ಸುಮಲತಾ-ಅಭಿಶೇಕ್ 
ಸಿನಿಮಾ ಸುದ್ದಿ

ತಾನು ಅತ್ತರೆ ಅಮ್ಮನಿಗೆ ನೋವಾಗುತ್ತೆಂದು ದುಃಖವನ್ನು ತಡೆದುಕೊಂಡಿದ್ದ ಅಂಬರೀಶ್ ಮಗ ಅಭಿಶೇಕ್!

ಸ್ನೇಹಿತನಂತಿದ್ದ ತಂದೆ ತೀರಿಕೊಂಡಾಗ ಸರ್ವಸ್ವವೇ ಕಳೆದುಕೊಂಡಂತ ಬಾವ ಮೂಡುತ್ತದೆ. ಕಣ್ಣೀರಿನ ಮೂಲಕ ತನ್ನ ನೋವನ್ನು ಹೊರ ಹಾಕುತ್ತಾರೆ...

ಬೆಂಗಳೂರು: ಸ್ನೇಹಿತನಂತಿದ್ದ ತಂದೆ ತೀರಿಕೊಂಡಾಗ ಸರ್ವಸ್ವವೇ ಕಳೆದುಕೊಂಡಂತ ಭಾವ ಮೂಡುತ್ತದೆ. ಕಣ್ಣೀರಿನ ಮೂಲಕ ತನ್ನ ನೋವನ್ನು ಹೊರ ಹಾಕುತ್ತಾರೆ. ಕಣ್ಣ ಮುಂದೆ ಶಾಶ್ವತವಾಗಿ ಮೌನಕ್ಕೆ ಜಾರಿದ ಅಪ್ಪನ ಮುಂದೆ ಮುಖದಲ್ಲಿ ನೋವಿನ ಭಾವನೆ ಇಲ್ಲದಂತೆ ಇರುವುದು ಎಲ್ಲರಿಗೂ ಸಾಧ್ಯವಿಲ್ಲ. 
ಹೌದು, ರೆಬೆಲ್ ಸ್ಟಾರ್ ಅಂಬರೀಶ್ ಅಸುನೀಗಿದ್ದಾಗ ಪುತ್ರ ಅಭಿಶೇಕ್ ವರ್ತಿಸಿದ ರೀತಿಯನ್ನು ಕಂಡ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕರುಳು ಕಿತ್ತು ಬಂದಿತಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. 
ನಾನು ಆಸ್ಪತ್ರೆಗೆ ಹೋದಾಗ ಅಭಿಶೇಕ್ ತಂದೆಯ ಮೃತ ದೇಹದ ಮುಂದೆ ಸುಮ್ಮನೆ ನಿಂತಿದ್ದ. ಆಗ ಅಭಿಯನ್ನು ನಾನು ಮಾತನಾಡಿಸಿದೆ. ತಂದೆಯನ್ನು ಕಳೆದುಕೊಂಡಿದ್ದು ಇಂತಹ ಪರಿಸ್ಥಿತಿಯಲ್ಲಿ ಸುಮ್ಮನಿದ್ದಿಯಲ್ಲ ಎಂದು ಪ್ರಶ್ನಿಸಿದೆ. ಅದಕ್ಕೆ ಅಭಿ ನಾನು ಅತ್ತರೆ ಅಮ್ಮನ ದುಃಖ ಇನ್ನು ಜಾಸ್ತಿಯಾಗುತ್ತದೆ. ಅವರ ಮನಸ್ಸು ಇನ್ನಷ್ಟು ರೋದಿಸುತ್ತದೆ ಎಂದು ಆತ ಹೇಳಿದ ಮಾತು ಕೇಳಿ ನನಗೆ ನೋವಾಗಿತ್ತು ಎಂದು ಹೇಳಿದ್ದಾರೆ. 
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬರೀಷ್ ಗೆ ಪುಷ್ಮ ನಮನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಈ ಮಾತುಗಳನ್ನಾಡಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT