತ್ರದ ಶೂಟಿಂಗ್ ಸ್ಥಳಾಂತರದಿಂದ ಗೊತ್ತಿಲ್ಲದ ಸ್ಥಳಗಳ ಪತ್ತೆ- ನಿರ್ದೇಶಕ

'ಶಕೀಲಾ' ಚಿತ್ರದ ಚಿತ್ರೀಕರಣವನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರದಿಂದ ಕರ್ನಾಟಕದಲ್ಲಿ ಎಷ್ಟೋ ಗೊತ್ತಿಲ್ಲದ ಅನೇಕ ಸ್ಥಳಗಳನ್ನು ಪತ್ತೆ ಹಚ್ಚಲು ಅವಕಾಶವಾಯಿತು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.

ಬೆಂಗಳೂರು:  ವಿನಾಶಕಾರಿ ಪ್ರವಾಹದ ಕಾರಣದಿಂದ ಬಾಲಿವುಡ್ ಬಯೋಪಿಕ್  'ಶಕೀಲಾ' ಚಿತ್ರದ ಚಿತ್ರೀಕರಣವನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರಿಸಿದ್ದರಿಂದ ಕರ್ನಾಟಕದಲ್ಲಿ ಎಷ್ಟೋ ಗೊತ್ತಿಲ್ಲದ  ಅನೇಕ ಸ್ಥಳಗಳನ್ನು  ಪತ್ತೆ ಹಚ್ಚಲು ಅವಕಾಶವಾಯಿತು  ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.

ರಿಚಾ ಛಾಡ್ಡಾ ಅಭಿನಯಿಸುತ್ತಿರುವ ಶಕೀಲಾ , ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿನ ನೀಲಿ ತಾರೆ ಎಂದೇ ಹಣೆಪಟ್ಟಿ ಕಟ್ಟಿಕೊಂಡಿದ್ದ  ಶಕೀಲಾ ಜೀವನ ಚರಿತ್ರೆ ಕುರಿತಾದ್ದಾಗಿದೆ.

 ಕಥೆ ಹಾಗೂ ಚಿತ್ರೀಕರಣದ ಸ್ಥಳಗಳನ್ನು ಈ ಹಿಂದೆಯೇ ಪೂರ್ಣಗೊಳಿಸಲಾಗಿತ್ತು. ಅದು ನಿತ್ಯ ಕೂಡಾ ನಡೆಯುತ್ತಿರುತ್ತದೆ. ಕೇರಳದಲ್ಲಿ ಮಳೆ ಕಾರಣದಿಂದಾಗಿ ಕೂಡಲೇ ಚಿತ್ರೀಕರಣವನ್ನು ಬದಲಾವಣೆ ಮಾಡಬೇಕಾಗಿದ್ದರಿಂದ ತುಂಬಾ ಕಷ್ಟವಾಯಿತು ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಆದರೆ, ಕರ್ನಾಟದಲ್ಲಿ ಇನ್ನೂ ಗೊತ್ತಿಲ್ಲದ ಅನೇಕ ಸ್ಥಳಗಳಿವೆ . ಇಂತಹ ಸ್ಥಳಗಳ ಹುಡುಕಾಟ ನಡೆಸಲು ಕೇರಳ ನೆರವಾಯಿತು . ಕಥೆ ಏನನ್ನೂ ಹೇಳುತ್ತದೆಯೋ ಆ ರೀತಿಯ ಸ್ಥಳಗಳನ್ನು  ಪತ್ತೆ ಮಾಡಿರುವುದಾಗಿ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಇಂದ್ರಜಿತ್  ತಿಳಿಸಿದರು.

ದಕ್ಷಿಣ ಭಾರತದಲ್ಲಿ ನೀಲಿ ತಾರೆ ಎಂದೇ  ಹಣೆಪಟ್ಟಿ ಕಟ್ಟಿಕೊಂಡಿದ್ದ ಶಕೀಲಾ ಅವರ ಜೀವನ ಚರಿತ್ರೆ ಈ ಚಿತ್ರದ ಕಥಾ ಹಂದರವಾಗಿದೆ. ಆಕೆ ಒಳ್ಳೆಯವರಾಗಿದ್ದರೂ ಸಮಾಜ ನೋಡುವ ದೃಷ್ಟಿಕೋನವೇ ಬೇರೆಯಾಗಿತ್ತು ಎನ್ನುತ್ತಾರೆ ಇಂದ್ರಜಿತ್ .
ಶಕೀಲಾ ಅಭಿನಯದ ಚಿತ್ರಗಳಿಗೆ ಸಂಬಂಧಿತ ಸಂಸ್ಥೆಗಳಿಂದ ಪ್ರಮಾಣ ಪತ್ರ ನೀಡಿದ್ದು, ಉತ್ತಮ ಆದಾಯ ಕೂಡಾ ಸಂಪಾದಿಸಿವೆ ಆದರೂ, ಅವರಿಗೆ ಗೌರವ ನೀಡುತ್ತಿರಲಿಲ್ಲ. ಚಿತ್ರರಂಗದಿಂದ ಹೊರ ಹಾಕಲಾಗಿತ್ತು. ಆಕೆಯ ಒಂದು ಮನೆ ಕೂಡಾ ಕೊಳ್ಳಲು ಆಗಿರಲಿಲ್ಲ. ಈ ಎಲ್ಲಾ ಸೂಕ್ಷ್ಮ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡಿರುವುದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT