ಗಂಧದ ಗುಡಿ ಪೋಸ್ಟರ್ 
ಸಿನಿಮಾ ಸುದ್ದಿ

ಗಂಧದಗುಡಿ ಸಿನಿಮಾ ರಿ-ರಿಲೀಸ್: ವೀಕ್ಷಿಸದಿರಲು ಡಾ.ವಿಷ್ಣು ಅಭಿಮಾನಿಗಳು ನಿರ್ಧರಿಸಿರುವುದು ಏಕೆ?

ರು: ಡಾ.ರಾಜ್ ಕುಮಾರ್ ಮತ್ತು ಡಾ, ವಿಷ್ಣುವರ್ಧನ್ ಅಭಿನಯದ ಗಂಧದ ಗುಡಿ ಸಿನಿಮಾ ಈ ವಾರ ಮತ್ತೆ ಥಿಯೇಟರ್ ಗಳಲ್ಲಿ ರಿ ರಿಲೀಸ್ ಆಗುತ್ತಿದೆ, ಆದರೆ...

ಬೆಂಗಳೂರು: ಡಾ.ರಾಜ್ ಕುಮಾರ್ ಮತ್ತು ಡಾ, ವಿಷ್ಣುವರ್ಧನ್ ಅಭಿನಯದ ಗಂಧದ ಗುಡಿ ಸಿನಿಮಾ ಈ ವಾರ ಮತ್ತೆ ಥಿಯೇಟರ್ ಗಳಲ್ಲಿ ರಿ ರಿಲೀಸ್ ಆಗುತ್ತಿದೆ, ಆದರೆ  ಡಾ. ವಿಷ್ಣು ವರ್ಧನ್ ಅಭಿಮಾನಿಗಳು ಗಂಧದಗುಡಿ ಸಿನಿಮಾ ನೋಡದಿರಲು ನಿರ್ಧರಿಸಿದ್ದಾರೆ.
ಸಿನಿಮಾ ಬಿಡುಗಡೆಗೆ ನಮ್ಮ ವಿರೋಧವಿಲ್ಲ, ಆದರೆ ನಮ್ಮ ಮೆಚ್ಚಿನ ಸ್ಟಾರ್ ನನ್ನು  ವಿಲ್ಲನ್ ರೋಲ್ ನಲ್ಲಿ ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, 1973 ರಲ್ಲಿ ಗಂಧದ ಗುಡಿ ಸಿನಿಮಾ  ರಿಲೀಸ್ ಆಗಿತ್ತು, ಆದರೆ ಆ ವೇಳೆ ವಿಷ್ಣುವರ್ಧನ್ ಅವರಿಗೆ ಇಷ್ಟು ಪ್ರಮಾಣದಲ್ಲಿ ಅಭಿಮಾನಿಗಳು ಇರಲಿಲ್ಲ. 
ಡಾ.ರಾಜ್ ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ನಡುವೆ ಫೈಟಿಂಗ್ ದೃಶ್ಯಗಳಿವೆ, ನಾವು ಅಭಿಮಾನಿಗಳಾಗಿ ಅದನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಎರಡನೇಯದಾಗಿ ಡಾ.ರಾಜ್ ಮತ್ತು ವಿಷ್ಣುವರ್ಧನ್ ಅಭಿಮಾನಿಗಳ ಘರ್ಷಣೆಗೆ ಕಾರಣವಾಗಬಹುದು, ಅದನ್ನು  ತಪ್ಪಿಸಲು ನಾವು ಬಯಸುತ್ತೇವೆ,  ಹೀಗಾಗಿ ನಾವು ಸಿನಿಮಾ ನೋಡದಿರಲು ನಿರ್ಧರಿಸಿದ್ದೇವೆ ಎಂದು ವಿಷ್ಣು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. 
ಧೀರಜ್ ಪಿಕ್ಚರ್ಸ್ ಸಿನಿಮಾ ಹಂಚಿಕೆ ಮಾಡಿದ್ದು, ಗತಕಾಲದ ಸಿನಿಮಾವನ್ನು ಸುಮಾರು 200 ಥಿಯೇಟರ್ ಗಳಲ್ಲಿ ರಿಲೀಸ್ ಆಗುತ್ತಿದೆ. ಬ್ಲ್ಯಾಕ್ ಬಸ್ಟರ್ ಸಿನಿಮಾವಾಗಿದ್ದು ಬಹಳ ದೀರ್ಘಕಾಲದಿಂದ ಯೋಜಿಸಲಾಗಿತ್ತು, ಹೀಗಾಗಿ ಗಣೇಶ ಹಬ್ಬದಂದು ರಿಲೀಸ್ ಗೆ  ನಿರ್ಧರಿಸಲಾಗಿದೆ. ಜೊತೆಗೆ ಆನ್ ಲೈನ್ ನಲ್ಲೂ ಸಿನಿಮಾ ದೊರೆಯುತ್ತದೆ, ಆದರೆ ಥಿಯೇಟರ್  ನಲ್ಲಿ ನೋಡುವುದಕ್ಕೆ ತುಂಬಾ ವ್ಯತ್ಯಾಸವಿದೆ, ಸಿನಿಮಾಗೆ ಡಿಟಿಎಸ್ ವ್ಯವಸ್ಥೆ ನೀಡಲಾಗಿದೆ. ಇಬ್ಬರು ಸ್ಟಾರ್ ನಟರಿಗೆ ಅರ್ಪಿಸಲಾಗುತ್ತಿದೆ ಎಂದು ಹಂಚಿಕೆದಾರರು ತಿಳಿಸಿದ್ದಾರೆ,ಎಂ,ಪಿ ಶಂಕರ್  ನಿರ್ಮಾಣ ಮಾಡಿದ್ದು, ಕಲ್ಪನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT