ಕಿರುತೆರೆ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ನಟಿ ಅದಿತಿ ಪ್ರಭುದೇವ, ಕನ್ನಡ ಸಿನಿಮಾರಂಗದಲ್ಲಿ ಕೈ ತುಂಬಾ ಸಿನಿಮಾಗಳಿರುವ ನಟಿ, ತಮ್ಮ ಅತ್ಯುತ್ತಮವಾದ ಕೆಲಸದ ಮೂಲಕ ನಿರ್ದೇಶಕರ ಗಮನ ಸೆಳೆದಿರುವ ಅದಿತಿ, ಸಿಂಗ ನಂತರ ಉದಯ್ ಕೆ ಮಹ್ತಾ ಅವರ ಬ್ರಹ್ಮಾಚಾರಿ ಸಿನಿಮಾದಲ್ಲಿ ನೀನಾಸಂ ಸತೀಶ್ ಗೆ ಜೋಡಿಯಾಗುತ್ತಿದ್ದಾರೆ.
ಏಪ್ರಿಲ್ 14 ರಂದು ಸಿನಿಮಾ ಮೂಹೂರ್ಥ ನಡೆಯಲಿದ್ದು, ಅದಾದ ನಂತರ ಸಿನಿಮಾ ಶೂಟಿಂಗ್ ಆರಂಭವಾಗಲಿದೆ, ಸಿಂಗದಲ್ಲಿ ಆಕೆಯ ಉತ್ತಮ ಕೆಲಸ ನೋಡಿ, ತಮ್ಮ ಮುಂದಿನ ಚಿತ್ರಕ್ಕೆ ಆಕೆಯೇ ಬೆಸ್ಟ್ ಎಂದು ನಿರ್ಧರಿಸಿದರಂತೆ, ಸತೀಶ್ ಗೆ ನಾಯಕಿಯಾಗಿ ಅದಿತಿ ಬೆಸ್ಟ್ ಎಂದು ಹೇಳಿದ್ದಾರೆ. ನಿರ್ಮಾಪಕರ ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ,
ಸಿಂಗ ಹೊರತು ಪಡಿಸಿ ಅದಿತಿ ಪ್ರಭುದೇವ ಕೈಯ್ಯಲ್ಲಿ ಹಲವು ಸಿನಿಮಾಗಳಿವೆ, ಆಪರೇಷನ್ ನಕ್ಷತ್ರ, ರಂಗನಾಯಕಿ, ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.