ಸಿನಿಮಾ ಸುದ್ದಿ

ನವ ನಿರ್ದೇಶಕನ ಕನಸಿಗೆ ಸಾಥ್ ನೀಡಿದ ಕ್ರೇಜಿಸ್ಟಾರ್ ಪುತ್ರ ಮನೋರಂಜನ್

Vishwanath S
ನವ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸುವ ಮೂಲಕ ನಿರ್ದೇಶಕರ ಕನಸು ಸಾಕಾರಗೊಳ್ಳಲು ಸಹಕರಿಸುತ್ತಿರುವ ಮನೋರಂಜನ್ ರವಿಚಂದ್ರನ್ ಇದೀಗ ಮತ್ತೊಬ್ಬ ನವ ನಿರ್ದೇಶಕನ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. 
ನವ ನಿರ್ದೇಶಕ ಮನು ಎಂಬುವರು ಮುಂದಿನ ನಿಲ್ದಾಣ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಈ ಚಿತ್ರದಲ್ಲಿ ಮನೋರಂಜನ್ ನಾಯಕನಾಗಿ ನಟಿಸುತ್ತಿದ್ದಾರೆ. ಮನು ಸ್ವತಂತ್ರ ನಿರ್ದೇಶಕರಾಗುವ ಮೊದಲು ಸಂಭಾಷಣೆ, ಕಥೆ ಮತ್ತು ಚಿತ್ರಕಥೆ ಬರೆಯುತ್ತಿದ್ದರು. 
ಮನೋರಂಜನ್ ಸದ್ಯ ನವ ನಿರ್ದೇಶಕರ ಚಿಲ್ಲುಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಮುಂದಿನ ನಿಲ್ದಾಣ ಚಿತ್ರಕ್ಕೂ ಸಹಿ ಮಾಡಿದ್ದಾರೆ. 
ಮುಂದಿನ ನಿಲ್ದಾಣ ಚಿತ್ರವನ್ನು ಮನು ಸಹೋದರ ಜಗದೀಶ್ ಎಂಬುವರು ನಿರ್ಮಾಣ ಮಾಡುತ್ತಿದ್ದಾರೆ. ಮೈಸೂರು, ಬಳ್ಳಾರಿ ಚಿಕ್ಕಮಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ.
SCROLL FOR NEXT