ಮನೀಶ್ ರಿಷಿ 
ಸಿನಿಮಾ ಸುದ್ದಿ

ಚಿಕ್ಕಮ್ಮನ ಮೇಲೆ ಹಲ್ಲೆ: ಸ್ಯಾಂಡಲ್ ವುಡ್ ನಟನ ಮೇಲೆ ಬಿತ್ತು ಕೇಸ್!

ಆಪರೇಷನ್ ಅಲಮೇಲಮ್ಮ ಚಿತ್ರದ ಖ್ಯಾತಿಯ ಮನಿಷ್ ರಿಷಿ ತನ್ನ ವಿಕಲಚೇತನ ಚಿಕ್ಕಮ್ಮನ ಕುತ್ತಿಗೆ ಹಿಸುಕಿ, ಮಚ್ಚು ತೋರಿಸಿ ಕೊಲೆ ಬೆದರಿಕೆ ಹಾಕಿರುವ ...

ಬೆಂಗಳೂರು:  ಆಪರೇಷನ್ ಅಲಮೇಲಮ್ಮ ಚಿತ್ರದ ಖ್ಯಾತಿಯ ಮನಿಷ್ ರಿಷಿ ತನ್ನ 
ವಿಕಲಚೇತನ ಚಿಕ್ಕಮ್ಮನ ಕುತ್ತಿಗೆ ಹಿಸುಕಿ, ಮಚ್ಚು ತೋರಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ,
ಎರಡನೇ ಸಿನಿಮಾವಾಗಿ 'ಕವಲುದಾರಿ' ಎಂಬ ಬಹುನಿರೀಕ್ಷಿತ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದ ನಟ ರಿಷಿ ಸ್ಯಾಂಡಲ್​ವುಡ್​ನಲ್ಲಿ ನೆಲೆಯೂರುವ ಭರವಸೆ ಮೂಡಿಸಿದ್ದರು.  
ರಿಷಿ, ಚಿಕ್ಕಮ್ಮ ಶಾಲಿನಿ ಗುರುಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ.ಬಸವೇಶ್ವರನಗರದಲ್ಲಿರುವ ತಂದೆ ಮನೆಗೆ ತಂದೆಯನ್ನು ನೋಡಲು ತೆರಳಿದ್ದಾಗ ಹಲ್ಲೆ ನಡೆಸಲಾಗಿದೆ.
ನಟ ರಿಷಿ ತಮ್ಮ ಅಮ್ಮ ಅನಲ ಅವರ ತಂದೆಯ ಮನೆ ಅಂದರೆ ರಿಷಿಯ ತಾತನ ಮನೆಯಲ್ಲಿಯೇ  ವಾಸವಾಗಿದ್ದಾರೆ. ಅವರ ಜೊತೆಗೆ ರಿಷಿಯ ಅಪ್ಪ ನಾಗರಾಜು ಕೂಡ ಅಲ್ಲಿಯೇ ಇದ್ದಾರೆ. ಅನಲ ಅವರ ತಂಗಿ ಶಾಲಿನಿ ಗುರುಮೂರ್ತಿ ವಿಕಲಚೇತನರಾಗಿದ್ದು, ನಿನ್ನೆ ತಮ್ಮ ತಂದೆಯನ್ನು ನೋಡಲು ಬಸವೇಶ್ವರದಲ್ಲಿರುವ ಮನೆಗೆ ಬಂದಿದ್ದಾರೆ. ಆದರೆ, ಆಕೆಯನ್ನು ಒಳಗೆ ಬರಲು ಬಿಡದ ರಿಷಿ ಮತ್ತವರ ತಂದೆ-ತಾಯಿ, ಸ್ಟಾಂಪ್​ ಪೇಪರ್​ ಮೇಲೆ ಸಹಿ ಹಾಕಿ ಒಳಗೆ ಬಾ ಎಂದು ಹೆದರಿಸಿದ್ದಾರೆ.
ತಮ್ಮ ತಾತನ ಸುಮಾರು 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ರಿಷಿ ತನ್ನ ಚಿಕ್ಕಮ್ಮನಿಗೆ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಸ್ವತಃ ಶಾಲಿನಿ ಗುರುಮೂರ್ತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಿ ಹಾಗೂ ಅವರ ಅಪ್ಪ-ಅಮ್ಮನ ವಿರುದ್ಧ ಬಸವೇಶ್ವರನಗರದ  ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT