ಧೀರೆನ್ ಕುಮಾರ್ 
ಸಿನಿಮಾ ಸುದ್ದಿ

ಚಿತ್ರರಂಗಕ್ಕೆ ರಾಜ್ ಕುಟುಂಬ ಇನ್ನೊಂದು ಕುಡಿ: ರಾಮ್ ಕುಮಾರ್ ಪುತ್ರ ಧೀರೆನ್ ಚಿತ್ರಕ್ಕೆ ಅನಿಲ್ ನಿರ್ದೇಶನ!

ರಾಜ್ ಕುಮಾರ್ ಕುಟುಂಬದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ದವಾಗಿದೆ. ಪೂರ್ಣಿಮಾ ಹಾಗೂ ನಟ ರಾಮ್ ಕುಮಾರ್ ಪುತ್ರ ಧೀರೆನ್ ಕುಮಾರ್....

ಬೆಂಗಳೂರು: ರಾಜ್ ಕುಮಾರ್ ಕುಟುಂಬದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ದವಾಗಿದೆ. ಪೂರ್ಣಿಮಾ ಹಾಗೂ ನಟ ರಾಮ್ ಕುಮಾರ್ ಪುತ್ರ ಧೀರೆನ್ ಕುಮಾರ್ ತಾವು ಚಿತ್ರರಂಗ ಪ್ರವೇಶಿಸಲು ಹಲವು ತಿಂಗಳುಗಳಿಂದ ಪ್ರಯತ್ನ ನಡೆಸಿದ್ದು ಅಂತಿಮವಾಗಿ ಅನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ನಟಿಸಲು ಅವಕಾಶ ಗಿಟ್ಟಿಸಿದ್ದಾರೆ.
ರ್ಯಾಂಬೋ 2, ಯಶ್ ಅಭಿನಯದ ಮೈ ನೇಮ್ ಈಸ್ ಕಿರಾತಕ ಚಿತ್ರಗಳ ನಿರ್ದೇಶಕರಾದ ಅನಿಲ್ ಧೀರೆನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ. ಸೂರಿ ಹಾಗೂ ಜಯಣ್ಣ ಈ ಚಿತ್ರಕ್ಕೆ ಬಂಡವಾಳ ತೊಡಗಿಸಲಿದ್ದಾರೆ ಇನ್ನೂ ಒಂದು ಅಥವಾ ಒಂದೂವರೆ ತಿಂಗಳಲ್ಲಿ ಧೀರೆನ್  ನಾಯಕನಾಗಿರುವ ಚಿತ್ರದ ಯೋಜನೆ ಸಿದ್ದವಾಗಲಿದ್ದು ಯಶ್ ಚಿತ್ರದ ಕೆಲಸಗಳೆಲ್ಲಾ ಮುಗಿದ ನಂತರ ನಿರ್ದೇಶಕ ಅನಿಲ್ ಈ ಚಿತ್ರದ ಕೆಲಸ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಮೂಲಗಳು ಏಳಿದೆ.
ಧೀರೆನ್ ತಾವು ಸರಿಯಾದ ಚಿತ್ರಕಥೆಗಾಗಿ ಕಳೆದ ಕೆಲ ದಿನಗಳಿಂದ ಹುಡುಕಾಟದಲ್ಲಿದ್ದಾರೆ.ತಮ್ಮ ಇತ್ತೀಚಿನ ಸಂದರ್ಶ್ನವೊಂದರಲ್ಲಿ ಅವರು ತಾವು ಸದ್ಯದಲ್ಲೇ ಚಿತ್ರರಂಗಕ್ಕೆ ಪ್ರವೇಶಿಸುವ ಸೂಚನೆ ನೀಡಿದ್ದರು. ಇದೇ ವೇಳೆ ರಾಘವೇಂದ್ರ ರಾಜ್ ಕುಮಾರ್ ಪ್ರಥಮ ಪುತ್ರ ವಿನಯ್ ರಾಜ್ ಕುಮಾರ್ ಇದಾಗಲೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಮಾಸ್ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇದೀಗ ಅವರ ದ್ವಿತೀಯ ಪುತ್ರ ಯುವರಾಜ್ 2019 ರಲ್ಲಿ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ.
ತೆಲುಗಿನ ಆರ್ ಎಕ್ಸ್ 100 ರೀಮೇಕ್ ನಲ್ಲಿ ಧೀರೆನ್?
ಟಾಲಿವುಡ್ ಉತ್ತಮ ಚಿತ್ರವಾಗಿರುವ ಆರ್ ಎಕ್ಸ್ 100 ನ ರೀಮೇಕ್ ನಲ್ಲಿ ನವ ನಟ ಧೀರೆನ್  ಕಾಣಿಸಿಕೊಳ್ಳಲಿದ್ದಾರೆಯೆ ಎನ್ನುವ ಪ್ರಶ್ನೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ.ಇನ್ನು ಇದಾಗಲೇ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗನಾದ ಅಹಾನ್ ಗಾಗಿ ಇದೇ ಚುತ್ರದ ಹಿಂದಿ ಅವತರಣಿಕೆಯನ್ನು ಸಜೀದ್ ನದಿಯಾದ್ವಾಲಾ ತಯಾರಿಸುತ್ತಿದ್ದಾರೆ. ಇದೀಗ ಜಯಣ್ಣ ಧೀರೆನ್ ಗಾಗಿ ಇದೇ ಚಿತ್ರದ ಕನ್ನಡ ಹಕ್ಕುಗಳನ್ನು ಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿ ಎಷ್ಟು ಸತ್ಯ ಎನ್ನುವುದನ್ನು ತಿಳಿಯಲು ನಾವಿನ್ನೂ ಕೆಲ ಸಮಯ ತಾಳ್ಮೆಯಿಂದ ಕಾಯಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT