ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಶ್ರುತಿಗೆ ಬೆಂಬಲ ನೀಡುವ ಮೂಲಕ ಚೇತನ್ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ: ಅರ್ಜುನ್ ಸರ್ಜಾ ಆಪ್ತ ಸಂಬರಗಿ

ಮೀ ಟೂ ಹೆಸರಿನಲ್ಲಿ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಆರೋಪ ಮಾಡಿಸುತ್ತಿರುವುದರ ಹಿಂದೆ ನಟ ಚೇತನ್ ಅವರ ದುರುದ್ದೇಶಪೂರಿತ ಸಂಚು ಅಡಗಿದೆ ಎಂದು ಉದ್ಯಮಿ ಹಾಗೂ ಸರ್ಜಾ ಅವರ ಆಪ್ತ ಪ್ರಶಾಂಕ್ ಸಂಬರಗಿಯವರು ಆರೋಪಿಸಿದ್ದಾರೆ...

ಬೆಂಗಳೂರು: ಮೀ ಟೂ ಹೆಸರಿನಲ್ಲಿ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಆರೋಪ ಮಾಡಿಸುತ್ತಿರುವುದರ ಹಿಂದೆ ನಟ ಚೇತನ್ ಅವರ ದುರುದ್ದೇಶಪೂರಿತ ಸಂಚು ಅಡಗಿದೆ ಎಂದು ಉದ್ಯಮಿ ಹಾಗೂ ಸರ್ಜಾ ಅವರ ಆಪ್ತ ಪ್ರಶಾಂಕ್ ಸಂಬರಗಿಯವರು ಆರೋಪಿಸಿದ್ದಾರೆ. 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರ್ಜುನ್ ಸರ್ಜಾ ನಿರ್ದೇಶಿಸಿ, ನಿರ್ಮಾಣದಲ್ಲಿ ಮೂಡಿ ಬಂದಿದ್ದ ಪ್ರೇಮಬರಹ ಚಿತ್ರಕ್ಕೆ ಮೊದಲು ನಾಯಕರಾಗಿ ನಟ ಚೇತನ್ ಆಯ್ಕೆಯಾಗಿದ್ದರು. ಇದಕ್ಕೆ ಸರ್ಜಾ ಅವರಿಂದ ರೂ.10 ಲಕ್ಷವನ್ನು ಮುಂಗಡ ಪಡೆದಿದ್ದರು. ಆದರೆ, ನಂತರ ನಿರ್ದೇಶಕರಿಗೆ ಚೇತನ್ ಅವರ ನಟನೆ ಸೂಕ್ತವೆನಿಸಿರಲಿಲ್ಲ. ಹೀಗಾಗಿ ಚೇತನ್ ಅವರನ್ನು ಕೈಬಿಡಲಾಗಿತ್ತು. 
ಬಳಿಕ ಸರ್ಜಾ ಹಣ ಕೇಳಿದಾಗ ಸಿನಿಮಾ ಅವಕಾಶ ಕೈತಪ್ಪಿದೆ. ನಿಮಗೆ ಸರಿಯಾದ ಪಾಠ ಕಲಿಸುತ್ತೇನೆಂದು ಬೆದರಿಕೆಯ ಸಂದೇಶವನ್ನು ಕಳುಹಿಸಿದ್ದರು. ಇದೇ ಶ್ರುತಿ ಮೀಟೂ ಆರೋಪ ಪದ ಹಿಂದೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. 
ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಪ್ರತೀ ಟ್ವೀಟ್ ಲೈಕ್ ಮಾಡುತ್ತಿದ್ದರು. ಇದೀಗ ಇದ್ದಕ್ಕಿದ್ದಂತೆ ಅರ್ಜುನ್ ಸರ್ಜಾ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಈ ಬದಲಾವಣೆಯೇಕಾಯಿತು?. ನನಗೆ ಗೊತ್ತಿರುವ ವ್ಯಕ್ತಿಯೊಬ್ಬರೊಂದಿಗೆ ಮಾತನಾಡಿದ್ದ ಚೇತರನ್, ಶತ್ರುಗಳ ಶತ್ರು ಸ್ನೇಹಿತರಾಗುತ್ತಾರೆಂದು ಹೇಳಿದ್ದಾರೆ. ಹೀಗಾಗಿಯೇ ಅವರು ಶ್ರುತಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆಂದು ತಿಳಿಸಿದ್ದಾರೆ. 
ನಾನು ಕೂಡ ಮಹಿಳಾಪರವಾದ ವ್ಯಕ್ತಿ. ಆದರೆ, ಶ್ರುತಿಯವರು ಪ್ರಚಾರಕ್ಕಾಗಿ ಮೀಟೂ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆರೋಪಗಳಿಂದ ಅರ್ಜುನ್ ಸರ್ಜಾ ಅವರು ಖಿನ್ನತೆಗೊಳಗಾಗಿದ್ದಾರೆ. ಅವರ ಕುಟುಂಬದ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಕೆಎಫ್'ಸಿಸಿ ಕಚೇರಿಗೆ ಎಂದಿಗೂ ಬಂದಿರಲಿಲ್ಲ. ಡಬ್ಬಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಗೆ ಬಂದಿದ್ದೆ. ಇಂದು ನಾನು ನನ್ನ ಗೆಳೆಯ ಅರ್ಜುನ್ ಗಾಗಿ ಇಲ್ಲಿಗೆ ಬಂದಿದ್ದೇನೆ. ಸತ್ಯವನ್ನು ಬಹಿರಂಗಪಡಿಸುವ ಸಲುವಾಗಿ ಬಂದಿದ್ದೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT