ರಿಚಾ ಛಾಡ್ಡಾ 
ಸಿನಿಮಾ ಸುದ್ದಿ

ಕೇರಳದಿಂದ ಕರ್ನಾಟಕಕ್ಕೆ 'ಶಕೀಲಾ 'ಚಿತ್ರದ ಶೂಟಿಂಗ್ ಸ್ಥಳಾಂತರದಿಂದ ಗೊತ್ತಿಲ್ಲದ ಸ್ಥಳಗಳ ಪತ್ತೆ- ನಿರ್ದೇಶಕ

'ಶಕೀಲಾ' ಚಿತ್ರದ ಚಿತ್ರೀಕರಣವನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರದಿಂದ ಕರ್ನಾಟಕದಲ್ಲಿ ಎಷ್ಟೋ ಗೊತ್ತಿಲ್ಲದ ಅನೇಕ ಸ್ಥಳಗಳನ್ನು ಪತ್ತೆ ಹಚ್ಚಲು ಅವಕಾಶವಾಯಿತು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.

ಬೆಂಗಳೂರು:  ವಿನಾಶಕಾರಿ ಪ್ರವಾಹದ ಕಾರಣದಿಂದ ಬಾಲಿವುಡ್ ಬಯೋಪಿಕ್  'ಶಕೀಲಾ' ಚಿತ್ರದ ಚಿತ್ರೀಕರಣವನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರಿಸಿದ್ದರಿಂದ ಕರ್ನಾಟಕದಲ್ಲಿ ಎಷ್ಟೋ ಗೊತ್ತಿಲ್ಲದ  ಅನೇಕ ಸ್ಥಳಗಳನ್ನು  ಪತ್ತೆ ಹಚ್ಚಲು ಅವಕಾಶವಾಯಿತು  ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.

ರಿಚಾ ಛಾಡ್ಡಾ ಅಭಿನಯಿಸುತ್ತಿರುವ ಶಕೀಲಾ , ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿನ ನೀಲಿ ತಾರೆ ಎಂದೇ ಹಣೆಪಟ್ಟಿ ಕಟ್ಟಿಕೊಂಡಿದ್ದ  ಶಕೀಲಾ ಜೀವನ ಚರಿತ್ರೆ ಕುರಿತಾದ್ದಾಗಿದೆ.

 ಕಥೆ ಹಾಗೂ ಚಿತ್ರೀಕರಣದ ಸ್ಥಳಗಳನ್ನು ಈ ಹಿಂದೆಯೇ ಪೂರ್ಣಗೊಳಿಸಲಾಗಿತ್ತು. ಅದು ನಿತ್ಯ ಕೂಡಾ ನಡೆಯುತ್ತಿರುತ್ತದೆ. ಕೇರಳದಲ್ಲಿ ಮಳೆ ಕಾರಣದಿಂದಾಗಿ ಕೂಡಲೇ ಚಿತ್ರೀಕರಣವನ್ನು ಬದಲಾವಣೆ ಮಾಡಬೇಕಾಗಿದ್ದರಿಂದ ತುಂಬಾ ಕಷ್ಟವಾಯಿತು ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಆದರೆ, ಕರ್ನಾಟದಲ್ಲಿ ಇನ್ನೂ ಗೊತ್ತಿಲ್ಲದ ಅನೇಕ ಸ್ಥಳಗಳಿವೆ . ಇಂತಹ ಸ್ಥಳಗಳ ಹುಡುಕಾಟ ನಡೆಸಲು ಕೇರಳ ನೆರವಾಯಿತು . ಕಥೆ ಏನನ್ನೂ ಹೇಳುತ್ತದೆಯೋ ಆ ರೀತಿಯ ಸ್ಥಳಗಳನ್ನು  ಪತ್ತೆ ಮಾಡಿರುವುದಾಗಿ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಇಂದ್ರಜಿತ್  ತಿಳಿಸಿದರು.

ದಕ್ಷಿಣ ಭಾರತದಲ್ಲಿ ನೀಲಿ ತಾರೆ ಎಂದೇ  ಹಣೆಪಟ್ಟಿ ಕಟ್ಟಿಕೊಂಡಿದ್ದ ಶಕೀಲಾ ಅವರ ಜೀವನ ಚರಿತ್ರೆ ಈ ಚಿತ್ರದ ಕಥಾ ಹಂದರವಾಗಿದೆ. ಆಕೆ ಒಳ್ಳೆಯವರಾಗಿದ್ದರೂ ಸಮಾಜ ನೋಡುವ ದೃಷ್ಟಿಕೋನವೇ ಬೇರೆಯಾಗಿತ್ತು ಎನ್ನುತ್ತಾರೆ ಇಂದ್ರಜಿತ್ .
ಶಕೀಲಾ ಅಭಿನಯದ ಚಿತ್ರಗಳಿಗೆ ಸಂಬಂಧಿತ ಸಂಸ್ಥೆಗಳಿಂದ ಪ್ರಮಾಣ ಪತ್ರ ನೀಡಿದ್ದು, ಉತ್ತಮ ಆದಾಯ ಕೂಡಾ ಸಂಪಾದಿಸಿವೆ ಆದರೂ, ಅವರಿಗೆ ಗೌರವ ನೀಡುತ್ತಿರಲಿಲ್ಲ. ಚಿತ್ರರಂಗದಿಂದ ಹೊರ ಹಾಕಲಾಗಿತ್ತು. ಆಕೆಯ ಒಂದು ಮನೆ ಕೂಡಾ ಕೊಳ್ಳಲು ಆಗಿರಲಿಲ್ಲ. ಈ ಎಲ್ಲಾ ಸೂಕ್ಷ್ಮ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡಿರುವುದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT