ಅಕ್ಷತಾ ಶ್ರೀನಿವಾಸ್ 
ಸಿನಿಮಾ ಸುದ್ದಿ

'ಬ್ರಹ್ಮಚಾರಿ' ನನಗಾಗಿ ಮತ್ತೆ ಮಾಡುತ್ತಿರುವ ಸಿನಿಮಾದಂತಿದೆ: ಅಕ್ಷತಾ ಶ್ರೀನಿವಾಸ್

ಹೊಸ ಹಿರೋಯಿನ್ ಅಕ್ಷತಾ ಶ್ರೀನಿವಾಸ್ ಗೆ ಡಬಲ್ ದಮಾಕಾ, ಮಂಗಳೂರಿನ ಚೆಲುವೆ ಏಕಕಾಲದಲ್ಲಿ ಎರಡು ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ.

ಹೊಸ ಹಿರೋಯಿನ್ ಅಕ್ಷತಾ ಶ್ರೀನಿವಾಸ್ ಗೆ ಡಬಲ್  ದಮಾಕಾ, ಮಂಗಳೂರಿನ ಚೆಲುವೆ ಏಕಕಾಲದಲ್ಲಿ ಎರಡು ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರ ಮುಂದಿನ ಸಿನಿಮಾ ಶಿವ ತೇಜಸ್ಸು ಸಿನಿಮಾದ ಅಡಿಷನ್ ನಲ್ಲಿ ಪಾಲ್ಗೊಂಡಿದ್ದ ಅಕ್ಷತಾ ಅಲ್ಲಿ ಅವಕಾಶ ಪಡೆಯುವುದರ ಜೊತೆಗೆ ಬ್ರಹ್ಮಾಚಾರಿ ಸಿನಿಮಾ ನಿರ್ಮಾಪಕರ ಗಮನ ಸೆಳೆದಿದ್ದಾರೆ.

ಚಂದ್ರ ಮೋಹನ್ ನಿರ್ದೇಶನದ ಬ್ರಹ್ಮಚಾರಿ 100  ಪರ್ಸೆಂಟ್ ವರ್ಜಿನ್ ಚಿತ್ರಕ್ಕಾಗಿ ಎರಡನೇ ಹಿರೋಯಿನ್ ಹುಡುಕಾಟ ನಡೆಸುತ್ತಿದ್ದ ತಂಡಕ್ಕೆ ಅಕ್ಷತಾ ಪಿಟ್ ಎನಿಸಿದ್ದಾರೆ.ಇದರಿಂದ ಎಕ್ಸೈಟ್ ಆಗಿರುವ ಅಕ್ಷತಾ ಶ್ರೀನಿವಾಸ್, ಪರಸಂಗ ಸಿನಿಮಾ ಮೂಲಕ  ಸಿನಿಮಾ ವೃತ್ತಿ ಆರಂಭಿಸಿದೆ. ಬ್ರಹ್ಮಾಚಾರಿ  ನನಗಾಗಿ ಮತ್ತೆ ಮಾಡುತ್ತಿರುವ ಸಿನಿಮಾದಂತಿದೆ ಎಂದು ಹೇಳಿದರು.ಈ ಸಿನಿಮಾದಲ್ಲಿ ಸತೀಶ್ ನೀನಾಸಂ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಉದಯ್ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿ ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ದತ್ತಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ದಿನ ಶಿವ ತೇಜಸ್ಸು ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡರೆ ಮೂರು ದಿನ ಬ್ರಹ್ಮಚಾರಿ ಚಿತ್ರದ ಚಿತ್ರೀಕರಣ ಮುಗಿಸಿರುವುದಾಗಿ ತಿಳಿಸಿದ್ದಾರೆ. ಮಂಗಳೂರಿನಿಂದ ಈಗ ಬೆಂಗಳೂರಿಗೆ ಅಕ್ಷತಾ ಶ್ರೀನಿವಾಸ ಸ್ಥಳಾಂತರವಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT