ವಾಣಿ ಹರಿಕೃಷ್ಣ 
ಸಿನಿಮಾ ಸುದ್ದಿ

ದಾಂಪತ್ಯದಲ್ಲಿ ಬಿರುಕು ವದಂತಿ: ತಮ್ಮ ಫೇಸ್‍ಬುಕ್‍ ಪೋಸ್ಟ್ ಕುರಿತು ಕೊನೆಗೂ ವಾಣಿ ಹರಿಕೃಷ್ಣ ಸ್ಪಷ್ಟನೆ!

ಸ್ಯಾಂಡಲ್ವುಡ್ ನ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ವಾಣಿ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎಂದೆಲ್ಲಾ ಮಾಧ್ಯಮಗಳಲ್ಲಿ ಹಬ್ಬಿದ ಸುದ್ದಿಗಳಿಗೆ ಇದೀಗ ಸ್ಪಷ್ಟಿಕರಣ ಸಿಕ್ಕಿದೆ.

ಬೆಂಗಳೂರು: ಸ್ಯಾಂಡಲ್ವುಡ್ ನ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ವಾಣಿ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎಂದೆಲ್ಲಾ ಮಾಧ್ಯಮಗಳಲ್ಲಿ ಹಬ್ಬಿದ ಸುದ್ದಿಗಳಿಗೆ ಇದೀಗ ಸ್ಪಷ್ಟಿಕರಣ ಸಿಕ್ಕಿದೆ. 
ಕೆಲ ದಿನಗಳ ಹಿಂದೆ ವಾಣಿ ಹರಿಕೃಷ್ಣ ಅವರ ಫೇಸ್‍ಬುಕ್‍ ಪೋಸ್ಟ್ ಒಂದು ಗಾಂಧೀನಗರದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದೇ ವಿಚಾರವನ್ನು ಪ್ರಸ್ತಾಪಿಸಿ ಮಾಧ್ಯಮಗಳು ಹರಿಕೃಷ್ಣ ಮತ್ತು ವಾಣಿ ದಂಪತಿ ನಡುವೆ ಮನಸ್ಥಾಪ ಉಂಟಾಗಿದೆ ಎಂದು ವರದಿ ಮಾಡಿದ್ದವು. ಇದಕ್ಕೆ ನಿನ್ನೆ ಸ್ವತಃ ಹರಿಕೃಷ್ಣ ಅವರೇ ಸ್ಪಷ್ಟನೆ ನೀಡಿದ್ದರು. 
ಈಗ ತಮ್ಮ ಫೇಸ್‍ಬುಕ್‍ ಪೋಸ್ಟ್ ಕುರಿತು ಎದ್ದಿದ್ದ ವದಂತಿಗೆ ವಾಣಿ ಹರಿಕೃಷ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಸಂಸಾರ ಚೆನ್ನಾಗಿಯೇ ಇದೆ. ನಾನು ಮತ್ತು ನನ್ನ ಗಂಡ ಹರಿಕೃಷ್ಣ ಮಧ್ಯೆ ಯಾವುದೇ ಮನಸ್ಥಾಪ ಇಲ್ಲ. ನನ್ನ ಫೇಸ್‍ಬುಕ್‍ ಪೋಸ್ಟ್ ಕೇವಲ ಹಾಡಿಗೆ ಸಂಬಂಧಿಸಿದ್ದು ಅಷ್ಟೇ ಎಂದು ಹೇಳಿದ್ದಾರೆ.
ಕುರುಕ್ಷೇತ್ರ ಮತ್ತು ರಾಂಧವ ಚಿತ್ರಗಳಲ್ಲಿ ಮೊದಲು ನನ್ನನ್ನು ಹಾಡಿಸಲಾಗಿತ್ತು. ನಂತರ ಬೇರೆ ಗಾಯಕಿಯರಿಂದ ಹಾಡಿಸಿದ್ದಾರೆ. ಈ ಕಾರಣಕ್ಕೆ ನನಗೆ ಬಹಳ ಬೇಸರವಾಗಿದೆ. ನಾನು ಮಾಡಿರುವ ಫೇಸ್‍ಬುಕ್‍ ಪೋಸ್ಟ್ ಅದಕ್ಕೆ ಸಂಬಂಧಿಸಿದ್ದು ಅದನ್ನು ನೋಡಿದ ಯಾರಿಗಾದರೂ ಅದು ಅರಿವಾಗುವಂತಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT