ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ರಾಮಚಂದ್ರನ್ 
ಸಿನಿಮಾ ಸುದ್ದಿ

'ಇನ್ಸ್ ಪೆಕ್ಟರ್ ವಿಕ್ರಮ್' ಸೆಟ್ ನಲ್ಲಿ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಮಾಡುತ್ತಿರೋದೇನು?

ಡೈನಾಮಿಕ್ ಹೀರೋ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಮುಂಬರುವ ಚಿತ್ರ "ಇನ್ಸ್ ಪೆಕ್ಟರ್ ವಿಕ್ರಮ್" ಒಂದಾದ ಬಳಿಕ ಇನ್ನೊಂದು ಅಚ್ಚರಿಯ ಕಾರಣಕ್ಕೆ ಸುದ್ದಿಯಾಗುತ್ತಿದೆ.

ಬೆಂಗಳೂರು: ಡೈನಾಮಿಕ್ ಹೀರೋ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಮುಂಬರುವ ಚಿತ್ರ "ಇನ್ಸ್ ಪೆಕ್ಟರ್ ವಿಕ್ರಮ್" ಒಂದಾದ ಬಳಿಕ ಇನ್ನೊಂದು ಅಚ್ಚರಿಯ ಕಾರಣಕ್ಕೆ ಸುದ್ದಿಯಾಗುತ್ತಿದೆ. ನರಸಿಂಹ ನಿರ್ದೇಶನದ ಈ ಚಿತ್ರವನ್ನು ವಿಖ್ಯಾತ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ಚಿತ್ರದಲ್ಲಿ ದರ್ಶನ್ ತೂಗುದೀಪ್ ಭಗತ್ ಸಿಂಗ್ ಹೆಸರಿನ ಅತಿಥಿ ಪಾತ್ರಧಾರಿಯಾಗಿದ್ದರೆ ರಮೇಶ್ ಅರವಿಂದ್ ಗೆ ನೆಗೆಟಿವ್ ಶೇಡ್ ಇರುವ ಪಾತ್ರ ದೊರಕಿದೆ.
ಈಗ ಬಂದಿರುವ ಹೊಸ ಸುದ್ದಿ ಏನೆಂದರೆ "ಇನ್ಸ್ ಪೆಕ್ಟರ್ ವಿಕ್ರಮ್" ನಲ್ಲಿ ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ರಾಮಚಂದ್ರ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಣಿಸಿರುವ ರಾಗಿಣಿಗೆ ಚಿತ್ರದಲಿ ಯಾವ ರೀತಿಯ ಪಾತ್ರ ನೀಡಲಾಗಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಅಂದ ಹಾಗೆಯೇ ಭಾವನಾ ಮೆನನ್ ಈ ಚಿತ್ರದ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೆಲವು ಚಿತ್ರ ನಿರ್ದೇಶಕರು ಈ ಜೋಡಿಯನ್ನು ಒಟ್ಟಾಗಿ ಕನ್ನಡ ಚಿತ್ರದಲ್ಲಿ ತೋರಿಸಬೇಕೆಂಡು ಬಯಸಿದ್ದರು. ಹಾಗೆಯೇ ಪ್ರಜ್ವಲ್ ದಂಪತಿಗಳು ಸಹ ತಾವು ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳುವ್ಯ್ದಕ್ಕೆ ಒಳ್ಳೆಯ ಅವಕಾಶಕ್ಕಾಗಿ ಹುಡುಕುತ್ತಿದ್ದರು ಎನ್ನಲಾಗಿದೆ.
ರಾಗಿಣಿ ನೃತ್ಯಪಟುವಾಗಿದ್ದು ಕೆಲವು ವಾಣಿಜ್ಯ ಜಾಹೀರಾತಿನಲ್ಲಿ ಸಹ ಅಭಿನಯಿಸಿದ್ದಾರೆ. ರಿಷಭ ಪ್ರಿಯ ಎನ್ನುವ ಸಂಗೀತ ಪ್ರಧಾನ ಕಿರುಚಿತ್ರದಲ್ಲಿ ಕಾಣಿಸಿಕೊಂಡಿರುವ ಈಕೆ ಈಗ ಪ್ರಜ್ವಲ್ ಅಭಿನಯದ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸುತ್ತಿದ್ದಾರೆ.
ಇನ್ಸ್ ಪೆಕ್ಟರ್ ವಿಕಮ್ ಗೆ ಅನೂಪ್ ಸೀಳನ್ ಸಂಗೀತ ನಿಡಿದ್ದು ಸತೀಶ್ ಹಾಗೂ ಶ್ರೀನಿವಾಸ್ ಕಲಾ ನಿರ್ದೇಶನ, ನವೀನ್ ಕುಮಾರ್ ಛಾಯಾಗ್ರಹಣ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT