ಹುಚ್ಚಾ ವೆಂಕಟ್ 
ಸಿನಿಮಾ ಸುದ್ದಿ

ಕುಡಿದು ಟೈಟಾಗಿ ನಡು ರಸ್ತೆಯಲ್ಲಿ ಹುಚ್ಚಾ ವೆಂಕಟ್ ಹುಚ್ಚಾಟ, ಅಸಲಿಗೆ ಆಗಿದ್ದೇನು!

ತಮ್ಮ ಖಡಕ್ ಡೈಲಾಗ್ ಗಳಿಂದ ಅಭಿಮಾನಿಗಳಿಗೆ ಹತ್ತಿರವಾಗಿದ್ದ ಹುಚ್ಚಾ ವೆಂಕಟ್ ಕಂಠಪೂರ್ತಿ ಕುಡಿದು ಟೈಟಾಗಿ ನಗರದ ಜ್ಞಾನಭಾರತಿ ಕ್ಯಾಂಪಸ್ ನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಹುಚ್ಚಾಟ ಮೆರೆದಿದ್ದಾರೆ....

ಬೆಂಗಳೂರು: ತಮ್ಮ ಖಡಕ್ ಡೈಲಾಗ್ ಗಳಿಂದ ಅಭಿಮಾನಿಗಳಿಗೆ ಹತ್ತಿರವಾಗಿದ್ದ ಹುಚ್ಚಾ ವೆಂಕಟ್ ಕಂಠಪೂರ್ತಿ ಕುಡಿದು ಟೈಟಾಗಿ ನಗರದ ಜ್ಞಾನಭಾರತಿ ಕ್ಯಾಂಪಸ್ ನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಹುಚ್ಚಾಟ ಮೆರೆದಿದ್ದಾರೆ. 
ಬಾರ್ ವೊಂದರಲ್ಲಿ ಕುಡಿದು ಹೊರ ಬರುತ್ತಿದ್ದ ಹುಚ್ಚಾ ವೆಂಕಟ್ ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ಯುವಕರ ಜೊತೆ ಸೆಲ್ಫಿಗೆ ಪೋಸ್ ಕೊಟ್ಟ ಹುಚ್ಚಾ ವೆಂಕಟ್ ರಸ್ತೆಯಲ್ಲೇ ಹುಚ್ಚಾಟ ಮುಂದುವರೆಸಿದ್ದರು. ವೆಂಕಟ್ ನ ಹುಚ್ಚಾಟ ನೋಡಲು ಸ್ಥಳೀಯರು ಮುಗಿಬಿದ್ದಿದ್ದರು. 
ಹುಚ್ಚಾ ವೆಂಕಟ್ ಕುಡಿದ ಮತ್ತಿನಲ್ಲಿ ಕೈಯಲ್ಲಿ ಕೂಲ್ ಡ್ರಿಂಕ್ಸ್ ಬಾಟಲ್ ಹಿಡಿದುಕೊಂಡು ತೂರಾಟ ನಡೆಸಿದ್ದು ಅಲ್ಲದೇ ಮೈಮೇಲಿನ ಬಟ್ಟೆಗಳನ್ನು ತಾನೇ ಕೊಳೆ ಮಾಡಿಕೊಂಡು ಕುಡುಕರಂತೆ ವರ್ತಿಸಿದ್ದಾರೆ. 
ಕೊನೆಗೆ ಸ್ಥಳೀಯರೇ ಆಟೋ ಹತ್ತಿಸಿ ಹುಚ್ಚಾ ವೆಂಕಟ್ ನನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜೈಪುರ: ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಎಂಟು ರೋಗಿಗಳು ಸಜೀವ ದಹನ, ಮೂವರ ಸ್ಥಿತಿ ಗಂಭೀರ

Bihar Assemebly Election: ಚುನಾವಣಾ ಆಯೋಗದಿಂದ ಸಂಜೆ 4 ಗಂಟೆಗೆ ಮುಹೂರ್ತ ಫಿಕ್ಸ್ !

ಹೈಕೋರ್ಟ್ ಚಾಟಿ, ಜಿಲ್ಲಾಡಳಿತದ ಖಡಕ್ ವಾರ್ನಿಂಗ್: ಕೊನೆಗೂ Sambhal ಮಸೀದಿ ತೆರವು ಮಾಡಿದ 'ಮುಸ್ಲಿಮರು'

'ಶಾಂತಿ ಇದೆ, ಕ್ರಾಂತಿ ಎಲ್ಲಿದೆ? ನಾವೆಲ್ಲರೂ ಶಾಂತಿ ಪ್ರಿಯರು'; ಸಿಎಂ ಬದಲಾವಣೆ ವಿಚಾರ 'ಅಪ್ರಸ್ತುತ': ಬಸವರಾಜ ರಾಯರೆಡ್ಡಿ

ಯಾರು ಎಷ್ಟೇ ವಿರೋಧಿಸಿದರೂ ಸಮೀಕ್ಷೆ ನಡೆಯುತ್ತದೆ, ಎಲ್ಲರೂ ಸಹಕರಿಸಿ: DCM ಡಿಕೆ ಶಿವಕುಮಾರ್ ಮನವಿ

SCROLL FOR NEXT