ಸಿನಿಮಾ ಸುದ್ದಿ

ರಕ್ಷಿತ್ ಶೆಟ್ಟಿ ನಿರ್ದೇಶನದ 'ಪುಣ್ಯಕೋಟಿ'ಗೆ ಚರಣ್ ರಾಜ್, ಕರ್ಮ್ ಚಾವ್ಲಾ

Srinivas Rao BV
ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ ಸಿನಿಮಾಗಳ ಕೆಲಸದಲ್ಲಿ ಈಗಾಗಲೇ ಕಾರ್ಯನಿರತರಾಗಿರುವ ರಕ್ಷಿತ್ ಶೆಟ್ಟಿ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಳ್ಳುವ ಸಿದ್ಧತೆ ನಡೆಸಿದ್ದಾರೆ. 
ಪುಣ್ಯಕೋಟಿ ಕಥೆಗೆ ಮನುಷ್ಯ ರೂಪ ನೀಡಿ ತೆರೆ ಮೇಲೆ ತರಲು ರಕ್ಷಿತ್ ಶೆಟ್ಟಿ ಯೋಜನೆ ರೂಪಿಸಿದ್ದು, ಈ ಸಿನಿಮಾಗೆ ನಿರ್ದೇಶಕನ ಕ್ಯಾಪ್ ಧರಿಸಲಿದ್ದಾರೆ. 
ಅವನೇ ಶ್ರೀಮನ್ನಾರಾಯಣ ಚಿತ್ರತಂಡದ ಬಹುತೇಕರು ಪುಣ್ಯಕೋಟಿ ಚಿತ್ರದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.  ಸಂಗೀತ ನಿರ್ದೇಶಕ ಚರಣ್ ರಾಜ್ ಹಾಗೂ ಸಿನಿಮೆಟ್ರೋಗ್ರಾಫರ್ ಕರ್ಮ್ ಚಾವ್ಲಾ ರಕ್ಷಿತ್ ಶೆಟ್ಟಿ ಜೊತೆಗೆ ಪುಣ್ಯಕೋಟಿ ಚಿತ್ರಕ್ಕೆ ಕೆಲಸ ಮಾಡಲಿದ್ದಾರೆ. 
ಈ ಚಿತ್ರವನ್ನು ಕನ್ನಡ ಹಾಗೂ ಇನ್ನಿತರ ಹಲವು ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಜನೆ ಹೊಂದಿದ್ದಾರೆ ರಕ್ಷಿತ್ ಶೆಟ್ಟಿ. 2020 ಕ್ಕೆ ಪುಣ್ಯಕೋಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ. 
SCROLL FOR NEXT