ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ ಮಹಿಳೆ 
ಸಿನಿಮಾ ಸುದ್ದಿ

'ನಂಬರ್ ಕೊಟ್ಟು ರೂಂಗೆ ಬನ್ನಿ ಎಂದಿದ್ದ ಅರ್ಜುನ್ ಸರ್ಜಾ': ಬೆಂಗಳೂರು ಮಹಿಳೆಯ ಆರೋಪ

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧದ ನಟಿ ಶೃತಿ ಹರಿಹರನ್ ಆರೋಪ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಈ ಪಟ್ಟಿಗೆ ಇದೀಗ ಮತ್ತೊರ್ವ ಮಹಿಳೆ ಸೇರ್ಪಡೆಯಾಗಿದ್ದಾರೆ.

ಬೆಂಗಳೂರು: ದಕ್ಷಿಣ ಭಾರತದ  ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧದ ನಟಿ ಶೃತಿ ಹರಿಹರನ್ ಆರೋಪ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಈ ಪಟ್ಟಿಗೆ ಇದೀಗ ಮತ್ತೊರ್ವ ಮಹಿಳೆ ಸೇರ್ಪಡೆಯಾಗಿದ್ದಾರೆ.
ಮಾಧ್ಯಮವೊಂದು ವರದಿ ಮಾಡಿರುವಂತೆ, ಬಹುಭಾಷಾ ನಟ ಅರ್ಜುನ್ ಸರ್ಜಾ ಚಿತ್ರವೊಂದರ ಚಿತ್ರೀಕರಣದ ವೇಳೆ ತಮ್ಮ ಹೊಟೆಲ್ ರೂಂ ನಂಬರ್ ನೀಡಿ ರೂಂಗೆ ಬರುವಂಕೆ ಆಹ್ವಾನಿಸಿದ್ದರು ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆ 15 ವರ್ಷಗಳ ಹಿಂದೆ ನಡೆದಿದ್ದು, ಗೃಹಿಣಿ ಈಗ ಮೀಟೂ ಅಭಿಯಾನದ ಮೂಲಕ ಬಹಿರಂಗಪಡಿಸಿದ್ದಾರೆ.
ಗೃಹಿಣಿ ಆರೋಪವೇನು?
ಮೈಸೂರಿನಲ್ಲಿ ತೆಲುಗಿನ 'ಅರ್ಜುನುಡು' ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಮಹಿಳೆ ಆರೋಪ ಮಾಡಿದ್ದು, 'ಗೃಹಿಣಿಯಾದ ನಾನು ಮೂರು ದಿನ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದೆ. ನನ್ನ ಜೊತೆ ಇಪ್ಪತ್ತು ವಿದ್ಯಾರ್ಥಿನಿಯರು ಪಾರ್ಟ್ ಟೈಂ ಕೆಲಸದಲ್ಲಿ ಶೂಟಿಂಗ್ ಸೀನ್ ನಲ್ಲಿ ಪಾಲ್ಗೊಂಡಿದ್ದರು.  ಸ್ಟೂಡೆಂಟ್ಸ್ ಕ್ರೌಡ್ ಸೀನ್ ನಲ್ಲಿ ಭಾಗವಹಿಸುವಾಗ ಅರ್ಜುನ್ ನಮ್ಮೊಂದಿಗೆ ಅನುಚಿತ ವರ್ತನೆ ಮಾಡಿದ್ದರು. ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅವರು ನಮ್ಮ ಅಷ್ಟು ವಿದ್ಯಾರ್ಥಿನಿಯರ ನಂಬರ್ ಕೇಳಿದ್ದರು. ಅಷ್ಟೇ ಅಲ್ಲದೇ ಅವರ ರೂಂ ನಂಬರ್ ಕೊಟ್ಟು, ರೂಮಿಗೆ ಬನ್ನಿ, ರೆಸಾರ್ಟ್ ಇದೆ ನನ್ನದು ಅಂತಾ ಕರೆದಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾರೆ.
'ನನ್ನ ಅನೇಕ ಸ್ನೇಹಿತೆಯರು ಚಾನ್ಸ್ ಗಾಗಿ ಅರ್ಜುನ್ ಸರ್ಜಾ ರೂಮಿಗೆ ಹೋಗಿದ್ದರು. ಅಲ್ಲಿ ಅವರ ಜೊತೆ ಅರ್ಜುನ್ ಸರ್ಜಾ ಮಿಸ್ ಬಿಹೇವ್ ಮಾಡಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ ಕೂಡ ಈ ಸಿನಿಮಾದಲ್ಲಿ ಇದ್ದರು. ಅರ್ಜುನ್ ಸರ್ಜಾ ನಮ್ಮ ಜೊತೆ ಮಾತನಾಡುವ ಅವಶ್ಯಕತೆ ಇಲ್ಲದೇ ಇದ್ದರೂ ನಮ್ಮ ತಂಡದ ಲೀಡರ್ ಜೊತೆ ಕೋ ಆರ್ಡಿನೇಟ್ ಮಾಡಿ, ಅವರಿಗೆ ಒಂದಿಷ್ಟು ದುಡ್ಡು ಕೊಟ್ಟು ನಮ್ಮ ತಂಡದ ಹುಡುಗಿಯನ್ನು ರೂಮಿಗೆ ಕರೆಸಿಕೊಂಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO summit: ಟ್ರಂಪ್ ಗೆ ಸೆಡ್ಡು, ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆ- EY ವರದಿ

ಚಿತ್ರದುರ್ಗ ಶಾಸಕ ವಿರೇಂದ್ರ ಪಪ್ಪಿ ಮತ್ತೆ ಆರು ದಿನ ED ವಶಕ್ಕೆ

Ganesh Chaturthi ಎಫೆಕ್ಟ್; ಚಿನ್ನದ ಬೆಲೆ ಮತ್ತೆ ಏರಿಕೆ; ಇಂದಿನ ದರ ಪಟ್ಟಿ ಇಂತಿದೆ!

SCROLL FOR NEXT